Headlines

ಹೊಸಕೋಟೆ ಭೀಕರ ಅಪಘಾತ: 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು! | Fatal Chain Collision Involving Xuv Lorry And Bike Near Hoskote Leaves Seven Dead

ಹೊಸಕೋಟೆ ಭೀಕರ ಅಪಘಾತ: 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು! | Fatal Chain Collision Involving Xuv Lorry And Bike Near Hoskote Leaves Seven Dead



ಹೊಸಕೋಟೆ ಭೀಕರ ಅಪಘಾತ: 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು! | Fatal Chain Collision Involving Xuv Lorry And Bike Near Hoskote Leaves Seven Dead

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಶುಕ್ರವಾರ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ನಡೆದ ಈ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದ್ದಾರೆ.

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆಯಾಗಿದೆ.

ಕಾರಿನಲ್ಲಿದ್ದ 6 ಮಂದಿ ವಿದ್ಯಾರ್ಥಿಗಳು, ಓರ್ವ ಬೈಕ್ ಸವಾರ

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್‌ಯುವಿ (XUV) ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು, ಈ ಭೀಕರ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 6 ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ, ಕಾರಿನಲ್ಲಿದ್ದವರು ಮತ್ತು ಬೈಕ್ ಸವಾರರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಮೃತ ವಿದ್ಯಾರ್ಥಿಗಳ ವಿವರಗಳು ಈ ಕೆಳಕಂಡಂತಿವೆ:

  • ಅಶ್ವಿನ್ ನಾಯರ್ (17) – ಆರ್‌ವಿ ಪಿಯು ಕಾಲೇಜ್ ವಿದ್ಯಾರ್ಥಿ, ಕೊತ್ತನೂರು ನಿವಾಸಿ
  • ಅರ್ಹನ್ ಶರೀಫ್ – ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್‌ವಿಆರ್ ಲೇಔಟ್ ನಿವಾಸಿ
  • ಅಯನ್ ಅಲಿ (17) – ಸಿಎಂಆರ್ ಶಾಲೆ ವಿದ್ಯಾರ್ಥಿ
  • ಭರತ್ (18) – ಸಿಎಂಆರ್ ಕಾಲೇಜ್ ವಿದ್ಯಾರ್ಥಿ, ಫ್ರೇಜರ್ ಟೌನ್ ನಿವಾಸಿ
  • ಈತನ್ ಜಾರ್ಜ್ (17) – ಆರ್‌ವಿ ಪ್ರಥಮ ಪಿಯು ಕಾಲೇಜ್ ವಿದ್ಯಾರ್ಥಿ, ಹುಳಿಮಾವು ನಿವಾಸಿ
  • ಬಾಬಿ – ಮೃತಪಟ್ಟ ಮತ್ತೊಬ್ಬ ಯುವಕ
  • ಗಗನ್ – ಮೃತ ಬೈಕ್ ಸವಾರ, ಸಫಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 

ಅಪಘಾತಕ್ಕೀಡಾದ ಎಕ್ಸ್‌ಯುವಿ ಕಾರು ಅಯನ್ ಅಲಿ ಎಂಬ ಯುವಕನಿಗೆ ಸೇರಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರಂದನ ಮುಗಿಲು ಮುಟ್ಟಿದೆ. ಯುವ ವಯಸ್ಸಿನ ವಿದ್ಯಾರ್ಥಿಗಳ ಸಾವಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ದುಃಖ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *