Chanakya Niti: ಈ ಐವರನ್ನು ಅರೆನಿದ್ದೆಯಿಂದ ಎಬ್ಬಿಸಿದ್ರೆ ನಿಮ್ಕತೆ ಮುಗೀತು ಅನ್ನುತ್ತೆ ಚಾಣಕ್ಯ ನೀತಿ | Dont Wake Up These 5 People From Half Sleep According To Chanakya Niti Bni

Chanakya Niti: ಈ ಐವರನ್ನು ಅರೆನಿದ್ದೆಯಿಂದ ಎಬ್ಬಿಸಿದ್ರೆ ನಿಮ್ಕತೆ ಮುಗೀತು ಅನ್ನುತ್ತೆ ಚಾಣಕ್ಯ ನೀತಿ | Dont Wake Up These 5 People From Half Sleep According To Chanakya Niti Bni



Chanakya Niti: ಈ ಐವರನ್ನು ಅರೆನಿದ್ದೆಯಿಂದ ಎಬ್ಬಿಸಿದ್ರೆ ನಿಮ್ಕತೆ ಮುಗೀತು ಅನ್ನುತ್ತೆ ಚಾಣಕ್ಯ ನೀತಿ | Dont Wake Up These 5 People From Half Sleep According To Chanakya Niti Bni

ಆಚಾರ್ಯ ಚಾಣಕ್ಯರ ನೀತಿಯ (Chanakya Niti) ಪ್ರಕಾರ, ನಿದ್ರಿಸುತ್ತಿರುವ ಐದು ಜೀವಿಗಳನ್ನು ಎಂದಿಗೂ ಎಚ್ಚರಗೊಳಿಸಬಾರದು. ಅದು ನಿಮ್ಮ ಪ್ರಾಣಕ್ಕೇ ಅಪಾಯವನ್ನು ತರಬಹುದು. ಹಾಗಾದರೆ ಯಾರವರು, ಆ ಐದು ಭಯಂಕರ ಜೀವಿಗಳು!?

ಆಚಾರ್ಯ ಚಾಣಕ್ಯರು ಬದುಕಿಗೆ ಮಾರ್ಗದರ್ಶಕವಾಗುವ ನೀತಿಸೂತ್ರಗಳನ್ನು (Chanakya Niti) ಹೇಳಿದ್ದಾರೆ. ಆಡಳಿತಕ್ಕೆ ಅನುಕೂಲವಾಗುವ ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ. ಕೆಲವೊಮ್ಮೆ ತಮಾಷೆ ಸಂಗತಿಗಳನ್ನೂ ಹೇಳಿದ್ದಾರೆ. ಉದಾಹರಣೆಗೆ, ಯಾರನ್ನು ಅರೆನಿದ್ದೆಯಿಂದ ಎಬ್ಬಿಸಬಾರದು ಎಂಬುದು ಅವರು ಹೇಳಿದ ಸೂಕ್ತಿಗಳಲ್ಲಿ ಒಂದು. ಯಾಕೆ ಹಾಗೆ ಎಬ್ಬಿಸಬಾರದು? ಎಬ್ಬಿಸಿ ನೋಡಿ, ನಿಮಗೇ ತಿಳಿಯುತ್ತೆ! ಪ್ರಾಣಕ್ಕೇ ಕುತ್ತು ಬರುವಂತೆ ಆಗಬಹುದು. ಜೀವದ ಮೇಲೆ ಆಸೆ ಇದ್ದರೆ ಹಾಗೆ ಮಾಡಬೇಡಿ. ಆ 5 ಜೀವಿಗಳು ಯಾರು ಗೊತ್ತೇ?

ಸಣ್ಣ ​ಮಗು

ಮಕ್ಕಳು ಅಪೂರ್ಣ ನಿದ್ದೆಯಲ್ಲಿ ಎದ್ದರೆ ಅವರ ಮನಸ್ಥಿತಿ ಪೂರ್ತಿ ಹಾಳಾಗುತ್ತದೆ. ಅದರಿಂದ ಕೆಟ್ಟ ಮೂಡ್‌ ಹೊತ್ತುಕೊಂಡು ಇಡೀ ದಿನ ಚಂಡಿ ಹಿಡಿದು ಅಳುವ ಸಾಧ್ಯತೆಯೇ ಹೆಚ್ಚು. ಅರೆ ನಿದ್ರೆಯಿಂದಾಗಿ ಅತಿಯಾಗಿ ಹಠ ಹಿಡಿಯುವ ಮಕ್ಕಳನ್ನು ನಿಭಾಯಿಸಲು ಕಷ್ಟ. ಆದ್ದರಿಂದ ಅವರು ಎಂದಿಗೂ ಅರೆ ನಿದ್ರೆಯಿಂದ ಎಚ್ಚರಗೊಳ್ಳಬಾರದು. ಆರೋಗ್ಯದ ದೃಷ್ಟಿಯಿಂದಲೂ ಹೀಗೆ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಗಾಯಗೊಂಡ ಮೃಗ

ಅಪಾಯಕಾರಿ ಪ್ರಾಣಿ, ಗಾಯಗೊಂಡ ಮೃಗ ನಿದ್ರಿಸುವಾಗ ಎಚ್ಚರಗೊಳಿಸಲು ಅಥವಾ ತೊಂದರೆ ಕೊಡಲು ಪ್ರಯತ್ನಿಸಬೇಡಿ. ಹಿಂಸಾತ್ಮಕ ಪ್ರಾಣಿಯು ಕೋಪದಲ್ಲಿ ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ನಿಮ್ಮ ಜೀವಕ್ಕೆ ಅಪಾಯ ಎದುರಾಗಬಹುದು. ಅಪರಿಚಿತ ನಾಯಿಯನ್ನು ನಿದ್ರೆಯಿಂದ ಎಬ್ಬಿಸುವುದು ಸಹ ನಿಮ್ಮನ್ನು ತೊಂದರೆಗೆ ಸಿಲುಕಿಸಿದಂತೆ. ಅವುಗಳ ನಿದ್ರೆಯನ್ನು ಹಾಳು ಮಾಡಬೇಡಿ. ಮಾಡಿದ್ದರೆ ಅವು ನಿಮಗೆ ಹಾನಿ ಮಾಡಬಹುದು.

​ಸಿಂಹ

ನಿದ್ರಿಸುತ್ತಿರುವ ಸಿಂಹವನ್ನು ಎಬ್ಬಿಸುವ ತಪ್ಪನ್ನು ಎಂದಿಗೂ ಮಾಡಬಾರದು. ಇಲ್ಲದಿದ್ದರೆ ಅದು ಮಾರಣಾಂತಿಕವಾಗಬಹುದು. ನಿದ್ರಿಸುತ್ತಿರುವ ಸಿಂಹವನ್ನು ತೊಂದರೆಗೊಳಿಸುವುದು ತೊಂದರೆಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನಿಮಗೆ ರಕ್ಷಿಸಿಕೊಳ್ಳಲು ಕಷ್ಟವಾಗಬಹುದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

​ಮೂರ್ಖ

ಆಚಾರ್ಯ ಚಾಣಕ್ಯರ ಪ್ರಕಾರ ಮೂರ್ಖನನ್ನು ನಿದ್ರೆಯಿಂದ ಎಬ್ಬಿಸುವುದು ಎಂದರೆ ತೊಂದರೆಗಳನ್ನು ಆಹ್ವಾನಿಸಿದಂತೆ. ಮೂರ್ಖನಿಗೆ ಅರೆನಿದ್ದೆಯಿಂದ ಎಬ್ಬಿಸಿ ಸಂದರ್ಭವನ್ನು ವಿವರಿಸುವುದು ಎಂದರೆ ಕೋಣನ ಮುಂದೆ ವೀಣೆ ನುಡಿಸಿದಂತೆ ಎನ್ನುತ್ತಾರೆ ಚಾಣಕ್ಯ. ನೀವು ಮೂರ್ಖನನ್ನು ಅವನ ಪ್ರಯೋಜನಕ್ಕಾಗಿ ನಿದ್ರೆಯಿಂದ ಎಬ್ಬಿಸಿದರೂ, ಅವನು ನಿಮ್ಮನ್ನು ತಪ್ಪಾಗಿ ಭಾವಿಸಿ ಹರಿಹಾಯುತ್ತಾನೆ.

​ರಾಜ

ಚಾಣಕ್ಯರ ಪ್ರಕಾರ, ರಾಜನನ್ನು ಅರೆನಿದ್ರೆಯಿಂದ ಎಬ್ಬಿಸುವುದು ಮಹಾ ಅಪರಾಧವೆಂದು ಪರಿಗಣಿಸಲಾಗಿತ್ತು. ಅಂಥವರ ತಲೆ ಕಡಿಯಲಾಗುತ್ತಿತ್ತು. ಇಂದಿನ ಯುಗದಲ್ಲಿ ಇದನ್ನು ಯಾವುದೇ ದೊಡ್ಡ ಅಧಿಕಾರಿ, ಮಂತ್ರಿ, ಶ್ರೀಮಂತನಿಗೆ ಹೋಲಿಸಬಹುದು. ಇವರ ನಿದ್ರೆ ಹಾಳು ಮಾಡಿದರೆ ಅವರ ಕೋಪಕ್ಕೆ ಬಲಿಯಾಗಬಹುದು. ಆದ್ದರಿಂದ ನಾವು ರಾಜರನ್ನು ನಿದ್ರೆಯಿಂದ ಎಬ್ಬಿಸಬಾರದು ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *