LPG ಸಿಲಿಂಡರ್‌ಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | Man Dies In Lpg Cylinder Queue Punjab Barnala Fuel Shortage Panic San

LPG ಸಿಲಿಂಡರ್‌ಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | Man Dies In Lpg Cylinder Queue Punjab Barnala Fuel Shortage Panic San



LPG ಸಿಲಿಂಡರ್‌ಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | Man Dies In Lpg Cylinder Queue Punjab Barnala Fuel Shortage Panic San

ಪಂಜಾಬ್‌ನ ಬರ್ನಾಲಾದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇಂಧನ ಕೊರತೆಯ ವದಂತಿಯಿಂದ ಉಂಟಾದ ‘ಪ್ಯಾನಿಕ್ ಬೈಯಿಂಗ್’ ಈ ದುರಂತಕ್ಕೆ ಕಾರಣವಾಗಿದೆ.

ಬರ್ನಾಲಾ/ನವದೆಹಲಿ (ಮಾ.13): ಅಡುಗೆ ಅನಿಲ (LPG) ಸಿಲಿಂಡರ್‌ಗಾಗಿ ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಬರ್ನಾಲಾ ಜಿಲ್ಲೆಯ ಸೆಹನಾ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಭೂಷಣ್ ಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಅನಿಲ ಸಿಲಿಂಡರ್ ಕೊರತೆಯ ಭೀತಿಯಿಂದ ಭೂಷಣ್ ಅವರು ಬೆಳಿಗ್ಗೆ 5 ಗಂಟೆಗೆ ಎಲ್‌ಪಿಜಿ ವಿತರಣಾ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸರತಿಯಲ್ಲಿ ಕಾಯುತ್ತಿದ್ದ ಅವರು, ಬೆಳಿಗ್ಗೆ 7.50ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಅತಿಯಾದ ಆತಂಕ ಮತ್ತು ಸುದೀರ್ಘ ಕಾಯುವಿಕೆಯಿಂದ ಸಂಭವಿಸಿದ ಹೃದಯಾಘಾತವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.

ದೇಶಾದ್ಯಂತ ಎಲ್‌ಪಿಜಿಗಾಗಿ ಮುಗಿಬಿದ್ದ ಜನ

ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಉಲ್ಬಣಿಸಿರುವ ಯುದ್ಧ ಮತ್ತು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ವದಂತಿಗಳು ಹರಡಿವೆ. ಈ ಭೀತಿಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಜನರು ಪೆಟ್ರೋಲ್ ಬಂಕ್ ಮತ್ತು ಎಲ್‌ಪಿಜಿ ಕೇಂದ್ರಗಳ ಮುಂದೆ ಮುಗಿಬಿದ್ದಿದ್ದಾರೆ. ಈ ‘ಪ್ಯಾನಿಕ್ ಬೈಯಿಂಗ್’ (Panic Buying) ಪರಿಸ್ಥಿತಿಯಿಂದಾಗಿ ಅನಿಲ ವಿತರಣಾ ವ್ಯವಸ್ಥೆಯ ಮೇಲೆ ಭಾರಿ ಒತ್ತಡ ಬಿದ್ದಿದೆ.

ಸರ್ವರ್ ಕ್ರ್ಯಾಶ್ ಮತ್ತು ಬುಕಿಂಗ್ ಸಮಸ್ಯೆ

ಇತ್ತೀಚಿನ ವರದಿಗಳ ಪ್ರಕಾರ, ಅನಿಲ ಕಂಪನಿಗಳ ಬುಕಿಂಗ್ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದೆ. ಏಕಕಾಲಕ್ಕೆ ಲಕ್ಷಾಂತರ ಗ್ರಾಹಕರು ಸಿಲಿಂಡರ್ ರೀಫಿಲ್‌ಗಾಗಿ ವಿನಂತಿ ಸಲ್ಲಿಸುತ್ತಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳ (OMC) ಸರ್ವರ್‌ಗಳು ಪದೇ ಪದೇ ಸ್ಥಗಿತಗೊಳ್ಳುತ್ತಿವೆ. ಇದರಿಂದಾಗಿ ಆನ್‌ಲೈನ್ ಬುಕಿಂಗ್ ಮಾಡಲಾಗದೆ ಜನರು ನೇರವಾಗಿ ವಿತರಣಾ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ, ಇದು ಜನಸಂದಣಿ ಮತ್ತು ಗೊಂದಲಕ್ಕೆ ಕಾರಣವಾಗಿದೆ.

ಇಂದಿನ ಪರಿಸ್ಥಿತಿ ಏನು?

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಹಡಗುಗಳ ಸಂಚಾರ ವಿಳಂಬವಾಗುತ್ತಿದ್ದು, ಇದು ಸ್ಥಳೀಯವಾಗಿ ಎಲ್‌ಪಿಜಿ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಇಂಧನದ ಕೊರತೆಯಿಲ್ಲ, ಜನರು ಆತಂಕಕ್ಕೊಳಗಾಗಿ ಸಂಗ್ರಹಣೆ ಮಾಡಬಾರದು ಎಂದು ಸರ್ಕಾರ ಮನವಿ ಮಾಡುತ್ತಿದ್ದರೂ, ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಗ್ರಾಹಕರನ್ನು ಕಂಗೆಡಿಸಿದೆ. ಸಿಲಿಂಡರ್ ಕೊರತೆಯ ಲಾಭ ಪಡೆದು ಕೆಲವು ಕಡೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದೂರುಗಳೂ ಕೇಳಿಬರುತ್ತಿವೆ.



Source link

Leave a Reply

Your email address will not be published. Required fields are marked *