Karnataka Congress Anti-Hindu government allegations ಕಾಂಗ್ರೆಸ್ ಸರ್ಕಾರಕ್ಕೆ ಧಾರ್ಮಿಕ ರಾಜಕೀಯ ಸಂಕಷ್ಟ, ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಸರಣಿ ಘಟನೆಗಳೇ ಕಾರಣ! | Congress Government Faces Religious Crisis Anti Hindu Stance In Karnataka Gow

Karnataka Congress Anti-Hindu government allegations ಕಾಂಗ್ರೆಸ್ ಸರ್ಕಾರಕ್ಕೆ ಧಾರ್ಮಿಕ ರಾಜಕೀಯ ಸಂಕಷ್ಟ, ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಸರಣಿ ಘಟನೆಗಳೇ ಕಾರಣ! | Congress Government Faces Religious Crisis Anti Hindu Stance In Karnataka Gow



Karnataka Congress Anti-Hindu government allegations ಕಾಂಗ್ರೆಸ್ ಸರ್ಕಾರಕ್ಕೆ ಧಾರ್ಮಿಕ ರಾಜಕೀಯ ಸಂಕಷ್ಟ, ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಸರಣಿ ಘಟನೆಗಳೇ ಕಾರಣ! | Congress Government Faces Religious Crisis Anti Hindu Stance In Karnataka Gow

ರಾಜ್ಯದಲ್ಲಿ ನಡೆದ ಉದಯಗಿರಿ ಗಲಭೆ, ನಾಗಮಂಗಲ ಕೋಮುಗಲಭೆ, ಮದ್ದೂರು ಗಣೇಶ ಮೆರವಣಿಗೆ ಗಲಾಟೆ ಸೇರಿದಂತೆ ಹಲವು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂಬ ಆರೋಪಕ್ಕೆ ಗುರಿಮಾಡಿವೆ. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿವೆ.   

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಸರ್ಕಾರ ಎಂದು ಆರೋಪಿಸಲು ಕಾರಣವಾಗಿವೆ. ಕಳೆದ ಅವಧಿಯಂತೆ, ಈ ಅವಧಿಯಲ್ಲಿಯೂ ಧಾರ್ಮಿಕ ವಿಷಯಗಳು ಸರ್ಕಾರಕ್ಕೆ ಸಂಕಷ್ಟ ತಂದಿದ್ದು, ಮುಸ್ಲಿಂ ತುಷ್ಟೀಕರಣದ ನೀತಿಗಳಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಟ್ಟುತ್ತಿದೆ ಎಂಬ ಟೀಕೆ ಹೆಚ್ಚಾಗುತ್ತಿದೆ. ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿರುವ ಸರ್ಕಾರ

ಕ್ರಮದಿಂದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಈಗ ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆ ಗಲಾಟೆ ಮತ್ತಷ್ಟು ಬಿಸಿ ಹುಟ್ಟಿಸಿದೆ. ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಗಣೇಶ ಹಬ್ಬದ ಆಚರಣೆಗೆ ಷರತ್ತು ಹೇರಿಕೆ ಹಾಗೂ ಡಿಜೆಗಳಿಗೆ ನಿರ್ಬಂಧ ಹೇರಿದ್ದೇ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಸರಣಿ ಪ್ರಕರಣಗಳು ಸರ್ಕಾರದ ವಿರುದ್ಧ

1. ಉದಯಗಿರಿ ಗಲಭೆ

ಉದಯಗಿರಿ ಪ್ರದೇಶದಲ್ಲಿ ಪೊಲೀಸರು ಆರೋಪಿ ಬಂಧಿಸಿದ ವೇಳೆ, ಮುಸ್ಲಿಂ ಸಮುದಾಯದ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಹಲವಾರು ಪೊಲೀಸರಿಗೆ ಗಾಯಗಳಾದವು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದಲೇ ಇಂತಹ ಗಲಭೆಗೆ ಧೈರ್ಯ ಬರುತ್ತಿದೆ ಎಂಬ ಟೀಕೆ ವ್ಯಕ್ತವಾಯಿತು.

