ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು | Bagalkot Young Lovers Surrenders To Death Over Trivial Reasons

ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು | Bagalkot Young Lovers Surrenders To Death Over Trivial Reasons



ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು | Bagalkot Young Lovers Surrenders To Death Over Trivial Reasons

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ, ಕ್ಷುಲ್ಲಕ ಜಗಳದ ನಂತರ ಮನನೊಂದು ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ. ಯುವತಿ ಆತ್ಮ*ಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಯುವಕನೂ ಸಾವಿಗೆ ಶರಣಾಗಿದ್ದಾನೆ.

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು

ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ರಬಕವಿ ಬನಹಟ್ಟಿ ತಾಲೂಕಿ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ. ಸಾವಿಗೀಡಾದ ಪ್ರೇಮಿಗಳನ್ನು 19 ವರ್ಷದ ಪವಿತ್ರಾ ಹಾಗೂ 20 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ.

ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಪ್ರೇಮಿಯ ಜೊತೆ ಜಗಳದ ನಂತರ ಮನನೊಂದು ಪವಿತ್ರಾ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಈ ವಿಚಾರ ತಿಳಿದು ಆಘಾತಕ್ಕೀಡಾದ ಕಾರ್ತಿಕ್ ಕೂಡ ಬಳಿಕ ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಿವೋರ್ಸ್‌ ಪಡೆದ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದ ಯುವತಿಯ ಮಾವ



Source link

Leave a Reply

Your email address will not be published. Required fields are marked *