ನಟ ದರ್ಶನ್ ಗ್ಯಾಂಗ್‌ನ ಪವಿತ್ರಾಗೌಡಗೆ ವಾರಕ್ಕೊಮ್ಮೆ ಸಿಕ್ತಿದ್ದ ಬಾಡೂಟಕ್ಕೂ ಬಿತ್ತು ಬ್ರೇಕ್; ಜೈಲಿನ ರೈಸ್-ದಾಲೇ ಗತಿ! | Renukaswamy Case High Court Quashes Home Food Order Actor Darshan Friend Pavithra Gowda Sat

ನಟ ದರ್ಶನ್ ಗ್ಯಾಂಗ್‌ನ ಪವಿತ್ರಾಗೌಡಗೆ ವಾರಕ್ಕೊಮ್ಮೆ ಸಿಕ್ತಿದ್ದ ಬಾಡೂಟಕ್ಕೂ ಬಿತ್ತು ಬ್ರೇಕ್; ಜೈಲಿನ ರೈಸ್-ದಾಲೇ ಗತಿ! | Renukaswamy Case High Court Quashes Home Food Order Actor Darshan Friend Pavithra Gowda Sat



ನಟ ದರ್ಶನ್ ಗ್ಯಾಂಗ್‌ನ ಪವಿತ್ರಾಗೌಡಗೆ ವಾರಕ್ಕೊಮ್ಮೆ ಸಿಕ್ತಿದ್ದ ಬಾಡೂಟಕ್ಕೂ ಬಿತ್ತು ಬ್ರೇಕ್; ಜೈಲಿನ ರೈಸ್-ದಾಲೇ ಗತಿ! | Renukaswamy Case High Court Quashes Home Food Order Actor Darshan Friend Pavithra Gowda Sat

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಸಹಚರರಾದ ಪವಿತ್ರಾಗೌಡ ಮತ್ತು ಇತರ ಇಬ್ಬರಿಗೆ ಮನೆಯೂಟ ನೀಡುವ ಸೆಷನ್ಸ್ ಕೋರ್ಟ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ವೈದ್ಯಕೀಯ ಕಾರಣಗಳಿಲ್ಲದೆ ಇಂತಹ ಸೌಲಭ್ಯ ನೀಡುವುದು ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದಿದೆ.

ಬೆಂಗಳೂರು (ಮಾ.04): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಆರೋಪಿಗಳಿಗೆ ಮನೆಯೂಟದ ಸೌಲಭ್ಯ ನೀಡುವ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಇಂದು ಅತ್ಯಂತ ಕಠಿಣ ನಿಲುವು ತಳೆದಿದೆ. ಎ1 ಆರೋಪಿ ಪವಿತ್ರಾಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಅವರಿಗೆ ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಈ ಹಿಂದೆ 57ನೇ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹೈಕೋರ್ಟ್ ತೀರ್ಪಿನ ಸಾರಾಂಶ:

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಪೀಠವು, ‘ಕೇವಲ ವಿಚಾರಣಾಧೀನ ಕೈದಿಗಳ ವೈಯಕ್ತಿಕ ಮನವಿ ಅಥವಾ ಇಷ್ಟದ ಮೇರೆಗೆ ಮನೆಯೂಟ ನೀಡುವುದು ಕಾನೂನುಬದ್ಧವಾಗಿ ಸರಿಯಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ವೈದ್ಯರ ಅಧಿಕೃತ ಸಲಹೆ ಇಲ್ಲದೆ ಇಂತಹ ಸೌಲಭ್ಯ ನೀಡುವುದು ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ತಾರತಮ್ಯದ ಬಗ್ಗೆ ನ್ಯಾಯಾಲಯದ ಕಳವಳ:

ವಿಚಾರಣೆ ವೇಳೆ ನ್ಯಾಯಾಲಯವು ಒಂದು ಪ್ರಮುಖ ಅಂಶವನ್ನು ಎತ್ತಿ ತೋರಿಸಿದೆ. ‘ಜೈಲಿನಲ್ಲಿರುವ ಕೆಲವು ಪ್ರಭಾವಿ ಕೈದಿಗಳಿಗೆ ಮಾತ್ರ ಮನೆಯೂಟದ ಅವಕಾಶ ನೀಡಿದರೆ, ಅದು ಇತರ ಸಾಮಾನ್ಯ ಕೈದಿಗಳ ನಡುವೆ ತಾರತಮ್ಯ ಎಸಗಿದಂತೆ ಆಗುತ್ತದೆ. ಜೈಲು ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿರಬೇಕು’ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ವೈದ್ಯರ ಶಿಫಾರಸು ಇದ್ದಲ್ಲಿ ಮಾತ್ರ ಜೈಲು ಅಧಿಕಾರಿಗಳಿಗೆ ಮನೆಯೂಟಕ್ಕಾಗಿ ಮತ್ತೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಕೋರ್ಟ್ ತಿಳಿಸಿದೆ.