2. ನಾಗಮಂಗಲ ಕೋಮುಗಲಭೆ

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಸಮುದಾಯದವರು ಕಲ್ಲು ತೂರಾಟ ನಡೆಸಿದ ಪರಿಣಾಮ ಶಾಂತಿಯುತ ಮಂಡ್ಯ ಜಿಲ್ಲೆಯಲ್ಲಿ ಕೋಮುಗಲಭೆ ಉಂಟಾಯಿತು. ಗಲಭೆಯ ನಡುವೆ ಗಣೇಶ ಪ್ರತಿಷ್ಠಾಪಕರ ಮೇಲೆಯೇ ಕೇಸು ದಾಖಲಿಸಿದ್ದು, ಹಿಂದೂ ಭಾವನೆಗಳಿಗೆ ದೊಡ್ಡ ಧಕ್ಕೆ ತಟ್ಟಿತು.

3. ಮದ್ದೂರು ಗಣೇಶ ಮೆರವಣಿಗೆ ಗಲಾಟೆ

ಇತ್ತೀಚೆಗೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ಮಸೀದಿಯೊಳಗಿಂದ ಕಲ್ಲು ತೂರಾಟ ನಡೆಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರೂ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಚರ್ಚೆಗೆ ಗ್ರಾಸವಾಯಿತು.

4. ಧರ್ಮಸ್ಥಳ ಶವ ಪ್ರಕರಣ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾರೆ ಎನ್ನುವ ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸಿದ ಸರ್ಕಾರ, ಎಸ್‌ಐಟಿ ರಚಿಸಿ ಉತ್ಖನನ ಪ್ರಕ್ರಿಯೆ ಆರಂಭಿಸಿತು. ಪೂರ್ವಾಪರ ಪರಿಶೀಲನೆ ಇಲ್ಲದೆ ಕೈಗೊಂಡ ಕ್ರಮ ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ಕಾರಕ್ಕೆ ಗೌರವವಿಲ್ಲ ಎಂಬ ಅಭಿಪ್ರಾಯ ಮೂಡಿಸಿತು.

  • ಆರೋಪಿ ಚಿನ್ನಯ್ಯ ಪೂರ್ವಾಪರ ಪರಿಶೀಲನೆಗೂ ಮುನ್ನ ಎಸ್‌ಐಟಿ ರಚಿಸಿದ್ದ ಸರ್ಕಾರ
  • ಏಕಾಏಕಿ‌ ಎಸ್‌ಐಟಿ ಮಾಡಿ ಉತ್ಖನನ ಮಾಡಿದ್ದು ಕೂಡ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ‌ ಸರ್ಕಾರಕ್ಕೆ ಆಸಕ್ತಿ ಇಲ್ಲ ಎನ್ನುವ ಚರ್ಚೆ ಜೋರಾಯ್ತು

5. ಗಣೇಶ ಹಬ್ಬಕ್ಕೆ ನಿರ್ಬಂಧ

  • ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧ ಹಾಕಿದ್ದು ಹಿಂದೂ ವಿರೋಧಿ ನಿಲುವು ಎಂಬ ಟೀಕೆ ವ್ಯಕ್ತವಾಯ್ತು
  • ಡಿಜೆಗಳಿಗೆ ನಿರ್ಬಂಧ ಹಾಕಿದ್ದು ಹಿಂದೂಗಳ ಆಚರಣೆಗೆ ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದೆ ಎಂಬ ಭಾವನೆ ಮೂಡಿದೆ
  • ಸರ್ಕಾರದ ಈ ವರ್ತನೆ ಗಣೇಶೋತ್ಸವದ ಮೆರವಣಿಗೆ ವೇಳೆ ಆಕ್ರೋಶಕ್ಕೂ ಕಾರಣವಾಗ್ತಿದೆ

