Megastar Chiranjeevi ಚಿತ್ರಕ್ಕೆ ಬಂದ ರಾಷ್ಟ್ರಪ್ರಶಸ್ತಿ ವಾಪಸ್ ಪಡೆಯಲು ನಡೆದಿತ್ತು ಸಂಚು! ಏನಿದು ವಿವಾದ? | Lyricist Reveals Conspiracy Against Chiranjeevi Movie National Award Gvd

Megastar Chiranjeevi ಚಿತ್ರಕ್ಕೆ ಬಂದ ರಾಷ್ಟ್ರಪ್ರಶಸ್ತಿ ವಾಪಸ್ ಪಡೆಯಲು ನಡೆದಿತ್ತು ಸಂಚು! ಏನಿದು ವಿವಾದ? | Lyricist Reveals Conspiracy Against Chiranjeevi Movie National Award Gvd



Megastar Chiranjeevi ಚಿತ್ರಕ್ಕೆ ಬಂದ ರಾಷ್ಟ್ರಪ್ರಶಸ್ತಿ ವಾಪಸ್ ಪಡೆಯಲು ನಡೆದಿತ್ತು ಸಂಚು! ಏನಿದು ವಿವಾದ? | Lyricist Reveals Conspiracy Against Chiranjeevi Movie National Award Gvd

ಮೆಗಾಸ್ಟಾರ್ ಚಿರಂಜೀವಿ ನಟನೆಯ ಒಂದು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಆದರೆ ಆ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಕೆಲವರು ಸಂಚು ರೂಪಿಸಿದ್ದರು. ಅಷ್ಟಕ್ಕೂ ಆ ಸಂಚು ಯಾಕೆ ನಡೆಯಿತು? ಆ ಸಿನಿಮಾ ಯಾವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಮಾಸ್ ಸಿನಿಮಾಗಳ ಜೊತೆಗೆ ನಟನೆಗೆ ಪ್ರಾಮುಖ್ಯತೆ ಇರುವ, ಸಂದೇಶ ಸಾರುವ ಚಿತ್ರಗಳಲ್ಲೂ ನಟಿಸಿದ್ದಾರೆ. ‘ಠಾಗೋರ್’ ಅಂತಹ ಅದ್ಭುತ ಚಿತ್ರಗಳಲ್ಲಿ ಒಂದು. ವಿವಿ ವಿನಾಯಕ್ ನಿರ್ದೇಶನದ ಈ ಚಿತ್ರ 2003ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಭ್ರಷ್ಟಾಚಾರ ನಿರ್ಮೂಲನೆ ಕುರಿತ ಈ ಸಿನಿಮಾ ಅಂದಿನ ಯುವಕರು ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದಿತ್ತು.

ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ‘ನೇನು ಸೈತಂ ಪ್ರಪಂಚಾಗ್ನಿಕಿ’ ಹಾಡು ಮೈನವಿರೇಳಿಸುತ್ತದೆ. ಈ ಹಾಡನ್ನು ಸುದ್ದಾಲ ಅಶೋಕ್ ತೇಜ ಬರೆದಿದ್ದಾರೆ. ಅವರ ಸಾಹಿತ್ಯ ಈ ಹಾಡಿಗೆ ಅದ್ಭುತವಾಗಿ ಹೊಂದಿಕೊಂಡಿತ್ತು. ಶ್ರೀಶ್ರೀ ಅವರ ‘ನೇನು ಸೈತಂ’ ಸಾಲುಗಳನ್ನು ಬಳಸಿಕೊಂಡರೂ, ಅಶೋಕ್ ತೇಜ ಹಾಡನ್ನು ಅದ್ಭುತವಾಗಿ ರಚಿಸಿದ್ದರು.

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಈ ಹಾಡನ್ನು ಬೇರೆಯೇ ಮಟ್ಟಕ್ಕೆ ಕೊಂಡೊಯ್ದಿತ್ತು. ಈ ಹಾಡಿಗಾಗಿ ಸುದ್ದಾಲ ಅಶೋಕ್ ತೇಜ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಆದರೆ, ಅಶೋಕ್ ತೇಜ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡುವುದು ಸರಿ ಅಲ್ಲ, ಅವರು ಅದಕ್ಕೆ ಅರ್ಹರಲ್ಲ ಎಂದು ಕೆಲವರು ಸಂಚು ಮಾಡಿದರು. ಪ್ರಶಸ್ತಿ ಹಿಂಪಡೆಯುವಂತೆ ದಕ್ಷಿಣ ಭಾರತದ ಕೆಲವರು ಜ್ಯೂರಿಗೆ ಪತ್ರ ಬರೆದಿದ್ದರು.

ಈ ವಿಚಾರವನ್ನು ಸುದ್ದಾಲ ಅಶೋಕ್ ತೇಜ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ತಮ್ಮ ವಿರುದ್ಧ ಸಂಚು ನಡೆದಿದ್ದು ನಿಜ ಎಂದಿದ್ದಾರೆ. ‘ಅಲ್ಲಿಯವರೆಗೂ ನಾನು ಚಿರಂಜೀವಿ ಅವರಿಗೆ ಒಂದೇ ಒಂದು ಹಾಡು ಬರೆದಿರಲಿಲ್ಲ. 9 ವರ್ಷಗಳ ನಂತರ ನನಗೆ ಅವಕಾಶ ಸಿಕ್ಕಿತು. ಆ ಹಾಡಿನಲ್ಲಿ ಶ್ರೀಶ್ರೀ ಬರೆದ ‘ನೇನು ಸೈತಂ’ ಸಾಲು ಇರಬೇಕೆಂದು ಚಿರಂಜೀವಿ ಕೇಳಿಕೊಂಡಿದ್ದರು. ಅದಕ್ಕಾಗಿಯೇ ನಾನು ಆ ಸಾಲನ್ನು ಬಳಸಿದೆ’ ಎಂದಿದ್ದಾರೆ.

ಮರೆಯಲಾಗದ ಅನುಭೂತಿ

ಇದನ್ನೇ ಮುಂದಿಟ್ಟುಕೊಂಡು, ಇದು ಕಾಪಿ ಹಾಡು, ಅಶೋಕ್ ತೇಜಗೆ ನೀಡಿದ ರಾಷ್ಟ್ರ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಕೆಲವರು ಪಿತೂರಿ ನಡೆಸಿದರು. ‘ಚಿರಂಜೀವಿ ಅವರಿಗಾಗಿ ಬರೆದ ಮೊದಲ ಹಾಡಿಗೇ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಮೊದಲ ಮ್ಯಾಚ್‌ನಲ್ಲೇ ಸೆಂಚುರಿ ಬಾರಿಸಿದಷ್ಟು ಖುಷಿ ಕೊಟ್ಟಿತು. ಅಬ್ದುಲ್ ಕಲಾಂ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ್ದು ಮತ್ತೊಂದು ಮರೆಯಲಾಗದ ಅನುಭವ’ ಎಂದು ಅಶೋಕ್ ತೇಜ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *