Cyber Crime ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ | Beware Of Whatsapp Wedding Invitation Gurugram Man Loses Rs 97000 In Just Clicks

Cyber Crime ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ | Beware Of Whatsapp Wedding Invitation Gurugram Man Loses Rs 97000 In Just Clicks



Cyber Crime ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ | Beware Of Whatsapp Wedding Invitation Gurugram Man Loses Rs 97000 In Just Clicks

ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ, ನಿಮಗೂ ಇದೇ ರೀತಿ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಎಚ್ಚರ, ಸೈಬರ್ ಫ್ರಾಡ್ಸ್ ಇದೀಗ ಹೊಸ ಮಾದರಿ ಮೂಲಕ ನಿಮ್ಮ ಖಾತೆ ಖಾಲಿ ಮಾಡಲಿದೆ.

ಗುರುಗ್ರಾಂ (ಅ.07) ನಿಮಗೆ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಅಪರಿಚಿತ ನಂಬರ್‌ನಿಂದ ಹಾಯ್, ನನ್ನ ಮದುವೆ ಆಮಂತ್ರಣ ಪತ್ರಿಕೆ ಇಲ್ಲಿದೆ, ಕುಟುಂಬ ಸಮೇತ ನೀವು ಮದುವೆಗೆ ಆಗಮಿಸಿ ಹರಸಬೇಕು ಅನ್ನೋ ಸಂದೇಶ, ಜೊತೆಗೆ ಆಮಂತ್ರಣ ಪತ್ರಿಕೆ ನಿಮ್ಮ ವ್ಯಾಟ್ಸಾಪ್ ಖಾತೆಗೆ ಕಳುಹಿಸಿ ಮೋಸ ಮಾಡುವ ಜಾಲ ಸಕ್ರಿಯವಾಗಿದೆ. ಹೀಗೆ ಗುರುಗ್ರಾಂನ ವಿಷ್ಣುಗಾರ್ಡನ್ ನಿವಾಸಿ ವಿನೋದ್ ಕುಮಾರ್ ವ್ಯಾಟ್ಸಾಪ್ ಮೂಲಕ ಬಂದ ಮದುವೆ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಲು ಹೋಗಿ ಬರೋಬ್ಬರಿ 97,000 ರೂಪಾಯಿ ಕಳೆದುಕೊಂಡು ಘಟನೆ ನಡೆದಿದೆ.

ನಂಬರ್ ಸೇವ್ ಮಾಡದ ಆಪ್ತರ ಮದುವೆ ಎಂದು ಕ್ಲಿಕ್ ಮಾಡಿದರೆ ಮುಗೀತು

ಅಪರಿಚಿತ ನಂಬರ್‌ನಿಂದ ಮದುವೆಗೆ ಬರಬೇಕು ಎಂದು ಆಮಂತ್ರಣ ಪತ್ರಿಕೆ ಕಳುಹಿಸಿದರೆ ಕ್ಲಿಕ್ ಮಾಡಿ ಮೋಸಹೋಗಬೇಡಿ. ಕಾರಣ ಇದು ಸೈಬರ್ ಫ್ರಾಡ್ಸ್ ಕಳುಹಿಸುವ ಸಂದೇಶವಾಗಿರುವ ಸಾಧ್ಯತೆ ಇದೆ. ಯಾರ ಮದುವೆ, ಎಲ್ಲಿ ಎಂದು ತಿಳಿದುಕೊಳ್ಳುವ, ಸಾಧ್ಯವಾದರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉತ್ಸಾಹ ತೋರಿ ಮೋಸ ಹೋಗಬೇಡಿ. ಈ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಿದರೆ ನಿಮ್ಮ ಪೋನ್ ಟ್ರಾಪ್ ಮಾಡಿ ಬ್ಯಾಂಕ್ ಖಾತೆ ಮಾಹಿತಿಗಳನ್ನು ಪಡೆದು ಖಾತೆಯ ಹಣ ಖಾಲಿ ಮಾಡುತ್ತಾರೆ.

ಡೌನ್ಲೋಡ್ ಮಾಡಿ ಹಣ ಕಳ್ಕೊಂಡ

ವಿನೋದ್ ಕುಮಾರ್ ಅಕ್ಟೋಬರ್ 4ರಂದು ಇದೇ ರೀತಿ ಅಪರಿಚಿತ ನಂಬರ್‌ನಿಂದ ಮದುವೆ ಆಮಂತ್ರಣ ಬಂದಿದೆ. ತನ್ನ ಗೊತ್ತಿರುವ ಆಪ್ತರು, ಶಾಲಾ ಗೆಳೆಯರು ಅಥವಾ ಹಿಂದಿನ ಕಚೇರಿಗಳ ಸಹೋದ್ಯೋಗಿಗಳು ಆಗಿರಬಹುದು ಎಂದು ವಿನೋದ್ ಕುಮಾರ್ ಕುತೂಹಲದಿಂದ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಡೌನ್ಲೋಡ್ ಆಮಂತ್ರಣ ಪತ್ರಿಕೆ ಓಪನ್ ಆಗಲೇ ಇಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಫೈಲ್ ಓಪನ್ ಆಗಲಿಲ್ಲ. ಕೆಲ ಹೊತ್ತು ಪ್ರಯತ್ನಿಸಿದ ವಿನೋದ್ ಕುಮಾರ್ ಬಳಿಕ ಪ್ರಯತ್ನ ನಲ್ಲಿಸಿದ್ದ. ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸಲು ಮುಂದಾಗಿದ್ದ, ಆಮಂತ್ರಣ ಪತ್ರಿಕೆ ಓಪನ್ ಆಗುತ್ತಿಲ್ಲ. ಇಮೇಜ್ ಕಳುಹಿಸುವಂತೆ ಮೆಸೇಜ್ ಕಳುಹಿಸಲು ಮುಂದಾಗಿದ್ದ. ಕೆಲವೇ ಹೊತ್ತಲ್ಲಿ ವಿನೋದ್ ಕುಮಾರ್‌ಗೆ ಟೆಕ್ಸ್ಟ್ ಸಂದೇಶ ಬಂದಿದೆ. ಖಾತೆಯಿಂದ 97,000 ರೂಪಾಯಿ ಕಡಿತಗೊಂಡಿರುವ ಸಂದೇಶ ಬಂದಿದೆ.

ದೂರು ನೀಡಿದ ಯುವಕ

ಖಾತೆಯಿಂದ ಹಣ ಕಡಿತಗೊಂಡ ಬೆನ್ನಲ್ಲೇ ತಾನು ಮೋಸಹೋಗಿರುವುದು ಅರಿವಾಗಿದೆ. ಹೀಗಾಗಿ ವಿನೋದ್ ಕುಮಾರ್, ಗುರುಗ್ರಾಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತ ಪೊಲೀಸರು ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ವ್ಯಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ, ಅಪರಿಚಿತ ನಂಬರ್‌ನಿಂದ ಬರವು ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಹೋಗಬೇಡಿ, ಕಳುಹಿಸುವ ಫೈಲ್ ಡೌನ್ಲೋಡ್ ಮಾಡಬೇಡಿ. ಇದರಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿದ್ದಾರೆ.

ಹಲವು ರೀತಿಯಲ್ಲಿ ಸೈಬರ್ ಫ್ರಾಡ್

ಫೋನ್ ಮೂಲಕ, ಸಂದೇಶ, ಲಿಂಕ್ ಮೂಲಕ ಸೈಬರ್ ಫ್ರಾಡ್ ಮಾಡುವ ಸಂಖ್ಯೆ ಒಂದೆಡೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ಬೇರೆ ವಿಧಾನದ ಮೂಲಕ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿದೆ. ಮೋಸ ಮಾಡುವವರ ಮಾಹಿತಿ ಪಡೆದು ಮುಖತಃ ಭೇಟಿಯಾಗುತ್ತಾರೆ. ತಾವು ಯಾವುದೇ ಕಂಪನಿ, ಪ್ರಚಾರ, ಐದಾಯ ಇಲಾಖೆ ಅದಿಕಾರಿಗಳು ಸೇರಿದಂತೆ ಹಲವು ಸೋಗಿನಲ್ಲಿ ವ್ಯಕ್ತಿಗಳನ್ನು ಭೇಟಿಯಾಗಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ.

ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ರೀತಿಯಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ಹೀಗಾಗಿ ಮೊಬೈಲ್ ಫೋನ್ ಬಳಸುವಾಗ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.

 



Source link

Leave a Reply

Your email address will not be published. Required fields are marked *