ಬಾಂಗ್ಲಾದಲ್ಲಿ ಹಿಂದು ವ್ಯಾಪಾರಿ ಹತ್ಯೆ – ಚುನಾವಣೆಗೆ 48 ಗಂಟೆಗಳ ಮೊದಲು ಕೃತ್ಯ-ಅಂಗಡಿಯಲ್ಲಿ ಇದ್ದಾಗ ಇರಿದು ಕೊಲೆ | Hindu Trader Killed In Bangladesh

ಬಾಂಗ್ಲಾದಲ್ಲಿ ಹಿಂದು ವ್ಯಾಪಾರಿ ಹತ್ಯೆ – ಚುನಾವಣೆಗೆ 48 ಗಂಟೆಗಳ ಮೊದಲು ಕೃತ್ಯ-ಅಂಗಡಿಯಲ್ಲಿ ಇದ್ದಾಗ ಇರಿದು ಕೊಲೆ | Hindu Trader Killed In Bangladesh



ಬಾಂಗ್ಲಾದಲ್ಲಿ ಹಿಂದು ವ್ಯಾಪಾರಿ ಹತ್ಯೆ – ಚುನಾವಣೆಗೆ 48 ಗಂಟೆಗಳ ಮೊದಲು ಕೃತ್ಯ-ಅಂಗಡಿಯಲ್ಲಿ ಇದ್ದಾಗ ಇರಿದು ಕೊಲೆ | Hindu Trader Killed In Bangladesh

ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧ ಮುಂದುವರಿದಿದೆ. ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಹಿಂದು ಉದ್ಯಮಿಯೊಬ್ಬರನ್ನು ಅವರ ಅಂಗಡಿಯೊಳಗೆ ನುಗ್ಗಿ ಇರಿದು ಕೊಲೆ ಮಾಡಲಾಗಿದೆ. ಚುನಾವಣೆಗೆ 48 ಗಂಟೆಗಳ ಮೊದಲು ಈ ಕೃತ್ಯ ನಡೆದಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧ ಮುಂದುವರಿದಿದೆ. ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಹಿಂದು ಉದ್ಯಮಿಯೊಬ್ಬರನ್ನು ಅವರ ಅಂಗಡಿಯೊಳಗೆ ನುಗ್ಗಿ ಇರಿದು ಕೊಲೆ ಮಾಡಲಾಗಿದೆ. ಚುನಾವಣೆಗೆ 48 ಗಂಟೆಗಳ ಮೊದಲು ಈ ಕೃತ್ಯ ನಡೆದಿದೆ.

ಶವವನ್ನು ಒಳಗೆ ಬಿಟ್ಟು ಸ್ಥಳದಿಂದ ಪರಾರಿ

ಮೃತರನ್ನು ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ (62) ಎಂದು ಗುರುತಿಸಲಾಗಿದೆ. ಅವರು ಕೃತ್ಯ ನಡೆದ ತ್ರಿಶಾಲ್ ಉಪಜಿಲ್ಲೆಯ ಪ್ರದೇಶದ ಸೌತ್‌ಕಂಡ ಗ್ರಾಮದ ನಿವಾಸಿಯಾಗಿದ್ದರು.ಸೋಮವಾರ ರಾತ್ರಿ 11.00 ಗಂಟೆ ಸುಮಾರಿಗೆ ಸರ್ಕಾರ್ ಅಂಗಡಿಯೊಳಗೆ ಇದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಕೊಲೆಯ ನಂತರ, ದುಷ್ಕರ್ಮಿಗಳು ಶಟರ್ ಕೆಳಕ್ಕೆ ಎಳೆದು, ಶವವನ್ನು ಒಳಗೆ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಗುರುತಿಸಲು ಮತ್ತು ಬಂಧಿಸಲು ತನಿಖೆ

ತ್ರಿಶಾಲ್ ಪೊಲೀಸ್ ಠಾಣಾಧಿಕಾರಿ-ಪ್ರಭಾರಿ ಮುಹಮ್ಮದ್ ಫಿರೋಜ್ ಹೊಸೇನ್ ಘಟನೆಯನ್ನು ದೃಢಪಡಿಸಿದ್ದು, ಭಾಗಿಯಾಗಿರುವವರನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ, ಮತ್ತು ಎಲ್ಲಾ ಸಂಭಾವ್ಯ ಕೋನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ವಿರೋಧಿ ಮೂಲಭೂತವಾದಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಹತ್ಯೆ ಬಳಿಕ ಕಳೆದ ಕೆಲವು ತಿಂಗಳುಗಳಿಂದ, ಬಾಂಗ್ಲಾದೇಶವು ಹಿಂದುಗಳನ್ನು ಗುರಿಯಾಗಿಸಿಕೊಂಡು ದಾಳಿಯ ಸರಣಿಯನ್ನೇ ಕಂಡಿದೆ.



Source link

Leave a Reply

Your email address will not be published. Required fields are marked *