Headlines

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ | Barabanki Abvp Student Protest Police Lathicharge Yogi Action Inquiry Mrq

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ | Barabanki Abvp Student Protest Police Lathicharge Yogi Action Inquiry Mrq



ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ | Barabanki Abvp Student Protest Police Lathicharge Yogi Action Inquiry Mrq

ಬಾರಾಬಂಕಿಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರ; ಹಲವರು ಗಾಯಗೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಕ್ರಮಕ್ಕೆ ಆದೇಶಿಸಿದ್ದಾರೆ.

ಶ್ರೀರಾಮ್ ಸ್ವರೂಪ್ ಮೆಮೋರಿಯಲ್ ವಿವಿ ಪ್ರತಿಭಟನೆ: ಯುಪಿಯ ಬಾರಾಬಂಕಿಯಲ್ಲಿ ಶ್ರೀರಾಮ್ ಸ್ವರೂಪ್ ಮೆಮೋರಿಯಲ್ ವಿಶ್ವವಿದ್ಯಾಲಯದ ಹೊರಗೆ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾನಿರತ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯಿಂದಾಗಿ ರಾಜ್ಯಾದ್ಯಂತ ರಾಜಕೀಯ ಕೋಲಾಹಲ ಎದ್ದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಗಮನಹರಿಸಿ ಹಲವಾರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.

ಯೋಗಿ ವರದಿ ಕೇಳಿದ್ರು, ಸಿಟ್ಟಾದ್ರು

ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಟ್ಟಾಗಿದ್ದಾರೆ. ವಿಶ್ವವಿದ್ಯಾಲಯದ ಪದವಿಯ ಮಾನ್ಯತೆಯ ಬಗ್ಗೆ ತನಿಖೆ ನಡೆಸಿ ಸಂಜೆಯೊಳಗೆ ವರದಿ ಸಲ್ಲಿಸುವಂತೆ ಅಯೋಧ್ಯಾ ವಿಭಾಗೀಯ ಆಯುಕ್ತರಿಗೆ ಸೂಚಿಸಿದ್ದಾರೆ. ಲಾಠಿ ಪ್ರಹಾರದ ಬಗ್ಗೆ ತನಿಖೆ ನಡೆಸುವಂತೆ ಐಜಿ ಅಯೋಧ್ಯಾ ವಲಯಕ್ಕೆ ಸೂಚಿಸಲಾಗಿದೆ.

ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಸಿಒ ಸಿಟಿ ಹರ್ಷಿತ್ ಚೌಹಾಣ್ ಅವರನ್ನು ತಕ್ಷಣದಿಂದಲೇ ವಜಾಗೊಳಿಸಲಾಗಿದೆ. ಕೋತ್ವಾಲ್ ರಾಮ್ ಕಿಶನ್ ರಾಣಾ ಮತ್ತು ಚೌಕಿ ಇನ್ಚಾರ್ಜ್ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಗಳ ಆರೋಪ – ಮಾನ್ಯತೆ ಇಲ್ಲದೆ ಭವಿಷ್ಯದ ಜೊತೆ ಚೆಲ್ಲಾಟ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸಂಬಂಧಿಸಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಕೋರ್ಸ್‌ನ ಮಾನ್ಯತೆ ಪ್ರಸ್ತುತ ಅಮಾನತುಗೊಂಡಿದೆ ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿದೆ, ಇದರಿಂದಾಗಿ ಅವರ ಭವಿಷ್ಯದ ಜೊತೆ ಚೆಲ್ಲಾಟ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳು ವಿವಿ ಗೇಟ್‌ನಲ್ಲಿ ತೀವ್ರ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆ ವೇಳೆ ಲಾಠಿ ಪ್ರಹಾರ, ಗಲಾಟೆ

ಪ್ರತಿಭಟನೆಯ ನಡುವೆ ವಿಶ್ವವಿದ್ಯಾಲಯದ ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ನಂತರ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು. ಆಕ್ರೋಶಗೊಂಡ ವಿದ್ಯಾರ್ಥಿಗಳು ವಿವಿ ಗೇಟ್‌ಗೆ ಬೀಗ ಹಾಕಿದರು. ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸಿಲುಕಿಕೊಂಡರು.

ಗಾಯಾಳುಗಳ ಪಟ್ಟಿ

ಲಾಠಿ ಪ್ರಹಾರ ಮತ್ತು ಘರ್ಷಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಭಿಷೇಕ್ ಬಾಜಪೇಯಿ (ಪ್ರಾಂತ ಸಹ ಕಾರ್ಯದರ್ಶಿ, ಎಬಿವಿಪಿ), ಅನುರಾಗ್ ಮಿಶ್ರಾ (ಜಿಲ್ಲಾ ಸಂಚಾಲಕ), ಅಭಯ್ ಶಂಕರ್ ಪಾಂಡೆ, ಅಂಕಿತ್ ಪಾಂಡೆ, ನವೀನ್, ಅರ್ಪಿತ್ ಶುಕ್ಲಾ, ಆಶುತೋಷ್ ರೈ, ಪ್ರತ್ಯೂಷ್ ಪಾಂಡೆ, ಅಂಕುರ್ ಅವಸ್ಥಿ, ಸಿದ್ಧಾರ್ಥ್ ತಿವಾರಿ, ವಿದಿತ್ ಪ್ರತಾಪ್ ಸಿಂಗ್, ಯೋಗೇಶ್ ಸಿಂಗ್, ಪುಷ್ಪೇಂದ್ರ ಬಾಜಪೇಯಿ (ಪ್ರಾಂತ ಸಂಘಟನಾ ಕಾರ್ಯದರ್ಶಿ) ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವಿ ಆಡಳಿತದ ಸ್ಪಷ್ಟನೆ

ಶ್ರೀರಾಮ್ ಸ್ವರೂಪ್ ಮೆಮೋರಿಯಲ್ ವಿಶ್ವವಿದ್ಯಾಲಯದ ಓಎಸ್‌ಡಿ ಬಿಎಸ್ ಓಝಾ ಅವರು ಎಲ್‌ಎಲ್‌ಬಿ ಮಾನ್ಯತೆ ವಿಶ್ವವಿದ್ಯಾಲಯಕ್ಕೆ ಇದೆ, ನವೀಕರಣದಲ್ಲಿ ಸುಮಾರು ಒಂದು ವರ್ಷ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಪದವಿ ನೀಡುವುದು ವಿಶ್ವವಿದ್ಯಾಲಯದ ಜವಾಬ್ದಾರಿ ಎಂದಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಗೇಟ್‌ಗಳನ್ನು ಮುಚ್ಚಿದ್ದರಿಂದ ಸ್ಥಳೀಯ ಪೋಷಕರೊಂದಿಗೆ ಘರ್ಷಣೆ ಉಂಟಾಯಿತು ಎಂದು ಅವರು ಆರೋಪಿಸಿದ್ದಾರೆ.



Source link

Leave a Reply

Your email address will not be published. Required fields are marked *