Headlines

RGV: ‘ಚಿತ್ರರಂಗದ ಮೇಲೆ ಆಟಂಬಾಂಬ್ ಸ್ಫೋಟ’ ಎಂದ ಆರ್‌ಜಿವಿ ಮಾತಿಂದ ಹೊಸ ಸಂಚಲನ, ಪರ-ವಿರೋಧ ಸೃಷ್ಟಿ! | Now That Aditya Dhar Films Has Exploded A Atomic Bomb Right Under The Film Industry Says Ram Gopal Varma

RGV: ‘ಚಿತ್ರರಂಗದ ಮೇಲೆ ಆಟಂಬಾಂಬ್ ಸ್ಫೋಟ’ ಎಂದ ಆರ್‌ಜಿವಿ ಮಾತಿಂದ ಹೊಸ ಸಂಚಲನ, ಪರ-ವಿರೋಧ ಸೃಷ್ಟಿ! | Now That Aditya Dhar Films Has Exploded A Atomic Bomb Right Under The Film Industry Says Ram Gopal Varma



RGV: ‘ಚಿತ್ರರಂಗದ ಮೇಲೆ ಆಟಂಬಾಂಬ್ ಸ್ಫೋಟ’ ಎಂದ ಆರ್‌ಜಿವಿ ಮಾತಿಂದ ಹೊಸ ಸಂಚಲನ, ಪರ-ವಿರೋಧ ಸೃಷ್ಟಿ! | Now That Aditya Dhar Films Has Exploded A Atomic Bomb Right Under The Film Industry Says Ram Gopal Varma

‘ಧುರಂಧರ್ 2’ ಕೇವಲ ಹಣ ಗಳಿಸುತ್ತಿಲ್ಲ, ಬದಲಾಗಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸೈದ್ಧಾಂತಿಕ ಸಂಘರ್ಷಕ್ಕೂ ಕಾರಣವಾಗಿದೆ. ರಾಮ್ ಗೋಪಾಲ್ ವರ್ಮಾ ಅವರ ಈ ಎಚ್ಚರಿಕೆಯ ನಂತರವಾದರೂ ಬಾಲಿವುಡ್‌ನ ದಿಗ್ಗಜರು ಮೌನ ಮುರಿಯುತ್ತಾರಾ? ಕಾದು ನೋಡಬೇಕು. ಶೀಘ್ರದಲ್ಲೇ ಸಿನಿಮಾ 1500 ಕೋಟಿ ಕ್ಲಬ್ ಸೇರುವ ಸಾಧ್ಯತೆ ದಟ್ಟವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: ಚಿತ್ರರಂಗದ ಮೇಲೆ ‘ಪರಮಾಣು ಬಾಂಬ್’ ಹಾಕಿದ್ರಾ ಆದಿತ್ಯ ಧರ್? ಆರ್‌ಜಿವಿ ಟ್ವೀಟ್‌ನಿಂದ ಸೃಷ್ಟಿಯಾಯ್ತು ಭಾರಿ ಸಂಚಲನ!

ಬಾಲಿವುಡ್‌ನ ‘ಎನರ್ಜಿ ಕಿಂಗ್’ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಈಗ ಬರೀ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಕೇವಲ ಹತ್ತು ದಿನಗಳಲ್ಲೇ 1200 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆ ಮಾಡಿರುವ ಈ ಸಿನಿಮಾ, 11ನೇ ದಿನಕ್ಕೇ 1350 ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಭಾರತೀಯ ಚಿತ್ರರಂಗದ ಹಳೆಯ ದಾಖಲೆಗಳನ್ನು ಒಂದೊಂದಾಗಿ ಧೂಳೀಪಟ ಮಾಡುತ್ತಿದೆ. ಆದರೆ, ಈ ಅಭೂತಪೂರ್ವ ಯಶಸ್ಸಿನ ನಡುವೆಯೇ ಸಿನಿಮಾದ ಕಥಾವಸ್ತುವಿನ ಬಗ್ಗೆ ಪರ-ವಿರೋಧ ಚರ್ಚೆಗಳು ಕಾಡ್ಗಿಚ್ಚಿನಂತೆ ಹಬ್ಬಿವೆ.

ಪ್ರೊಪಗಾಂಡಾ ವಿವಾದ ಮತ್ತು ಆರ್‌ಜಿವಿ ಎಂಟ್ರಿ:

ಒಂದು ಕಡೆ ಚಿತ್ರದ ಮೇಕಿಂಗ್ ಮತ್ತು ರಣವೀರ್ ನಟನೆಯನ್ನು ಜನ ಕೊಂಡಾಡುತ್ತಿದ್ದರೆ, ಇನ್ನೊಂದೆಡೆ “ಇದೊಂದು ಪ್ರೊಪಗಾಂಡಾ ಸಿನಿಮಾ” ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲಾ ಗದ್ದಲಗಳ ಮಧ್ಯೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಮಾಡಿರುವ ಸರಣಿ ಟ್ವೀಟ್‌ಗಳು ಈಗ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಉಳಿದ ನಿರ್ದೇಶಕರು ಮತ್ತು ಚಿತ್ರರಂಗದ ಗಣ್ಯರನ್ನು ಆರ್‌ಜಿವಿ ಕೆಣಕಿದ್ದಾರೆ.

ಚಿತ್ರರಂಗದ ಮೇಲೆ ‘ಪರಮಾಣು ಬಾಂಬ್’ ಸ್ಫೋಟ!

ನಿರ್ದೇಶಕ ಆದಿತ್ಯ ಧರ್ ಅವರ ಧೈರ್ಯ ಮತ್ತು ಸಿನಿಮಾದ ತಾಂತ್ರಿಕ ಶ್ರೀಮಂತಿಕೆಯನ್ನು ಮೆಚ್ಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, “ಆದಿತ್ಯ ಧರ್ ಅವರು ಇಡೀ ಚಿತ್ರರಂಗದ ಅಡಿಯಲ್ಲಿ ಒಂದು ‘ಪರಮಾಣು ಬಾಂಬ್’ ಅನ್ನೇ ಸ್ಫೋಟಿಸಿದ್ದಾರೆ. ಆದರೆ, ಅಚ್ಚರಿಯ ವಿಷಯವೆಂದರೆ ಇಡೀ ಚಿತ್ರರಂಗ ಈ ಬಗ್ಗೆ ವಹಿಸಿರುವ ನಿಗೂಢ ಮೌನ. ಈ ಮೌನಕ್ಕೆ ಕಾರಣವೇನಿರಬಹುದು?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅಂದರೆ, ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡರೂ ಚಿತ್ರರಂಗದ ಇತರೆ ದೊಡ್ಡ ನಟ-ನಿರ್ದೇಶಕರು ಯಾಕೆ ಮೌನವಾಗಿದ್ದಾರೆ ಎಂಬುದು ವರ್ಮಾ ಅವರ ಗುರಿಯಾಗಿದೆ.

“ಬಿಲದೊಳಗೆ ಅವಿತು ಕುಳಿತಿದ್ದಾರೆಯೇ?”

ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಚಿತ್ರರಂಗದ ಮಂದಿಯನ್ನು ಲೇವಡಿ ಮಾಡಿರುವ ಆರ್‌ಜಿವಿ, “ಧುರಂಧರ್‌ 2 ಉಂಟು ಮಾಡಿರುವ ಭೀಕರ ಸ್ಫೋಟಕ್ಕೆ ಉಳಿದವರು ಬಾಹ್ಯಾಕಾಶದ ಅಂಚಿಗೆ ತಳ್ಳಲ್ಪಟ್ಟಿದ್ದಾರೆಯೇ? ಅಲ್ಲಿಂದ ಅವರು ಹಾಕುವ ಚಪ್ಪಾಳೆ ನಮಗೆ ಕೇಳಿಸುತ್ತಿಲ್ಲವೇ? ಅಥವಾ ‘ಇದು ಬರೀ ಪ್ರೊಪಗಾಂಡಾ… ಅತಿ ಶೀಘ್ರದಲ್ಲೇ ಇದು ಮರೆಯಾಗುತ್ತದೆ’ ಎಂದು ಒಬ್ಬರಿಗೊಬ್ಬರು ಪಿಸುಗುಟ್ಟುತ್ತಾ, ಮತ್ತೆ ಅದೇ ಹಳೆಯ ಸವಕಲು ಮಾದರಿಯ ಸಿನಿಮಾಗಳನ್ನು ಮಾಡಲು ತಮ್ಮ ಬಿಲದೊಳಗೆ ಅವಿತು ಕುಳಿತಿದ್ದಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಕಿ ಉಗುಳುವ ಡೈನೋಸಾರ್!

ಸಿನಿಮಾದ ಗುಣಮಟ್ಟದ ಬಗ್ಗೆ ಮಾತನಾಡುತ್ತಾ, ಈ ಚಿತ್ರದ ಅದ್ಭುತ ಮೇಕಿಂಗ್ ನೋಡಿ ಉಳಿದ ಚಿತ್ರಕರ್ಮಿಗಳು ಪಾರ್ಶ್ವವಾಯು ಪೀಡಿತರಂತೆ ಸ್ತಬ್ಧವಾಗಿದ್ದಾರೆ ಎಂದು ಆರ್‌ಜಿವಿ ವ್ಯಂಗ್ಯವಾಡಿದ್ದಾರೆ. “ಧುರಂಧರ್‌ 2 ಎಂಬ ಬೆಂಕಿ ಉಗುಳುವ ಡೈನೋಸಾರ್ ನಿಮ್ಮ ಕಣ್ಣೆದುರೇ ನಿಂತು ಬಾಕ್ಸ್ ಆಫೀಸ್‌ನಲ್ಲಿ ಘರ್ಜಿಸುತ್ತಿದೆ. ಇದು ನಿಮ್ಮ ಪಾದದ ಅಡಿಯಲ್ಲಿರುವ ನೆಲವನ್ನೇ ನಡುಗಿಸುತ್ತಿರುವಾಗ, ಅದನ್ನು ನಿರ್ಲಕ್ಷಿಸುವಷ್ಟು ಮೂರ್ಖರಾಗಲು ಹೇಗೆ ಸಾಧ್ಯ?” ಎಂದು ಕೇಳುವ ಮೂಲಕ, ಹೊಸ ಮಾದರಿಯ ಸಿನಿಮಾಗಳನ್ನು ಒಪ್ಪಿಕೊಳ್ಳಲು ಇಂಡಸ್ಟ್ರಿ ಭಯಪಡುತ್ತಿದೆ ಎಂಬ ಸುಳಿವು ನೀಡಿದ್ದಾರೆ.

ಒಟ್ಟಾರೆಯಾಗಿ, ‘ಧುರಂಧರ್ 2’ ಕೇವಲ ಹಣ ಗಳಿಸುತ್ತಿಲ್ಲ, ಬದಲಾಗಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸೈದ್ಧಾಂತಿಕ ಸಂಘರ್ಷಕ್ಕೂ ಕಾರಣವಾಗಿದೆ. ರಾಮ್ ಗೋಪಾಲ್ ವರ್ಮಾ ಅವರ ಈ ಎಚ್ಚರಿಕೆಯ ನಂತರವಾದರೂ ಬಾಲಿವುಡ್‌ನ ದಿಗ್ಗಜರು ಮೌನ ಮುರಿಯುತ್ತಾರಾ? ಕಾದು ನೋಡಬೇಕು. ಶೀಘ್ರದಲ್ಲೇ ಸಿನಿಮಾ 1500 ಕೋಟಿ ಕ್ಲಬ್ ಸೇರುವ ಸಾಧ್ಯತೆ ದಟ್ಟವಾಗಿದೆ.



Source link

Leave a Reply

Your email address will not be published. Required fields are marked *