Headlines

ವಿಷ್ಣುವರ್ಧನ್‌ ಜೊತೆ ವಿಷ್ಣುಸೇನಾ ಸಿನಿಮಾದಲ್ಲಿ ನಟಿಸಿದ್ದ ಮಹಾಭಾರತದ ಕರ್ಣ ಕ್ಯಾನ್ಸರ್‌ನಿಂದ ನಿಧನ! | Mahabharat Karna Pankaj Dheer Dies At 68 After Cancer Battle San

ವಿಷ್ಣುವರ್ಧನ್‌ ಜೊತೆ ವಿಷ್ಣುಸೇನಾ ಸಿನಿಮಾದಲ್ಲಿ ನಟಿಸಿದ್ದ ಮಹಾಭಾರತದ ಕರ್ಣ ಕ್ಯಾನ್ಸರ್‌ನಿಂದ ನಿಧನ! | Mahabharat Karna Pankaj Dheer Dies At 68 After Cancer Battle San



ವಿಷ್ಣುವರ್ಧನ್‌ ಜೊತೆ ವಿಷ್ಣುಸೇನಾ ಸಿನಿಮಾದಲ್ಲಿ ನಟಿಸಿದ್ದ ಮಹಾಭಾರತದ ಕರ್ಣ ಕ್ಯಾನ್ಸರ್‌ನಿಂದ ನಿಧನ! | Mahabharat Karna Pankaj Dheer Dies At 68 After Cancer Battle San

Veteran Actor Pankaj Dheer Dies ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರದ ಮೂಲಕ ಮನೆಮಾತಾಗಿದ್ದ ಮತ್ತು ಡಾ. ವಿಷ್ಣುವರ್ಧನ್‌ ಅವರ ‘ವಿಷ್ಣುಸೇನಾ’ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಪಂಕಜ್ ಧೀರ್, ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟದ ನಂತರ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. 

ಬೆಂಗಳೂರು (ಅ.15): ಡಾ. ವಿಷ್ಣುವರ್ಧನ್‌ ನಟಿಸಿದ್ದ ವಿಷ್ಣುಸೇನಾ ಸಿನಿಮಾದಲ್ಲಿ ಡಿಸಿಪಿ ಸಮರ್ಜಿತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್‌ನ ಖ್ಯಾತ ನಟ ಪಂಕಜ್‌ ಧೀರ್‌ ದೀರ್ಘಕಾಲದ ಕ್ಯಾನ್ಸರ್‌ನೊಂದಿಗಿನ ಹೋರಾಟದ ಬಳಿಕ ಮಂಗಳವಾರ ನಿಧನರಾದರು. ವಿಷ್ಣುಸೇನಾಗಿಂತಲೂ ಮುನ್ನ ಟಿವಿ ಧಾರವಾಹಿಯಾಗಿ ಭಾರೀ ಪ್ರಮಾಣದ ಮನ್ನಣೆ ಪಡೆದಿದ್ದ ಮಹಾಭಾರತದಲ್ಲಿ ಕರ್ಣ ಪಾತ್ರದ ಮೂಲಕ ಅವರು ಜನಮಾನಸದಲ್ಲಿ ಪ್ರಸಿದ್ಧರಾಗಿದ್ದರು.

ದೀರ್ಘಕಾಲದಿಂದ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸಿದ್ದ ಪಂಕಜ್‌ ಧೀರ್‌ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. ಈ ಸುದ್ದಿಯನ್ನು ಅವರ ಆಪ್ತ ಅಮಿತ್ ಬೆಹ್ಲ್ ದೃಢಪಡಿಸಿದ್ದಾರೆ. ಧೀರ್ ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅವರು ಈ ಹಿಂದೆ ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು, ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅನಾರೋಗ್ಯವು ಮರುಕಳಿಸಿತು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಅಂತ್ಯಕ್ರಿಯೆ

ಚಲನಚಿತ್ರ ಮತ್ತು ಟಿವಿ ಕಲಾವಿದರ ಸಂಘ (CINTAA) ಮಂಗಳವಾರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಸುದ್ದಿಯನ್ನು ತೀವ್ರ ದುಃಖದಿಂದ ಹಂಚಿಕೊಂಡಿದೆ. ಧೀರ್ ಅವರು ಸಂಘದ ಮಾಜಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಅದರ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಕ್ಟೋಬರ್ 15 ರಂದು ಮುಂಬೈನ ವಿಲೇ ಪಾರ್ಲೆ (ಪಶ್ಚಿಮ) ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

1988 ರಲ್ಲಿ ಬಿ.ಆರ್. ಚೋಪ್ರಾ ಅವರ ಮಹಾಕಾವ್ಯ ಮಹಾಭಾರತ ಸೀರಿಯಲ್‌ ರೂಪದಲ್ಲಿ ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಲ್ಲಿನ ಕರ್ಣನ ಪಾತ್ರದಲ್ಲಿ ನಟಿಸುವ ಮೂಲಕ ಧೀರ್ ಹೆಸರುವಾಸಿಯಾಗಿದ್ದಾರೆ, ಈ ಪಾತ್ರ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ಕರ್ಣನ ಪಾತ್ರದಲ್ಲಿನ ಅವರ ಚಿತ್ರಗಳನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖದ ರೀತಿಯಲ್ಲಿ ಬಳಸಲಾಗುತ್ತಿತ್ತು. ಅವರ ಚಿತ್ರಣವನ್ನು ಆಧರಿಸಿದ ಕರ್ಣನ ಪ್ರತಿಮೆಗಳನ್ನು ಕೆಲವು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ.

ಆ ಪ್ರಮುಖ ಪಾತ್ರದ ಹೊರತಾಗಿ, ಧೀರ್ ದೂರದರ್ಶನ ಮತ್ತು ಸಿನೆಮಾದಲ್ಲಿ ದೀರ್ಘ ವೃತ್ತಿಜೀವನವನ್ನು ಹೊಂದಿದ್ದರು, ಕೋರ್ಟ್‌ ಡ್ರಾಮಾ, ಐತಿಹಾಸಿಕ ಸಾಹಸಗಾಥೆಗಳು ಮತ್ತು ಪೌರಾಣಿಕ ಸೀರಿಯಲ್‌ಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದರು. ಅವರು ನಟನಾ ಅಕಾಡೆಮಿ ಮತ್ತು ನಿರ್ಮಾಣ ಸ್ಟುಡಿಯೋವನ್ನು ಸಹ ಸ್ಥಾಪಿಸಿದರು, ಭವಿಷ್ಯದ ನಟರಿಗೆ ತರಬೇತಿ ನೀಡಲು ಸಹಾಯ ಮಾಡಿದರು.

ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದಾರೆ. ಪರದೆಯ ಮೇಲಿನ ಅವರ ಉಪಸ್ಥಿತಿಯನ್ನು ಮಾತ್ರವಲ್ಲದೆ, ತೆರೆಮರೆಯಲ್ಲಿ ಅವರ ದೃಢನಿಶ್ಚಯ, ನಮ್ರತೆ ಮತ್ತು ಔದಾರ್ಯವನ್ನು ಅನೇಕರು ನೆನಪಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *