‘ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ ‘ಚಿಲ್ಲರ್ ಕೆಲಸ’: ಬಿಜೆಪಿ ವಿರುದ್ಧ ವಿಜಯಾನಂದ ಕಾಶೆಪ್ಪನವರ್ ಕಿಡಿ | Check Bjp Leaders Homes First Mla Kashappanavar Counters Luxury Watch Row

‘ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ ‘ಚಿಲ್ಲರ್ ಕೆಲಸ’: ಬಿಜೆಪಿ ವಿರುದ್ಧ ವಿಜಯಾನಂದ ಕಾಶೆಪ್ಪನವರ್ ಕಿಡಿ | Check Bjp Leaders Homes First Mla Kashappanavar Counters Luxury Watch Row



‘ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ ‘ಚಿಲ್ಲರ್ ಕೆಲಸ’: ಬಿಜೆಪಿ ವಿರುದ್ಧ ವಿಜಯಾನಂದ ಕಾಶೆಪ್ಪನವರ್ ಕಿಡಿ | Check Bjp Leaders Homes First Mla Kashappanavar Counters Luxury Watch Row

Luxury Watch Row: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ದುಬಾರಿ ವಾಚ್‌ಗಳ ಕುರಿತ ಬಿಜೆಪಿ ಟೀಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ಮನೆಗಳನ್ನು ಮೊದಲು ಪರಿಶೀಲಿಸಲಿ ಎಂದು ಸವಾಲು ಹಾಕಿದ ಅವರು, ಇದು ‘ಚಿಲ್ಲರ್ ಕೆಲಸ’ ಎಂದಿದ್ದಾರೆ. 

ಕೂಡಲಸಂಗಮ (ಡಿ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದುಬಾರಿ ವಾಚ್‌ಗಳ ಕುರಿತು ಬಿಜೆಪಿ ನಾಯಕರು ಟೀಕಿಸುತ್ತಿರುವ ವಿಚಾರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕೂಡಲಸಂಗಮದಲ್ಲಿ ತಿರುಗೇಟು ನೀಡಿದ್ದು, ‘ನೋಡ್ರಿ, ಯಾವ 40 ಲಕ್ಷ, 5 ಕೋಟಿ, 10 ಕೋಟಿ ದುಬಾರಿ ವಾಚ್ ಹಾಕಿಕೊಂಡು ಇವರು (ಬಿಜೆಪಿ), ಈ ರಾಜ್ಯದಲ್ಲಿ ಸ್ವಲ್ಪ ಬಿಜೆಪಿಯವರ ಮನೆ ಚೆಕ್ ಮಾಡಲಿ ಒಂದು ಸಲ’ ಎಂದು ಅವರು ಸವಾಲು ಹಾಕಿದರು.

ನಮ್ಮ ಮನೆಗಳ ಮೇಲೆ ಸಿಬಿಐ, ಇ.ಡಿ. ಅವರನ್ನು ಕಳಿಸಿ ರೇಡ್ ಮಾಡಿಸ್ತಾರಲ್ಲ, ಒಂದು ಸಲ ಆದ್ರೂ ಮಾಜಿ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಬಿಜೆಪಿಯವರ ಮನೆ ಚೆಕ್ ಮಾಡಿಸಿರಿ. ಈಶ್ವರಪ್ಪನವರ ಮನೆಯಲ್ಲಿ ಕೌಂಟಿಂಗ್ ಮಷೀನ್ ಕೂಡ ಸಿಕ್ಕಿತ್ತು. ಬಿಜೆಪಿ ಅವರ ಬಳಿ ಇನ್ನೂ ದುಬಾರಿ ವಾಚ್‌ಗಳಿವೆ, ಒಂದೊಂದು ಕೋಟಿ, ಎರಡು ಕೋಟಿ ವಾಚ್‌ಗಳಿವೆ. ಇದೇನು 40 ಲಕ್ಷ ರೂಪಾಯಿ ವಾಚ್? ಇಷ್ಟಕ್ಕೆ ದೊಡ್ಡದು ಮಾಡ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ ‘ಚಿಲ್ಲರ್ ಕೆಲಸ’

ಡಿಕೆ ಶಿವಕುಮಾರ್ ಅವರು ವಾಚ್‌ಗಳ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಹಾಗಿದ್ದರೂ ಟೀಕಿಸುವುದು ‘ಚಿಲ್ಲರ್ ಕೆಲಸ’ ಎಂದು ಕಾಶಪ್ಪನವರ ಕಿಡಿಕಾರಿದರು. ‘ಇವರಿಗೆ ಇನ್ನೊಬ್ಬರ ಮನೆಯಲ್ಲಿ ದೋಸೆ ತೂತಿದೆ! ತೂತಿದೆಯೋ ಇಲ್ಲವೋ? ಅವರ ಮನೆ ದೋಸೆ ಪ್ಲೇನ್ ಆಗಿದೆಯಾ? ಇದನ್ನೆಲ್ಲಾ ಯಾಕೆ ಲೆಕ್ಕ ಹಾಕ್ತಾರೆ ಬಿಜೆಪಿಯವರು?’ ಎಂದು ಲೇವಡಿ ಮಾಡಿದರು.

ವಿರೋಧ ಪಕ್ಷದಲ್ಲಿ ಕೂತವರು ರೈತರ ಸಮಸ್ಯೆ, ಬಡವರ ಸಮಸ್ಯೆಗಳನ್ನು ಬೆಳಕಿಗೆ ತರುವುದನ್ನು ಬಿಟ್ಟು, ನಮ್ಮ ಮನೆಯಲ್ಲಿ ಏನಿದೆ ಎಂಬುದನ್ನು ಹುಡುಕುವುದನ್ನು ಕಲಿತಿದ್ದಾರೆ. ಅದಕ್ಕೆ ಇವರ ಮನೆಯನ್ನು ಮೊದಲು ಹುಡುಕಿ ಎಂದು ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರಿಗೆ ಎರಡು ಹವ್ಯಾಸ: ವಾಚ್ ಮತ್ತು ಚಸ್ಮಾ

ವೈಯಕ್ತಿಕ ಹವ್ಯಾಸಗಳ ಬಗ್ಗೆ ಮಾತನಾಡಿದ ಕಾಶಪ್ಪನವರ, ಮೈ ಮೇಲೆ ಬಟ್ಟೆ ಹಾಕಿದರೆ ಏನು ತಪ್ಪು ಎಂದು ಪ್ರಶ್ನಿಸಿದರು. ‘ನಮಗೆ ಯಾವುದು ಇಷ್ಟ ಆ ಬಟ್ಟೆ ಹಾಕುತ್ತೇವೆ, ಯಾವುದು ಇಷ್ಟ ಆ ಶೂಸ್ ಹಾಕಿಕೊಳ್ಳುತ್ತೇವೆ, ಯಾವುದು ಇಷ್ಟ ಆ ವಾಚ್ ಕಟ್ಕೊಳ್ತೀವಿ, ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರಿಗೆ ಇರೋದೇ ಎರಡು ಹವ್ಯಾಸ. ಒಂದು ವಾಚ್ ಕಟ್ಟೋದು, ಒಂದು ಚಸ್ಮಾ ಹಾಕಿಕೊಳ್ಳೋದು. ಅದನ್ನು ಬಿಟ್ರೆ ಸಿದ್ರಾಮಯ್ಯನವರಿಗೆ ಏನೇನೂ ಆಸೆ ಇಲ್ಲ ಪಾಪ ಎಂದು ಸಮರ್ಥಿಸಿಕೊಂಡರು.

ಭ್ರಷ್ಟಾಚಾರ ಇರೋದನ್ನ ತೋರಿಸಿ ತಾಕತ್ತಿದ್ರೆ:

ಬಿಜೆಪಿಗೆ ಸವಾಲು ಹಾಕಿದ ಕಾಶೆಪ್ಪನವರು, ಯಡಿಯೂರಪ್ಪ ಜೈಲಿಗೆ ಹೋಗಿ ಬಂದ. ಇವತ್ತು ಯಾಕೆ ಜೈಲಿಗೆ ಹೋಗಿ ಬಂದರು? ಭ್ರಷ್ಟಾಚಾರ ಮಾಡಿದ್ದಕ್ಕೆ. ಆ ರೀತಿ ಒಂದು ಆರೋಪವನ್ನು ನಮ್ಮ ಮುಖ್ಯಮಂತ್ರಿಗಳ ಮೇಲೆ ತೋರಿಸಿ ತಾಕತ್ತಿದ್ದರೆ. ಸುಮ್ಮನೆ ಆರೋಪ ಮಾಡೋದು ವಿನಾಕಾರಣ. ವಾಚ್ ಹಾಕಿದ ತಕ್ಷಣ ಆರೋಪ ಮಾಡೋದು!

ಯಾರೋ ಒಬ್ಬರು ಉಡುಗೊರೆ (ಗಿಫ್ಟ್) ನೀಡಿದರೆ ರಾಜಕಾರಣಿಗಳು ತಗೋಬಾರದಾ? ನನಗೆ ಈ ಜಾಕೆಟ್ ಕೊಟ್ಟಿದ್ದಾರೆ, ಹಾಕಿಕೊಳ್ಳಿ ಚಂದ ಕಾಣ್ತೀರಿ ಅಂತ. ಅದಕ್ಕೆ ಹಾಕಿಕೊಂಡು ಓಡಾಡ್ತೀವಿ. ನಮಗೆ ತೆಗೆದುಕೊಳ್ಳುವ ತಾಕತ್ತು ಇರಲಿಕ್ಕಿಲ್ಲ. ಆದರೆ ಕೊಟ್ಟಿರುವವರಿಗೆ ಬೇಡ ಎಂದು ಅಪಮಾನ ಮಾಡಬಾರದಲ್ವಾ ಕಾಣಿಕೆ ನೀಡಿದವರಿಗೆ ಎಂದರು



Source link

Leave a Reply

Your email address will not be published. Required fields are marked *