Headlines

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಕಾರವಾರಕ್ಕೆ ಬರ್ತಿದ್ದ ಡಾಂಬರ್ ಕೂಡ ಬಂದ್; ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ! | Iran Israel War Hits Karwar Port Asphalt And Diesel Supply Stopped Huge Loss To Government Sat

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಕಾರವಾರಕ್ಕೆ ಬರ್ತಿದ್ದ ಡಾಂಬರ್ ಕೂಡ ಬಂದ್; ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ! | Iran Israel War Hits Karwar Port Asphalt And Diesel Supply Stopped Huge Loss To Government Sat



ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಕಾರವಾರಕ್ಕೆ ಬರ್ತಿದ್ದ ಡಾಂಬರ್ ಕೂಡ ಬಂದ್; ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ! | Iran Israel War Hits Karwar Port Asphalt And Diesel Supply Stopped Huge Loss To Government Sat

ಮಧ್ಯಪ್ರಾಚ್ಯದಲ್ಲಿನ ಇರಾನ್-ಇಸ್ರೇಲ್ ಯುದ್ಧ ಸಂಘರ್ಷದಿಂದಾಗಿ ಹರ್ಮುಜ್ ಕಾಲುವೆಯಲ್ಲಿ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಕಾರವಾರ ವಾಣಿಜ್ಯ ಬಂದರಿನ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಕಚ್ಚಾ ಡಾಂಬರ್ ಪೂರೈಕೆ ನಿಂತುಹೋಗಿದೆ.

ಉತ್ತರ ಕನ್ನಡ (ಮಾ.09): ಮಧ್ಯಪ್ರಾಚ್ಯ ದೇಶಗಳಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧ ಸಂಘರ್ಷದ ಕರಿನೆರಳು ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರಿನ ಮೇಲೆ ಬೀರಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಕಾರವಾರ ಬಂದರಿನ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಹರ್ಮುಜ್ ಕಾಲುವೆ ನಿರ್ಬಂಧದ ಪರಿಣಾಮ:

ಇರಾನ್ ದೇಶವು ಹರ್ಮುಜ್ ಕಾಲುವೆಯ (Strait of Hormuz) ಮೂಲಕ ಸಂಚರಿಸುವ ಕಾರ್ಗೋ ಹಡಗುಗಳಿಗೆ ಕಠಿಣ ನಿರ್ಬಂಧ ಹೇರಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಈ ಮಾರ್ಗವು ಜಾಗತಿಕ ತೈಲ ಮತ್ತು ಇಂಧನ ಪೂರೈಕೆಗೆ ಅತ್ಯಂತ ಪ್ರಮುಖವಾಗಿದೆ. ಈ ನಿರ್ಬಂಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಕಾರವಾರಕ್ಕೆ ಬರುತ್ತಿದ್ದ ಕಚ್ಚಾ ಡಾಂಬರ್ (Raw Asphalt) ಪೂರೈಕೆ ಈಗ ಸಂಪೂರ್ಣವಾಗಿ ಬಂದ್ ಆಗಿದೆ.

ಬಿಕೋ ಎನ್ನುತ್ತಿರುವ ವಾಣಿಜ್ಯ ಬಂದರು:

ಪ್ರತೀ ತಿಂಗಳು ಮಧ್ಯಪ್ರಾಚ್ಯ ದೇಶಗಳಿಂದ ಸಾವಿರಾರು ಟನ್ ಕಚ್ಚಾ ಡಾಂಬರ್ ಕಾರವಾರದ ಬಂದರಿಗೆ ಹಡಗುಗಳ ಮೂಲಕ ಬರುತ್ತಿತ್ತು. ಆದರೆ ಕಳೆದ ಹತ್ತು ದಿನಗಳಿಂದ ಒಂದೂ ಹಡಗು ಬಂದರಿಗೆ ಆಗಮಿಸಿಲ್ಲ. ಇದರಿಂದಾಗಿ ಸದಾ ಗಿಜಿಗುಡುತ್ತಿದ್ದ ಕಾರವಾರ ವಾಣಿಜ್ಯ ಬಂದರು ಈಗ ಹಡಗುಗಳಿಲ್ಲದೇ ಬಿಕೋ ಎನ್ನುತ್ತಿದೆ. ಈ ಸ್ಥಗಿತದಿಂದಾಗಿ ಸರ್ಕಾರಕ್ಕೆ ತಿಂಗಳಿಗೆ ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿಗೂ ಅಧಿಕ ಆದಾಯ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಲಾರಿ ಮಾಲೀಕರ ಕಣ್ಣೀರು:

ಬಂದರಿನ ವಾಣಿಜ್ಯ ಚಟುವಟಿಕೆಗಳನ್ನು ನಂಬಿಕೊಂಡಿದ್ದ ನೂರಾರು ಲಾರಿ ಮಾಲೀಕರು ಮತ್ತು ಚಾಲಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಚ್ಚಾ ಡಾಂಬರ್ ತುಂಬಿಸಿಕೊಳ್ಳಲು ಬಂದಿದ್ದ ನೂರಾರು ಲಾರಿಗಳು ಬಂದರಿನ ಆವರಣದಲ್ಲಿ ಸಾಲುಗಟ್ಟಿ ನಿಂತಿವೆ. ಕಳೆದ 10 ದಿನಗಳಿಂದ ಯಾವುದೇ ಕೆಲಸವಿಲ್ಲದೆ ಚಾಲಕರು ಮತ್ತು ಲಾರಿ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ‘ಬಂದರು ಚಟುವಟಿಕೆಯನ್ನೇ ನಂಬಿ ಸಾಲ ಮಾಡಿ ಲಾರಿ ತಂದಿದ್ದೇವೆ, ಈಗ ಕೆಲಸವಿಲ್ಲದೆ ಕಂಗಾಲಾಗಿದ್ದೇವೆ’ ಎಂದು ಲಾರಿ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ನೌಕಾನೆಲೆಗೆ ಡೀಸೆಲ್ ಸಂಕಷ್ಟ:

ಯುದ್ಧದ ಬಿಸಿ ಕೇವಲ ಡಾಂಬರ್ ಪೂರೈಕೆಗೆ ಮಾತ್ರವಲ್ಲದೆ, ಇಂಧನ ಪೂರೈಕೆಗೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ಕಾರವಾರದ ಏಷ್ಯಾದ ಅತಿದೊಡ್ಡ ನೌಕಾನೆಲೆ ಎನಿಸಿಕೊಂಡಿರುವ ‘ಕದಂಬ’ ನೌಕಾನೆಲೆಗೆ ಬೇಕಾದ ಡೀಸೆಲ್ ಪೂರೈಕೆಯಲ್ಲೂ ಸಮಸ್ಯೆ ಎದುರಾಗಿದೆ. ಈ ಹಿಂದೆ ಸ್ಥಳೀಯವಾಗಿ ಪೂರೈಕೆಯಾಗುತ್ತಿದ್ದ ಡೀಸೆಲ್ ವ್ಯತ್ಯಯದಿಂದಾಗಿ, ಈಗ ಮುಂಬೈನಿಂದ ಡೀಸೆಲ್ ತರಿಸಿಕೊಳ್ಳುವ ಅನಿವಾರ್ಯತೆ ನೌಕಾನೆಲೆಗೆ ಎದುರಾಗಿದೆ.

ಕಾರವಾರ ಬಂದರು ಅಧಿಕಾರಿ ನಿತೀಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ‘ಮಧ್ಯಪ್ರಾಚ್ಯದ ಯುದ್ಧ ಸಂಘರ್ಷದಿಂದಾಗಿ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಇದು ಬಂದರಿನ ಆದಾಯ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಯ ಮೇಲೆ ಭಾರಿ ಹೊಡೆತ ನೀಡಿದೆ’ ಎಂದು ತಿಳಿಸಿದ್ದಾರೆ. ಯುದ್ಧದ ಪರಿಸ್ಥಿತಿ ತಿಳಿಯಾಗುವವರೆಗೂ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದ್ದು, ಕರಾವಳಿಯ ವಾಣಿಜ್ಯ ವಲಯದಲ್ಲಿ ಆತಂಕ ಮನೆಮಾಡಿದೆ.



Source link

Leave a Reply

Your email address will not be published. Required fields are marked *