ಇದು ಇಡೀ ಬೆಂಗಳೂರೇ ಖುಷಿ ಪಡೋ ಸುದ್ದಿ, 2030ಕ್ಕೆ ಇಡೀ ರಾಜಧಾನಿ ವ್ಯಾಪಿಸಲಿದೆ ನಮ್ಮ ಮೆಟ್ರೋ! | Bengaluru Metro To Expand 225km By 2030 Bmrcl Md Reveals Major Upgrade Plans Gow

ಇದು ಇಡೀ ಬೆಂಗಳೂರೇ ಖುಷಿ ಪಡೋ ಸುದ್ದಿ, 2030ಕ್ಕೆ ಇಡೀ ರಾಜಧಾನಿ ವ್ಯಾಪಿಸಲಿದೆ ನಮ್ಮ ಮೆಟ್ರೋ! | Bengaluru Metro To Expand 225km By 2030 Bmrcl Md Reveals Major Upgrade Plans Gow



ಇದು ಇಡೀ ಬೆಂಗಳೂರೇ ಖುಷಿ ಪಡೋ ಸುದ್ದಿ, 2030ಕ್ಕೆ ಇಡೀ ರಾಜಧಾನಿ ವ್ಯಾಪಿಸಲಿದೆ ನಮ್ಮ ಮೆಟ್ರೋ! | Bengaluru Metro To Expand 225km By 2030 Bmrcl Md Reveals Major Upgrade Plans Gow

ಮೆಟ್ರೋ ಜಾಲವು 2027ರ ವೇಳೆಗೆ 175 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ, ಇದರಲ್ಲಿ ಹಳದಿ, ಪಿಂಕ್ ಮತ್ತು ನೀಲಿ ಮಾರ್ಗಗಳು ಸೇರಿವೆ. ಸಾರಿಗೆ ಸುಧಾರಣೆ ಜೊತೆಗೆ, ಅಂಗಾಂಗ ಸಾಗಣೆಯಂತಹ ತುರ್ತು ವೈದ್ಯಕೀಯ ಸೇವೆಗಳಿಗೆ ‘ಶೂನ್ಯ ಸಂಚಾರ ಕಾರಿಡಾರ್’ ಪರಿಕಲ್ಪನೆಯ ಮೂಲಕ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ಜಾಲವು ಮುಂದಿನ ಕೆಲ ವರ್ಷಗಳಲ್ಲಿ ದೇಶದಲ್ಲೇ ವೇಗವಾಗಿ ವಿಸ್ತರಿಸುವ ನಗರ ಸಾರಿಗೆ ಜಾಲಗಳಲ್ಲಿ ಒಂದಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಹೇಳಿದ್ದಾರೆ. ಶೇಷಾದ್ರಿಪುರಂನಲ್ಲಿ ಅಪೋಲೋ ಆಸ್ಪತ್ರೆಯ ಹೃದಯ–ಶ್ವಾಸಕೋಶ ಕಸಿ ಮತ್ತು ಯಾಂತ್ರಿಕ ರಕ್ತಪರಿಚಲನಾ ಬೆಂಬಲ (MCS) ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಟ್ರೋ ಜಾಲದ ಭವಿಷ್ಯದ ಸಂಪೂರ್ಣವಾಗಿ ಖುಷಿಪಟ್ಟರು.

ಮೆಟ್ರೋ ಜಾಲದ ದಿಢೀರ್ ವಿಸ್ತರಣೆ

ನಮ್ಮ ಮೆಟ್ರೋ 2011ರಲ್ಲಿ ಕೇವಲ 6.7 ಕಿ.ಮೀ ಜಾಲದೊಂದಿಗೆ ಆರಂಭವಾಯಿತು. ಆಗಸ್ಟ್ 2025ರಲ್ಲಿ ಹಳದಿ ಮಾರ್ಗ (RV ರಸ್ತೆ–ಬೊಮ್ಮಸಂದ್ರ) ಸಂಪೂರ್ಣ ಕಾರ್ಯಾರಂಭವಾದಾಗ, ಕಾರ್ಯನಿರ್ವಹಣೆಯ ಜಾಲ 96 ಕಿ.ಮೀ ತಲುಪಲಿದೆ. ಮುಂದಿನ ವರ್ಷ 21 ಕಿ.ಮೀ ಉದ್ದದ ಪಿಂಕ್ ಲೈನ್ (ಕಲೇನಾ ಅಗ್ರಹಾರ–ನಾಗವಾರ) ಪ್ರಾರಂಭವಾಗಲಿದೆ. ಇದರಲ್ಲಿ 7.5 ಕಿ.ಮೀ ಎಲಿವೇಟೆಡ್, 13.5 ಕಿ.ಮೀ ಭೂಗತ ಮಾರ್ಗ. 2027ರ ಅಂತ್ಯದ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗ ಸಿದ್ಧವಾಗಲಿದೆ. 2027ರ ಹೊತ್ತಿಗೆ ಒಟ್ಟಾರೆಯಾಗಿ ಮೆಟ್ರೋ ಜಾಲವು 175 ಕಿ.ಮೀ ಗೆ ತಲುಪುತ್ತದೆ ಎಂದು ಅವರು ಹೇಳಿದರು, ಬೆಂಗಳೂರು ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿದ್ದು, ಮೆಟ್ರೋ ಜೊತೆಗೆ ಉಪನಗರ ರೈಲು ಯೋಜನೆಗಳು ಇದನ್ನು ದೂರ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಲಿವೆ ಎಂದರು.

ತುರ್ತು ಚಿಕಿತ್ಸೆಯಲ್ಲಿ ಮೆಟ್ರೋದ ಜೀವ ರಕ್ಷಕ ಪಾತ್ರ

ಸಾರ್ವಜನಿಕ ಸಾರಿಗೆಯ ಹೊರತಾಗಿ, ತುರ್ತು ವೈದ್ಯಕೀಯ ಸೇವೆಗಳಲ್ಲಿ ಮೆಟ್ರೋದ ಮಹತ್ವವನ್ನು ಎಂ.ಡಿ. ರವಿಶಂಕರ್ ವಿಶೇಷವಾಗಿ ಗುರುತಿಸಿದರು. ಆದಷ್ಟು ಕಡಿಮೆ ಸಮಯದಲ್ಲಿ ಅಗತ್ಯ ಅಂಗಾಂಗಗಳನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ. ಯಶವಂತಪುರದಿಂದ ಶೇಷಾದ್ರಿಪುರಂವರೆಗೆ 18 ನಿಮಿಷದಲ್ಲಿ ದಾನಿ ಹೃದಯವನ್ನು ಸಾಗಿಸಿದ ಘಟನೆ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಈ ವರ್ಷ ಮಾತ್ರ ನಾಲ್ಕು ಅಂಗಾಂಗ ಕಸಿ ಪ್ರಕರಣಗಳಿಗೆ ಮೆಟ್ರೋ ನೆರವಾಗಿದೆ. ಅಕ್ಟೋಬರ್ 30ರಂದು ಒಂದೇ ದಿನದಲ್ಲಿ ಎರಡು ಕಸಿಗಳಿಗೆ ನೆರವಾಯಿತು ಎಂದು ಅವರು ಹೇಳಿದರು.\

ಎಲ್ಲಾ ನಿಲ್ದಾಣಗಳಲ್ಲಿ 4–6 ನಿಮಿಷದ ಹೆಡ್‌ವೇ ಸಾಧಿಸುವುದು ನಮ್ಮ ದೀರ್ಘಕಾಲದ ಗುರಿ. ಇದು ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಜನರಿಗೆ ಅಪಾರ ನೆರವಾಗುತ್ತದೆ ‘ಶೂನ್ಯ ಸಂಚಾರ ಕಾರಿಡಾರ್’ ನಿಲ್ದಾಣಗಳನ್ನು ಬಿಟ್ಟು ಓಡುವ ರೈಲುಗಳ ಯೋಚನೆ. ಅಂಗಾಂಗಗಳನ್ನು ಇನ್ನಷ್ಟು ವೇಗವಾಗಿ ಸಾಗಿಸಲು BMRCL Zero Traffic Corridor ಪರಿಕಲ್ಪನೆಯನ್ನು ಪರಿಶೀಲಿಸುತ್ತಿದೆ ಎಂದು ರವಿಶಂಕರ್ ವಿವರಿಸಿದರು.

ರೈಲುಗಳು ನಿಲ್ದಾಣಗಳಲ್ಲಿ ನಿಲ್ಲದೇ ನೇರವಾಗಿ ಓಡಲು ಸಾಧ್ಯವಾದರೆ, 18 ನಿಮಿಷದ ಪ್ರಯಾಣವನ್ನು 5–7 ನಿಮಿಷಗಳಿಗೆ ಕಡಿತಗೊಳಿಸಬಹುದಾಗಿದೆ. ಸಾರ್ವಜನಿಕ ಸೇವೆಯಲ್ಲಿ ಇದು ಸಾಧ್ಯವಲ್ಲದಿದ್ದರೂ, ತುರ್ತು ಸೇವೆಗಳಿಗೆ ನಾವು ಈ ಆಯ್ಕೆಯನ್ನು ಪರಿಶೀಲಿಸುತ್ತಿದ್ದೇವೆ. ಆದರೆ, ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಈ ಯೋಚನೆಗೆ ಕಾರ್ಯಾಚರಣೆಯ ಸವಾಲುಗಳಿವೆ ಎಂದರು. ನಿಲ್ದಾಣಗಳನ್ನು ಬಿಟ್ಟು ಓಡುವುದು ಸಾಮಾನ್ಯ ಸೇವೆಯಲ್ಲಿ ಸಾಧ್ಯವಿಲ್ಲ. ಇದು ಪ್ರಯಾಣಿಕರಿಗೆ ಅನಾನುಕೂಲ. ಆದರೆ ಕಾರ್ಯಾಚರಣಾ ವೇಳೆಯ ಹೊರಗೆ ಅಥವಾ ಖಾಲಿ ರೈಲುಗಳಿಂದ ಪರಿಶೀಲಿಸಬಹುದು.

ಹೊಸ ರೈಲುಗಳ ಆಗಮನ

ಹೊಸ ರೈಲುಗಳ ಸಪ್ಲೈ ಚೀನಾ ಆಮದು ನಿರ್ಬಂಧಗಳಿಂದ ವಿಳಂಬವಾಗಿತ್ತು. ಈಗ ನಿರ್ಬಂಧ ತೆಗೆದುಹಾಕಲ್ಪಟ್ಟಿರುವುದರಿಂದ ರೈಲುಗಳು ಕ್ರಮವಾಗಿ ಬರುತ್ತಿವೆ. ಹಳದಿ ಮಾರ್ಗದ ಆರನೇ ರೈಲು ಹೆಬ್ಬಗೋಡಿ ಡಿಪೋ ತಲುಪಿದೆ. ಹಳದಿ ಮಾರ್ಗವನ್ನು ಆರಂಭದಲ್ಲಿ 25 ನಿಮಿಷ ಹೆಡ್‌ವೇಯೊಂದಿಗೆ ಪ್ರಾರಂಭಿಸಿದ್ದೆವು. ಈಗ ಅದು 15 ನಿಮಿಷವಾಗಿದೆ. ಆರನೇ ರೈಲು ಸೇವೆಗೆ ಸೇರಿಸಿದ ಬಳಿಕ ಡಿಸೆಂಬರ್ ವೇಳೆಗೆ ಹೆಡ್‌ವೇ 12 ನಿಮಿಷಕ್ಕೆ ಇಳಿಯಲಿದೆ ಎಂದರು.



Source link

Leave a Reply

Your email address will not be published. Required fields are marked *