Headlines

ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷವಿದೆಯೆಂದು ವಾಪಸ್‌ ಕಳಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ | Bjp Mla Ck Ramamurthy Sends Back Surveyors Over Caste Census Confusion Gow

ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷವಿದೆಯೆಂದು ವಾಪಸ್‌ ಕಳಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ | Bjp Mla Ck Ramamurthy Sends Back Surveyors Over Caste Census Confusion Gow



ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷವಿದೆಯೆಂದು ವಾಪಸ್‌ ಕಳಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ | Bjp Mla Ck Ramamurthy Sends Back Surveyors Over Caste Census Confusion Gow

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷಗಳಿವೆ ಎಂದು ಗಣತಿದಾರರನ್ನು ವಾಪಸ್ ಕಳುಹಿಸಿದ್ದಾರೆ. ಈ ಘಟನೆಯು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಹಿಂದುಳಿದ ವರ್ಗಗಳ ಆಯೋಗವು ಇದನ್ನು ಅಸಹಕಾರ ಎಂದು ಕರೆದಿದೆ. 

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಕಾರ್ಯದಲ್ಲಿ ಗೊಂದಲದ ಹಿನ್ನೆಲೆ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಗಣತಿದಾರರನ್ನು ಪ್ರಶ್ನಾವಳಿಯ ದೋಷಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿ ವಾಪಸ್ ಕಳುಹಿಸಿದ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಈ ಕ್ರಮವು ಸರ್ಕಾರದ ಸಮೀಕ್ಷಾ ಕಾರ್ಯದ ವೇಗ ಮತ್ತು ಸಮಯಪಾಲನೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಘಟನೆಯ ವಿವರಗಳ ಪ್ರಕಾರ, ಜಾತಿಗಣತಿಗಾಗಿ ಶಾಸಕರ ನಿವಾಸಕ್ಕೆ ಬಂದ ಗಣತಿದಾರರಿಗೆ ಸಿ.ಕೆ. ರಾಮಮೂರ್ತಿ ಅವರು ಪ್ರಶ್ನಾವಳಿಯಲ್ಲಿನ ಸುಮಾರು 60 ಪ್ರಶ್ನೆಗಳು ತಪ್ಪಾಗಿವೆ ಅಥವಾ ಅವೈಜ್ಞಾನಿಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ಪ್ರಶ್ನೆಗಳನ್ನು ಸರಿಪಡಿಸಿಕೊಂಡು ನಂತರ ಮಾತ್ರ ಸರ್ವೆಗೆ ಬರುವಂತೆ ಸೂಚಿಸಿ ಅವರನ್ನು ವಾಪಸ್ ಕಳುಹಿಸಿದರು. ಅವೈಜ್ಞಾನಿಕ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಶಾಸಕ ಸ್ಪಷ್ಟಪಡಿಸಿದರೆಂದು ಮೂಲಗಳು ತಿಳಿಸಿವೆ. 

ಸೈಲೆಂಟ್‌ ಆದ ಡಿಕೆಶಿ

ಈ ಕುರಿತಾಗಿ ಪತ್ರಕರ್ತರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಕೈಯಾಡಿಸಿ ಸ್ಥಳದಿಂದ ತೆರಳಿದರು. ಈ ನಿಲುವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಮೀಕ್ಷೆಗೆ ಅಸಹಕಾರ ತೋರುವುದು ಸರಿಯಲ್ಲ

ಈ ನಡುವೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿ, ಜನಪ್ರತಿನಿಧಿಗಳು ಈ ರೀತಿಯಾಗಿ ಸಮೀಕ್ಷೆಗೆ ಅಸಹಕಾರ ತೋರುವುದು ರಾಜಕೀಯ ಉದ್ದೇಶಿತ ಕ್ರಮವಲ್ಲದೆ ಇನ್ನೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಶ್ನಾವಳಿಯಲ್ಲಿರುವ ಯಾವುದೇ ಪ್ರಶ್ನೆಯೂ ಖಾಸಗಿ ಮಾಹಿತಿಗೆ ಧಕ್ಕೆ ತರುವಂತಿಲ್ಲ. ಜನರು ಮತ್ತು ನಾಯಕರೂ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿ, ಈ ರೀತಿಯ ಅಸಹಕಾರದ ನಿಲುವುಗಳೇ ಸಮೀಕ್ಷಾ ಕಾರ್ಯ ನಿಗದಿತ ಅವಧಿಯಲ್ಲಿ ಮುಗಿಯದಿರುವ ಪ್ರಮುಖ ಕಾರಣಗಳು ಎಂದು ಅಭಿಪ್ರಾಯಪಟ್ಟರು. ಸರ್ಕಾರ ಈಗಾಗಲೇ ಗಣತಿ ಕಾರ್ಯಕ್ಕೆ ಹತ್ತು ದಿನಗಳ ಹೆಚ್ಚುವರಿ ಅವಧಿ ನೀಡಿದ್ದು, ಈ ಸಮಯದಲ್ಲಿ ರಾಜ್ಯದಾದ್ಯಂತ ಗಣತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮಧುಸೂದನ್ ನಾಯಕ್ ತಿಳಿಸಿದರು.

ರಾಜ್ಯದಾದ್ಯಂತ ನಡೆಯುತ್ತಿರುವ ಜಾತಿಗಣತಿ ಕಾರ್ಯಕ್ರಮ ಈಗ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು, ಶಾಸಕ ಸಿ.ಕೆ. ರಾಮಮೂರ್ತಿ ಅವರ ಈ ನಡೆ ರಾಜಕೀಯ ಹಾಗೂ ಆಡಳಿತಾತ್ಮಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಸರ್ಕಾರದ ಗಣತಿ ಪ್ರಕ್ರಿಯೆಯ ದೋಷಗಳು ಹಾಗೂ ಜನಪ್ರತಿನಿಧಿಗಳ ನಿಲುವುಗಳ ಕುರಿತು ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.



Source link

Leave a Reply

Your email address will not be published. Required fields are marked *