Breaking: ಹೆಂಡತಿಯರನ್ನು ಬಲಿಕೊಟ್ಟು 2026ರ ಹೊಸ ವರ್ಷ ಸ್ವಾಗತಿಸಿದ ಕಿರಾತಕ ಗಂಡಂದಿರು! | Cruel Husbands Welcomed New Year 2026 By Sacrificing Their Wives Sat

Breaking: ಹೆಂಡತಿಯರನ್ನು ಬಲಿಕೊಟ್ಟು 2026ರ ಹೊಸ ವರ್ಷ ಸ್ವಾಗತಿಸಿದ ಕಿರಾತಕ ಗಂಡಂದಿರು! | Cruel Husbands Welcomed New Year 2026 By Sacrificing Their Wives Sat



Breaking: ಹೆಂಡತಿಯರನ್ನು ಬಲಿಕೊಟ್ಟು 2026ರ ಹೊಸ ವರ್ಷ ಸ್ವಾಗತಿಸಿದ ಕಿರಾತಕ ಗಂಡಂದಿರು! | Cruel Husbands Welcomed New Year 2026 By Sacrificing Their Wives Sat

ಹೊಸ ವರ್ಷದ ಸಂಭ್ರಮದ ನಡುವೆ, ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಇಬ್ಬರು ಗೃಹಿಣಿಯರು ತಮ್ಮ ಪತಿಯರಿಂದಲೇ ಹತ್ಯೆಯಾಗಿದ್ದಾರೆ. ವಿಜಯನಗರದಲ್ಲಿ ಜಾನ್ಸಿ ಎಂಬುವವರನ್ನು ಪತಿ ಸೆಲ್ವಕುಮಾರ್ ಮತ್ತು ಹುಬ್ಬಳ್ಳಿಯಲ್ಲಿ ಅಂಜುಮ್ ಎಂಬುವವರನ್ನು ಪತಿ ಮೆಹಬೂಬ್ ಕೊಲೆ ಮಾಡಿದ್ದಾರೆ.

ವಿಜಯನಗರ/ಹುಬ್ಬಳ್ಳಿ (ಜ.01): 2026ರ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯದ ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಗೃಹಿಣಿಯರು ಬಲಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪತ್ನಿಯರನ್ನು ಪತಿಯರೇ ಕೊಲೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ.

ಘಟನೆ 1-ಗಂಡನ ಕ್ರೌರ್ಯಕ್ಕೆ ಜಾನ್ಸಿ ಬಲಿ

ವಿಜಯನಗರದಲ್ಲಿ ಪತ್ನಿಯ ಕೊಲೆ, ಆರೋಪಿ ಬಂಧನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ 76 ವೆಂಕಟಾಪುರ ಕ್ಯಾಂಪ್ ಗ್ರಾಮದಲ್ಲಿ ಬುಧವಾರ ರಾತ್ರಿ ಭೀಕರ ಕೊಲೆಯೊಂದು ಸಂಭವಿಸಿದೆ. ಹೊಸಪೇಟೆಯ ಅಮರಾವತಿ ನಿವಾಸಿ ಸೆಲ್ವಕುಮಾರ್ (39) ಎಂಬಾತ ತನ್ನ ಪತ್ನಿ ಜಾನ್ಸಿ ಎಂಬಾಕೆಯನ್ನು ಗಲಾಟೆಯ ನಡುವೆ ಹತ್ಯೆ ಮಾಡಿದ್ದಾನೆ. ಪತಿ-ಪತ್ನಿ ನಡುವೆ ನಡೆಯುತ್ತಿದ್ದ ಸತತ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಕಮಲಾಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ತಲೆಮರೆಸಿಕೊಂಡಿದ್ದ ಆರೋಪಿ ಸೆಲ್ವಕುಮಾರ್‌ನನ್ನು ಇಂದು (ಗುರುವಾರ) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ 2- ಅಂಜುಮ್ ಕತ್ತು ಹಿಸುಕಿದ ಗಂಡ

ಹುಬ್ಬಳ್ಳಿಯಲ್ಲಿ ಹೊಸ ವರ್ಷದಂದೇ ಹೆಂಡತಿಯ ಕತ್ತು ಹಿಸುಕಿ ಕೊಂದ ಪತಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಆನಂದ ನಗರದಲ್ಲಿ ಹೊಸ ವರ್ಷದ ಮೊದಲ ದಿನವೇ ಹೆಣ ಬಿದ್ದಿದೆ. ಅಂಜುಮ್ ಎಂಬುವವರನ್ನು ಆಕೆಯ ಪತಿ ಮೆಹಬೂಬ್ ಫಲಿಬಂದ್ ಎಂಬಾತ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ, ಮೆಹಬೂಬ್ ತನ್ನ ಪತ್ನಿಯ ಪ್ರಾಣ ತೆಗೆದಿದ್ದಾನೆ. ಸ್ಥಳಕ್ಕೆ ಹಳೆ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಅಂಜುಮ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಎರಡೂ ಪ್ರಕರಣಗಳಲ್ಲಿ ಕೌಟುಂಬಿಕ ಕಲಹ ಮತ್ತು ಕೋಪದ ಭರದಲ್ಲಿ ಸಂಭವಿಸಿದ ಸಾವುಗಳು ಸಂಬಂಧಗಳ ನಡುವಿನ ಬಿರುಕನ್ನು ಎತ್ತಿ ತೋರಿಸುತ್ತಿವೆ. ಪೊಲೀಸರು ಎರಡೂ ಕಡೆ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *