‘ದಬ್ಬಾಳಿಕೆ ಇರುವಲ್ಲೆಲ್ಲಾ ಜಿಹಾದ್ ಇರುತ್ತದೆ’- ಮುಲ್ಲಾ ಮದನಿ ಹೇಳಿಕೆಗೆ ದೇಶಾದ್ಯಂತ ಆಕ್ರೋಶ; ‘ವೈಟ್-ಕಾಲರ್ ಟೆರರ್’ಎಂದ ಬಿಜೆಪಿ | Madani Jihad Against Oppression Remark Row Bjp Calls It White Collar Terror

‘ದಬ್ಬಾಳಿಕೆ ಇರುವಲ್ಲೆಲ್ಲಾ ಜಿಹಾದ್ ಇರುತ್ತದೆ’- ಮುಲ್ಲಾ ಮದನಿ ಹೇಳಿಕೆಗೆ ದೇಶಾದ್ಯಂತ ಆಕ್ರೋಶ; ‘ವೈಟ್-ಕಾಲರ್ ಟೆರರ್’ಎಂದ ಬಿಜೆಪಿ | Madani Jihad Against Oppression Remark Row Bjp Calls It White Collar Terror



‘ದಬ್ಬಾಳಿಕೆ ಇರುವಲ್ಲೆಲ್ಲಾ ಜಿಹಾದ್ ಇರುತ್ತದೆ’- ಮುಲ್ಲಾ ಮದನಿ ಹೇಳಿಕೆಗೆ ದೇಶಾದ್ಯಂತ ಆಕ್ರೋಶ; ‘ವೈಟ್-ಕಾಲರ್ ಟೆರರ್’ಎಂದ ಬಿಜೆಪಿ | Madani Jihad Against Oppression Remark Row Bjp Calls It White Collar Terror

ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಭೋಪಾಲ್‌ನಲ್ಲಿ ‘ದಬ್ಬಾಳಿಕೆ ನಡೆದಾಗಲೆಲ್ಲಾ ಜಿಹಾದ್ ಇರುತ್ತದೆ’ ಎಂದು ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಇದನ್ನು ‘ವೈಟ್-ಕಾಲರ್ ಭಯೋತ್ಪಾದನೆ’ ಎಂದ ಬಿಜೆಪಿ

ಭೋಪಾಲ್/ನವದೆಹಲಿ (ನ.29): ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಜಿಹಾದ್ ಮತ್ತು ತ್ರಿವಳಿ ತಲಾಖ್ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗಳು ದೇಶಾದ್ಯಂತ ತೀವ್ರ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿವೆ. ಶನಿವಾರ (ನವೆಂಬರ್ 29, 2025) ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ದಬ್ಬಾಳಿಕೆ ನಡೆದಾಗಲೆಲ್ಲಾ ಜಿಹಾದ್ ಇರುತ್ತದೆ’ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದರು. ಸುಪ್ರೀಂ ಕೋರ್ಟ್ ಕುರಿತಾಗಿಯೂ ಅವರ ಹೇಳಿಕೆಗಳು ಟೀಕೆಗೆ ಗುರಿಯಾಗಿವೆ.

‘ವೈಟ್-ಕಾಲರ್ ಭಯೋತ್ಪಾದನೆ’ ಎಂದ ಬಿಜೆಪಿ:

ಮದನಿ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಇದನ್ನು ‘ವೈಟ್-ಕಾಲರ್ ಭಯೋತ್ಪಾದನೆ’ ಎಂದು ಕರೆದಿದ್ದಾರೆ.

ಈ ವೈಟ್-ಕಾಲರ್ ಭಯೋತ್ಪಾದಕ ನಾಯಕರ ಪಿತೂರಿಯ ಬಗ್ಗೆ ನಾವು ಜಾಗರೂಕರಾಗಿರಬೇಕು. ಸಮಾಜದಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ. ಅಂತಹ ಜನರು ಮಾನವೀಯತೆಯ ಹಿತೈಷಿಗಳಲ್ಲ, ದೇಶದ ಹಿತೈಷಿಗಳಲ್ಲ, ಯಾವುದೇ ಧರ್ಮದ ಹಿತೈಷಿಗಳಲ್ಲ. ಅವರ ಕೋಮು ಪಿತೂರಿ ಚಿಂತನೆಯು ಸಮಾಜದಲ್ಲಿ ವಿಭಜನೆ ಮತ್ತು ಸಂಘರ್ಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ರೀತಿಯ ಹಿಂಸಾತ್ಮಕ ಅರಾಜಕತಾ ಚಿಂತನೆ ಎಂದಿಗೂ ಯಶಸ್ವಿಯಾಗುವುದಿಲ್ಲ, ಎಂದು ಅವರು ಖಂಡಿಸಿದರು.

ಇತರ ಪಕ್ಷಗಳಿಂದಲೂ ತೀವ್ರ ಟೀಕೆ:

ಮದನಿ ಅವರ ಹೇಳಿಕೆಗಳಿಗೆ ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್, ಶಿವಸೇನೆ ಮತ್ತು ಜೆಡಿಯು ಪಕ್ಷಗಳು ಕೂಡ ಟೀಕೆ ವ್ಯಕ್ತಪಡಿಸಿವೆ.

ಕಾಂಗ್ರೆಸ್ (ಶಮಾ ಮೊಹಮ್ಮದ್): ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಏನು ತಪ್ಪಿದೆ? ಇದು ಕುರಾನ್ ಷರೀಫ್‌ನಲ್ಲಿಯೂ ಇಲ್ಲ. ದಯವಿಟ್ಟು ನಿಮ್ಮ ಅನುಯಾಯಿಗಳಿಗೆ ತಪ್ಪು ಇಸ್ಲಾಂ ಧರ್ಮವನ್ನು ಬೋಧಿಸುವುದನ್ನು ನಿಲ್ಲಿಸಿ. ಇದು ಹರಾಮ್ ಎಂದು ಹೇಳುವ ಮೂಲಕ ತಪ್ಪು ಪ್ರಚಾರ ನಿಲ್ಲಿಸುವಂತೆ ಆಗ್ರಹಿಸಿದರು.

ಶಿವಸೇನೆ (ಶೈನಾ ಎನ್‌ಸಿ): ಮದನಿ ಅವರು ಮುಸ್ಲಿಂ ಸಮುದಾಯವನ್ನು ಕೆರಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜಿಹಾದ್ ಪದವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನಾವು ಒಪ್ಪುತ್ತೇವೆ, ಆದರೆ ನೀವು ಜನರನ್ನು ದಾರಿ ತಪ್ಪಿಸಬಾರದು ಎಂದು ಎಚ್ಚರಿಕೆ ನೀಡಿದರು.

ಜೆಡಿಯು (ನೀರಜ್ ಕುಮಾರ್): ವಂದೇ ಮಾತರಂ ಮತ್ತು ರಾಷ್ಟ್ರಗೀತೆಯ ಬಗ್ಗೆ ಯಾರೂ ಭಿನ್ನಾಭಿಪ್ರಾಯ ಹೊಂದಲು ಸಾಧ್ಯವಿಲ್ಲ. ‘ರಾಷ್ಟ್ರಧ್ವಜದ ಮುಂದೆ ನಮಸ್ಕರಿಸುವುದು ಜೀವಂತ ಸಮುದಾಯದ ಸಂಕೇತವಾಗಿದೆ. ಇದು ಭಾರತೀಯ ಸಮುದಾಯದ ಸಂಕೇತವಾಗಿದೆ,” ಎಂದು ಹೇಳುವ ಮೂಲಕ ರಾಷ್ಟ್ರೀಯ ಗೌರವದ ವಿಷಯದಲ್ಲಿ ಮದನಿ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.



Source link

Leave a Reply

Your email address will not be published. Required fields are marked *