Headlines

ಭಾರತಕ್ಕೆ ಹೆಮ್ಮೆ ತಂದ ಡಾ. ರಾಮ್ ಪ್ರಸಾತ್ ಮನೋಹರ್: ಜಾಗತಿಕ ಸ್ಮಾರ್ಟ್ ವಾಟರ್ ಸಲಹಾ ಸಮಿತಿಗೆ BWSSB ಅಧ್ಯಕ್ಷರ ಆಯ್ಕೆ | Indian Ias Officer Bwssb Chairman Dr Ram Prasath Manohar Appointed To Global Swan Advisory Group Sat

ಭಾರತಕ್ಕೆ ಹೆಮ್ಮೆ ತಂದ ಡಾ. ರಾಮ್ ಪ್ರಸಾತ್ ಮನೋಹರ್: ಜಾಗತಿಕ ಸ್ಮಾರ್ಟ್ ವಾಟರ್ ಸಲಹಾ ಸಮಿತಿಗೆ BWSSB ಅಧ್ಯಕ್ಷರ ಆಯ್ಕೆ | Indian Ias Officer Bwssb Chairman Dr Ram Prasath Manohar Appointed To Global Swan Advisory Group Sat



ಭಾರತಕ್ಕೆ ಹೆಮ್ಮೆ ತಂದ ಡಾ. ರಾಮ್ ಪ್ರಸಾತ್ ಮನೋಹರ್: ಜಾಗತಿಕ ಸ್ಮಾರ್ಟ್ ವಾಟರ್ ಸಲಹಾ ಸಮಿತಿಗೆ BWSSB ಅಧ್ಯಕ್ಷರ ಆಯ್ಕೆ | Indian Ias Officer Bwssb Chairman Dr Ram Prasath Manohar Appointed To Global Swan Advisory Group Sat

ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN) ನ ಪ್ರತಿಷ್ಠಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಈ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಪ್ರತಿನಿಧಿ ಇವರಾಗಿದ್ದಾರೆ.

ಲಂಡನ್ / ಬೆಂಗಳೂರು (ಫೆ.19): ಸ್ಮಾರ್ಟ್ ನೀರು ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದಿರುವ ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN), ತನ್ನ ಪ್ರತಿಷ್ಠಿತ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ’ಯನ್ನು (Senior Utility Advisory Group – UAG) ಪ್ರಕಟಿಸಿದೆ. ಈ ಅಂತರಾಷ್ಟ್ರೀಯ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಜಾಗತಿಕ ಗಣ್ಯರ ಪಟ್ಟಿಯಲ್ಲಿ ಡಾ. ಮನೋಹರ್:

ಈ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಜಲಮಂಡಳಿ ಮುಖ್ಯಸ್ಥರು ಎಂಬ ಹೆಗ್ಗಳಿಕೆಗೆ ಡಾ. ಮನೋಹರ್ ಪಾತ್ರರಾಗಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದಂತಹ ಮುಂದುವರಿದ ದೇಶಗಳ ಜಲ ನಿರ್ವಹಣಾ ತಜ್ಞರು ಈ ಸಮಿತಿಯಲ್ಲಿದ್ದಾರೆ. ಈ ತಂಡವು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಟ್ರೆಂಡ್‌ಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದೆ.

ಆಯ್ಕೆಗೆ ಕಾರಣವಾದ ಎಐ ಮತ್ತು ದತ್ತಾಂಶ ತಂತ್ರಜ್ಞಾನ:

ಇತ್ತೀಚೆಗೆ ಬೆಂಗಳೂರು ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ-ಆಧಾರಿತ (data-driven) ಅತ್ಯಾಧುನಿಕ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಈ ಜಾಗತಿಕ ಮನ್ನಣೆ ದೊರೆತಿದೆ. ಇವರ ನೇತೃತ್ವದಲ್ಲಿ ಬೆಂಗಳೂರು ಇಂದು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರ್ಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ.

