ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ! | India Condemns Attack On Kandla Bound Ship Mayuree Naree Strait Of Hormuz San

ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ! | India Condemns Attack On Kandla Bound Ship Mayuree Naree Strait Of Hormuz San



ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ! | India Condemns Attack On Kandla Bound Ship Mayuree Naree Strait Of Hormuz San

ಹಾರ್ಮುಜ್ ಜಲಸಂಧಿಯಲ್ಲಿ, ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್‌ನ ‘ಮಯೂರಿ ನಾರಿ’ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಘಟನೆಯು ಸಮುದ್ರಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಅಮಾಯಕ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದಿದೆ.

ನವದೆಹಲಿ (ಮಾ.11): ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್‌ನ ವಾಣಿಜ್ಯ ಹಡಗು ‘ಮಯೂರಿ ನಾರಿ’ (Mayuree Naree) ಮೇಲೆ ನಡೆದ ‘ಪ್ರಚೋದನಕಾರಿಯಲ್ಲದ’ ದಾಳಿಯನ್ನು ಭಾರತ ಬುಧವಾರ ಬಲವಾಗಿ ಖಂಡಿಸಿದೆ. ಈ ಹಡಗು ಭಾರತದ ಪಶ್ಚಿಮ ಕರಾವಳಿಯ ಗುಜರಾತ್‌ನಲ್ಲಿರುವ ಪ್ರಮುಖ ಬಂದರಾದ ಕಾಂಡ್ಲಾಗೆ ಪ್ರಯಾಣಿಸುತ್ತಿತ್ತು. “ಭಾರತದ ಕಾಂಡ್ಲಾಗೆ ಬರುತ್ತಿದ್ದ ಹಡಗಿನ ಬಗ್ಗೆ ನಮಗೆ ವರದಿಗಳು ಲಭ್ಯವಾಗಿವೆ. ಮಾರ್ಚ್ 11 ರಂದು ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್ ಹಡಗು ‘ಮಯೂರಿ ನಾರಿ’ ಮೇಲೆ ನಡೆದ ದಾಳಿಯನ್ನು ನಾವು ಗಮನಿಸಿದ್ದೇವೆ. ಈ ಹಡಗು ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿತ್ತು,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಈ ಸಂಘರ್ಷದ ಹಿಂದಿನ ಹಂತಗಳಲ್ಲಿ ನಡೆದ ಇಂತಹ ಅನೇಕ ದಾಳಿಗಳಿಂದ ಭಾರತೀಯ ನಾಗರಿಕರು ಸೇರಿದಂತೆ ಅಮೂಲ್ಯ ಜೀವಗಳು ಈಗಾಗಲೇ ನಷ್ಟವಾಗಿವೆ. ಪ್ರಸ್ತುತ ಈ ದಾಳಿಗಳ ತೀವ್ರತೆ ಮತ್ತು ಮಾರಣಾಂತಿಕತೆ ದಿನೇ ದಿನೇ ಹೆಚ್ಚುತ್ತಿರುವುದು ಕಂಡುಬರುತ್ತಿದೆ,” ಎಂದು ಸಚಿವಾಲಯವು ಕಳವಳ ವ್ಯಕ್ತಪಡಿಸಿದೆ.

ಸಮುದ್ರಯಾನ ಸ್ವಾತಂತ್ರ್ಯಕ್ಕೆ ಭಾರತದ ಒತ್ತಾಯ

ದಾಳಿಯನ್ನು ಖಂಡಿಸಿದ ವಿದೇಶಾಂಗ ಸಚಿವಾಲಯವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಸಮುದ್ರಯಾನ ಸ್ವಾತಂತ್ರ್ಯಕ್ಕೆ ಒತ್ತಾಯ ಮಾಡಿದೆ. “ವಾಣಿಜ್ಯ ಹಡಗುಗಳನ್ನು ಗುರಿ ಮಾಡುವುದು, ಅಮಾಯಕ ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ತರುವುದು ಅಥವಾ ನೌಕಾಯಾನ ಮತ್ತು ವಾಣಿಜ್ಯದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಭಾರತ ಪುನರುಚ್ಚರಿಸುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ನಾಗರಿಕರ ಸುರಕ್ಷತೆಗೆ ಆದ್ಯತೆ

ಹಿಂದಿನ ಕಡಲ ದಾಳಿಗಳಲ್ಲೂ ಭಾರತೀಯ ನಾಗರಿಕರು ಬಲಿಯಾಗಿರುವುದನ್ನು ಸಚಿವಾಲಯವು ನೆನಪಿಸಿದೆ. ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದರಿಂದ ಮತ್ತು ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ತರುವುದರಿಂದ ಎಲ್ಲಾ ಪಕ್ಷಗಳು ದೂರವಿರಬೇಕು ಎಂದು ಭಾರತ ಕರೆ ನೀಡಿದೆ. ಅಡೆತಡೆಯಿಲ್ಲದ ಸಮುದ್ರ ವ್ಯಾಪಾರ ಮತ್ತು ನೌಕಾಯಾನ ಸ್ವಾತಂತ್ರ್ಯದ ಪರವಾಗಿ ಭಾರತ ತನ್ನ ನಿಲುವನ್ನು ಮತ್ತೊಮ್ಮೆ ದೃಢಪಡಿಸಿದೆ.



Source link

Leave a Reply

Your email address will not be published. Required fields are marked *