Headlines

ರಾಜ್ಯದಲ್ಲಿ ಬೀದಿನಾಯಿಗಳಷ್ಟೇ ಅಲ್ಲ, ಹುಚ್ಚರ ದಾಳಿ ಹೆಚ್ಚಳ, ಸೈಡ್‌ ಬಿಡದ್ದಕ್ಕೆ ಬಸ್ ಚಾಲಕನನಿಗೆ ಥಳಿತ!

ರಾಜ್ಯದಲ್ಲಿ ಬೀದಿನಾಯಿಗಳಷ್ಟೇ ಅಲ್ಲ,  ಹುಚ್ಚರ ದಾಳಿ ಹೆಚ್ಚಳ,  ಸೈಡ್‌ ಬಿಡದ್ದಕ್ಕೆ ಬಸ್ ಚಾಲಕನನಿಗೆ ಥಳಿತ!



ರಾಜ್ಯದಲ್ಲಿ ಬೀದಿನಾಯಿಗಳಷ್ಟೇ ಅಲ್ಲ,  ಹುಚ್ಚರ ದಾಳಿ ಹೆಚ್ಚಳ,  ಸೈಡ್‌ ಬಿಡದ್ದಕ್ಕೆ ಬಸ್ ಚಾಲಕನನಿಗೆ ಥಳಿತ!
<p><strong>ಬೀದರ್ (ಫೆ.4): </strong>ಸೈಡ್ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನೋರ್ವ ಬಸ್ ಚಾಲಕನೊಂದಿಗೆ ಅಮಾನವೀಯ ವರ್ತಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ(ಕೆ) ಗ್ರಾಮದ ಬಳಿ ನಡೆದಿದೆ. ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ ಅನ್ನು ಅಡ್ಡಗಟ್ಟಿದ ಸವಾರ, ಚಾಲಕನನ್ನು ಬಸ್‌ನಿಂದ ಕೆಳಕ್ಕೆ ಎಳೆದು ಹಾಡುಹಗಲೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ.</p><h2>ಗಂಭೀರವಾಗಿ ಗಾಯಗೊಂಡ ಚಾಲಕ ಆಸ್ಪತ್ರೆಗೆ ದಾಖಲು</h2><p>ಭಾಲ್ಕಿ ಬಸ್ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಾಲಕ ಚಂದ್ರಶೇಖರ ಸ್ವಾಮಿ ಹಲ್ಲೆಗೊಳಗಾದ ದುರ್ದೈವಿ. ಬೈಕ್ ಸವಾರನ ಮೃಗೀಯ ವರ್ತನೆಯಿಂದಾಗಿ ಚಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.</p><h3>ಸ್ಥಳಕ್ಕೆ ಪೊಲೀಸರ ಭೇಟಿ: ಆರೋಪಿ ಪರಾರಿ</h3><p>ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಭಾಲ್ಕಿ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಿಡಿಗೇಡಿ ಸವಾರನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.</p>



Source link

Leave a Reply

Your email address will not be published. Required fields are marked *