‘ಬ್ರಾಂಡ್ ಬೆಂಗಳೂರು’ ಕನಸಿಗೆ ಸಾಕಾರ:

ತಮ್ಮ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಡಾ. ರಾಮ್ ಪ್ರಸಾತ್ ಮನೋಹರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯಿಂದಾಗಿ ಬೆಂಗಳೂರು ಜಲಮಂಡಳಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಗಿದೆ. ಉಪಮುಖ್ಯಮಂತ್ರಿಗಳ ‘ಬ್ರಾಂಡ್ ಬೆಂಗಳೂರು’ (Brand Bengaluru) ಪರಿಕಲ್ಪನೆಗೆ ಪೂರಕವಾಗಿ ನಗರದ ಮೂಲಸೌಕರ್ಯವನ್ನು ಉನ್ನತೀಕರಿಸಲು ವಿಶ್ವದರ್ಜೆಯ ಎಐ ತಂತ್ರಜ್ಞಾನಗಳನ್ನು ನಾವು ಬಳಸುತ್ತಿದ್ದೇವೆ. ಈ ಮೈಲಿಗಲ್ಲನ್ನು ನಾನು ಜಲಮಂಡಳಿಯ ತಾಂತ್ರಿಕ ತಂಡ ಮತ್ತು ಸಿಬ್ಬಂದಿಯ ಅವಿರತ ಶ್ರಮಕ್ಕೆ ಅರ್ಪಿಸುತ್ತೇನೆ’ ಎಂದಿದ್ದಾರೆ.

ಮುಂದಿನ ಹೆಜ್ಜೆ – ಫ್ಲೋರಿಡಾ ಸಮ್ಮೇಳನ:

ಈ ಸಮಿತಿಯ ಸದಸ್ಯರಾಗಿ ಡಾ. ಮನೋಹರ್ ಅವರು 2026ರ ಜೂನ್ 2 ರಿಂದ 4 ರವರೆಗೆ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ’ದಲ್ಲಿ ಭಾಗವಹಿಸಲಿದ್ದಾರೆ. “ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ” ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮ್ಮೇಳನದ ರೂಪುರೇಷೆಗಳಿಗೆ ಅವರು ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.

ಸ್ವಾನ್ (SWAN) ಸಲಹಾ ಸಮಿತಿಯ ಪ್ರಮುಖ ಸದಸ್ಯರು:

  • ಡಾ. ರಾಮ್ ಪ್ರಸಾತ್ ಮನೋಹರ್ (ಭಾರತ)
  • ಜೊನೆಟ್ಟಾ ಇ. ಇಂಗ್ಲಿಷ್ (ಅಮೆರಿಕ)
  • ಡೇವಿಡ್ ಹ್ಯೂಸ್-ಓವನ್ (ಆಸ್ಟ್ರೇಲಿಯಾ)
  • ಜೋವಾನಾ ಅರಾಜೊ (ಪೋರ್ಚುಗಲ್)
  • ಅರಾಶ್ ಫರಾಜಿಯಾನ್ (ಕೆನಡಾ)
  • ಡೆನಿಸ್ ಮಾಯಾ (ಬ್ರೆಜಿಲ್)

ಸ್ವಾನ್ (SWAN) ಸಂಸ್ಥೆಯ ಬಗ್ಗೆ:

2010ರಲ್ಲಿ ಸ್ಥಾಪನೆಯಾದ ಸ್ವಾನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಜಗತ್ತಿನಾದ್ಯಂತ ಕುಡಿಯುವ ನೀರು ಮತ್ತು ತ್ಯಾಜ್ಯನೀರು ಜಾಲಗಳ ನಿರ್ವಹಣೆಯಲ್ಲಿ ‘ಸ್ಮಾರ್ಟ್’ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಿದೆ. ಡಾ. ಮನೋಹರ್ ಅವರ ಈ ಆಯ್ಕೆಯು ಭಾರತದ ನೀರಿನ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೊಸ ಪರಿಹಾರಗಳನ್ನು ತರಲು ಸಹಕಾರಿಯಾಗಲಿದೆ.



Source link

Leave a Reply

Your email address will not be published. Required fields are marked *