ಜೈಲು ಊಟದ ಗುಣಮಟ್ಟದ ಮೇಲೆ ಹದ್ದಿನ ಕಣ್ಣು:

ಇದೇ ಸಂದರ್ಭದಲ್ಲಿ ಜೈಲಿನಲ್ಲಿ ಕೈದಿಗಳಿಗೆ ನೀಡುವ ಊಟದ ಗುಣಮಟ್ಟದ ಬಗ್ಗೆಯೂ ಹೈಕೋರ್ಟ್ ಗಂಭೀರವಾಗಿ ಚರ್ಚಿಸಿದೆ. ಈ ಹಿಂದೆ ಒಬ್ಬ ಕೈದಿಯ ದಿನದ ಊಟದ ವೆಚ್ಚ 82 ರೂಪಾಯಿ ಇತ್ತು, ಈಗ ಅದನ್ನು 125 ರೂಪಾಯಿಗೆ ಏರಿಸಲಾಗಿದೆ ಎಂದು ಎಸ್‌ಪಿಪಿ ಜಗದೀಶ್ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೋರ್ಟ್, ‘ವೆಚ್ಚವನ್ನು 125 ರೂಪಾಯಿಗೆ ಹೆಚ್ಚಿಸಿದರೂ ಊಟದ ಗುಣಮಟ್ಟದ ಪರಿಶೀಲನೆ ಅತ್ಯಗತ್ಯ’ ಎಂದು ಹೇಳಿದೆ.

ಜೈಲು ಅಥಾರಿಟಿಗಳಿಗೆ ಕಟ್ಟುನಿಟ್ಟಿನ ಸೂಚನೆ:

  • ಜೈಲಿನಲ್ಲಿ ಕೈದಿಗಳಿಗೆ ನೀಡುವ ದಿನನಿತ್ಯದ ಆಹಾರದ ಮೆನು ಮತ್ತು ಅದರ ಗುಣಮಟ್ಟದ ಬಗ್ಗೆ ‘ಡಿಜಿಟಲ್ ಪಬ್ಲಿಕೇಶನ್’ (Digital Publication) ಹೊರಡಿಸಬೇಕು.
  • ಕಾಲಕಾಲಕ್ಕೆ ನುರಿತ ಡಯಟಿಷಿಯನ್ ಮೂಲಕ ಜೈಲು ಊಟವನ್ನು ಪರೀಕ್ಷಿಸಿ, ವರದಿಯನ್ನು ಸಿದ್ಧಪಡಿಸಬೇಕು.
  • ವೈದ್ಯಕೀಯ ಕಾರಣಗಳಿಗಾಗಿ ಯಾರಿಗಾದರೂ ವಿಶೇಷ ಪಥ್ಯದ ಆಹಾರದ ಅಗತ್ಯವಿದ್ದರೆ, ವೈದ್ಯರ ಸಲಹೆಯಂತೆ ಜೈಲಿನಲ್ಲೇ ಅಂತಹ ಊಟ ತಯಾರಿಸಿ ನೀಡಲು ಕ್ರಮ ಕೈಗೊಳ್ಳಬೇಕು.
  • ಈ ತೀರ್ಪಿನಿಂದಾಗಿ ಸದ್ಯಕ್ಕೆ ಪವಿತ್ರಾಗೌಡ ಮತ್ತು ಇತರ ಇಬ್ಬರು ಆರೋಪಿಗಳಿಗೆ ಮನೆಯೂಟದ ಸೌಭಾಗ್ಯ ತಪ್ಪಿದಂತಾಗಿದ್ದು, ಜೈಲಿನ ಊಟವನ್ನೇ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.



Source link

Leave a Reply

Your email address will not be published. Required fields are marked *