Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ! | Bigg Boss Kannada 12 Winner Gilli Actor Nataraj Clarifies He Tried To Meet Darshan In Jail

Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ! | Bigg Boss Kannada 12 Winner Gilli Actor Nataraj Clarifies He Tried To Meet Darshan In Jail



Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ! | Bigg Boss Kannada 12 Winner Gilli Actor Nataraj Clarifies He Tried To Meet Darshan In Jail

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ಹೊರಬಂದ ಬಳಿಕ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡು ಭೇಟಿಗೆ ಪ್ರಯತ್ನಿಸಿದ್ದಾರೆ. ಆದರೆ ಅದೇನಾಯ್ತು? ನೋಡಿ..

ದರ್ಶನ್- ಗಿಲ್ಲಿ ನಟ ಭೇಟಿ?

ಗಿಲ್ಲಿ ನಟ ನಟರಾಜ್ (Gilli Nata), ತಾವು ಬಿಗ್ ಬಾಸ್‌ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಜೈಲಿಗೆ ಹೋಗಿ ನಟ ದರ್ಶನ್ ತೂಗುದೀಪ (Darshan Thoogudeepa) ಅವರನ್ನು ಭೇಟಿಯಾಗಿ ಬರಲು ಹೋಗಿದ್ದು ಎಂದು ಹಲವು ದಿನಗಳಿಂದ ಸುದ್ದಿ ವೈರಲ್ ಆಗುತ್ತಿತ್ತು. ಆದರೆ, ಅದು ಬರೀ ಅಂತೆ-ಕಂತೆಗಳಾಗಿ ಸುತ್ತುತ್ತಿತ್ತು. ಆ ಸುದ್ದಿಗೆ ಬರೀ ರೆಕ್ಕೆಪುಕ್ಕ ಇದ್ದು ಹಾರಾಡುತ್ತಿತ್ತೇ ಹೊರತೂ ಯಾವುದೇ ಆಧಾರ ಅಥವಾ ಕ್ಲಾರಿಟಿ ಸಿಕ್ಕಿರಲಿಲ್ಲ. ಅದರೆ, ಇದೀಗ ಈ ಸುದ್ದಿಗೆ ಕ್ಲಾರಿಟಿ ಸಿಕ್ಕಿದೆ. ಅದೇನು ನೋಡಿ..

‘ನಾನು ಮೀಟ್ ಆಗ್ಬೇಕು ಅಂತ ಟ್ರೈ ಮಾಡಿದ್ದು ನಿಜ.. ನಾನು ವಿಚಾರಿಸಿದೆ ಅಲ್ಲಿ ಭೇಟಿ ಆಗಲು ಅವಕಾಶ ಇದೆಯಾ ಅಂತ.. ಅದಕ್ಕೆ ಅವರು ಇಲ್ಲ ಅಂದ್ರು.. ನಮ್ಮ ದರ್ಶನ್ ಅಣ್ಣನ ಅಲ್ಲಿ ನೋಡೋದಕ್ಕಿಂತ, ಅಂದ್ರೆ ಹೊರಗಡೆ ಎಲ್ಲೋ ನೋಡೋದಕ್ಕಿಂತ ಅವರ ಮನೆಗೆ ಹೋಗಿ ಮೀಟ್ ಆಗಿ ಅವರ ಆಶೀರ್ವಾದ ತಗೋಬೇಕು ಅಂತ ಆಸೆ’ ಎಂದಿದ್ದಾರೆ ಗಿಲ್ಲಿ ನಟ ನಟರಾಜ್’ ಎಂದಿದ್ದಾರೆ ಗಿಲ್ಲಿ ನಟ.

‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ

ಹೌದು, ಗಿಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಏಕೆಂದರೆ, ದರ್ಶನ್ ನಟನೆಯಲ್ಲಿ ಕಳೆದ ತಿಂಗಳು ಬಿಡುಗಡೆಯಾಗಿದ್ದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ಹೊರಬಂದ ಬಳಿಕ ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದುಕೊಂಡು. ಸಹಜವಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದ್ರಿಂದ ಅಲ್ಲಿಗೆ ಹೋಗಿ ಕೇಳಿದ್ದಾರೆ. ಆದರೆ, ಆ ಭೇಟಿ ಸಾಧ್ಯವಾಗಿಲ್ಲ.

ಬಿಗ್ ಬಾಸ್ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಭೇಟಿ?

ಇದೀಗ ಈ ಸಂಗತಿಯನ್ನು ಸ್ವತಃ ಗಿಲ್ಲಿ ನಟ ಅವರೇ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್ ಅವರನ್ನು ತಾವು ಬಿಗ್ ಬಾಸ್ ಶೋ ವಿನ್ನರ್ ಆಗಿ ಹೊರಬಂದ ಬಳಿಕ ಭೇಟಿಯಾಗಲು ಪ್ರಯತ್ನಿಸಿದ್ದು ಹೌದು. ಆದರೆ, ಅಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ. ಮುಂದೆ ದರ್ಶನ್ ಮನೆಗೆ ಬಂದ ಮೇಲೆ ತಾವು ಭೇಟಿಯಾಗಿ ಆಶೀರ್ವಾದ ಪಡೆಯವುದು ಪಕ್ಕಾ ಎಂದು ಕೂಡ ಹೇಳಿದ್ದಾರೆ ಗಿಲ್ಲಿ ನಟ.



Source link

Leave a Reply

Your email address will not be published. Required fields are marked *