6. ಚಾಮುಂಡಿ ಬೆಟ್ಟ ವಿವಾದ, ಹಿಂದೂಗಳ ಆಸ್ತಿ ಅಲ್ಲ ಎಂದಿದ್ದ ಡಿಕೆಶಿ

  • ಚಾಮುಂಡೇಶ್ವರಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂದಿದ್ದ ಡಿಕೆ ಶಿವಕುಮಾರ್
  •  ಸಹಜವಾಗಿ ಡಿಕೆ ಶಿವಕುಮಾರ್ ಹೇಳಿಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು
  •  ರಾಜಮನೆತನದವರು ಕೂಡ ಡಿಕೆಶಿ ಹೇಳಿಕೆ ಖಂಡಿಸಿದ್ರು
  •  ಹಿಂದೂಗಳ ಆಸ್ತಿಯಾಗಿರುವುದಕ್ಕೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ ಎನ್ನುವ ಟೀಕೆ ವ್ಯಕ್ತವಾಗಿತ್ತು

7. ದಸರಾ ಉದ್ಘಾಟನೆ ವಿವಾದ

  • ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಹ್ವಾನಿಸಿದ್ದು ವಿವಾದವಾಗಿದೆ
  •  ದಸರಾ ನಾಡ ಹಬ್ಬವಾದರೂ ಧಾರ್ಮಿಕ ಆಚರಣೆಗಳು ಒಳಗೊಂಡಿದೆ
  •  ಹೀಗಾಗಿ ಮುಸ್ಲಿಂ ಸಮುದಾಯದ ಅದರಲ್ಲೂ ಭುವನೇಶ್ವರಿಯನ್ನ ದೇವಿಯಾಗಿ ಭಾನು ಮುಷ್ತಾಕ್ ಒಪ್ಪಿರಲಿಲ್ಲ
  •  ಇಂತಹವರನ್ನ ದಸರಾ ಉದ್ಘಾಟನೆಗೆ ಆಹ್ವಾನ ಮಾಡಿದ್ದು ಹಿಂದೂ ಧಾರ್ಮಿಕ ಭಾವನೆ ಕೆರಳಿಸಲು ಕಾರಣವಾಗಿದೆ

8. ಮುಸ್ಲಿಂ ಮೀಸಲಾತಿ ಕಾಯ್ದೆ

  • ಮುಸ್ಲಿಂಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಲು ಮುಂದಾಗಿದ್ದ ಸರ್ಕಾರ
  • ಇದಕ್ಕಾಗಿ ಹೊಸ ಕಾಯ್ದೆ ತಂದು ವಿವಾದ ಮೈಮೇಲೆ ಎಳೆದುಕೊಂಡಿದ್ದ ಸರ್ಕಾರ
  • ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲಾ ಮುಸ್ಲಿಂ ಓಲೈಕೆ‌ ಮಾಡುತ್ತೆ ಎಂಬ ಭಾವನೆ ಮೂಡಲು ಕಾರಣವಾಯ್ತು
  • ಕೊನೆಗೆ ರಾಜ್ಯಪಾಲರ ಮೂಲಕ ಮುಸ್ಲಿಂ ಮೀಸಲಾತಿ ಕಾಯ್ದೆಗೆ ಬ್ರೇಕ್ ಬೀಳುವಂತಾಯ್ತು

ಸರ್ಕಾರದ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ

ಮದ್ದೂರಿನ ಘಟನೆ ಹೀಗೆಯೇ ಬೇರೆ ಜಿಲ್ಲೆಗಳಿಗೆ ವ್ಯಾಪಿಸುವ ಮುನ್ನ, ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಸೀದಿಯೊಳಗಿನಿಂದಲೇ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿ, ಹಿಂದೂಗಳ ಆಕ್ರೋಶವನ್ನು ಶಮನಗೊಳಿಸಲು ಯತ್ನಿಸಿದರು. ಆದಾಗ್ಯೂ, ಸಾಲು ಸಾಲು ಪ್ರಕರಣಗಳಿಂದ ಜನರ ನಡುವೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂಬ ಅಭಿಪ್ರಾಯ ಗಟ್ಟಿಗೊಂಡಿದೆ.

ಒಟ್ಟಿನಲ್ಲಿ, ಧರ್ಮ ಸಂಬಂಧಿ ವಿವಾದಗಳು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದ ರಾಜಕೀಯಕ್ಕೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *