Puneeth Rajkumar heart attack initiative AED installation ಪುನೀತ್ ಸ್ಮರಣಾರ್ಥ: ಹಠಾತ್ ಹೃದಯ ಸಂಬಂಧಿ ಸಾವು ತಡೆಗೆ ಸರ್ಕಾರದಿಂದ ₹6 ಕೋಟಿ ಅನುದಾನದ AED ಯೋಜನೆ ಘೋಷಣೆ | Karnataka Govt Allocates Aed Installation In Memory Of Puneeth Rajkumar Gow

Puneeth Rajkumar heart attack initiative AED installation ಪುನೀತ್ ಸ್ಮರಣಾರ್ಥ: ಹಠಾತ್ ಹೃದಯ ಸಂಬಂಧಿ ಸಾವು ತಡೆಗೆ ಸರ್ಕಾರದಿಂದ ₹6 ಕೋಟಿ ಅನುದಾನದ AED ಯೋಜನೆ ಘೋಷಣೆ | Karnataka Govt Allocates Aed Installation In Memory Of Puneeth Rajkumar Gow



Puneeth Rajkumar heart attack initiative AED installation ಪುನೀತ್ ಸ್ಮರಣಾರ್ಥ: ಹಠಾತ್ ಹೃದಯ ಸಂಬಂಧಿ ಸಾವು ತಡೆಗೆ ಸರ್ಕಾರದಿಂದ ₹6 ಕೋಟಿ ಅನುದಾನದ AED ಯೋಜನೆ ಘೋಷಣೆ | Karnataka Govt Allocates Aed Installation In Memory Of Puneeth Rajkumar Gow

ದಿ. ಪುನೀತ್ ರಾಜಕುಮಾರ್ ಸ್ಮರಣಾರ್ಥ ರಾಜ್ಯ ಸರ್ಕಾರವು ಹೃದಯ ಸಂಬಂಧಿ ಸಾವುಗಳನ್ನು ತಡೆಯಲು AED ಯೋಜನೆ ಜಾರಿಗೊಳಿಸುತ್ತಿದೆ. ಈ ಯೋಜನೆಯಡಿ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ AED ಯಂತ್ರಗಳನ್ನು ಅಳವಡಿಸಲಾಗುವುದು.

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಿದ್ಧ ನಟ ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಯುವ ಉದ್ದೇಶದಿಂದ AED (Automated External Defibrillator) ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆಗಾಗಿ ಸರ್ಕಾರವು ಒಟ್ಟು ₹6 ಕೋಟಿ ಅನುದಾನವನ್ನು ಘೋಷಿಸಿದೆ. ಇದಕ್ಕೆ  ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿದ್ದು, ಸರಕಾರ ಪ್ರಕಟಣೆ ಬಿಡುಗಡೆ ಮಾಡಿದೆ.

ಹೃದಯಾಘಾತ ತಡೆಗೆ AED ಯಂತ್ರಗಳ ಅಳವಡಿಕೆ

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತ (Sudden Cardiac Arrest) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣ ಚಿಕಿತ್ಸೆ ನೀಡಲು ಅಗತ್ಯವಾದ AED ಯಂತ್ರಗಳನ್ನು ರಾಜ್ಯದ 16 ಜಿಲ್ಲಾಸ್ಪತ್ರೆ ಹಾಗೂ 147 ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲು ಆದೇಶಿಸಲಾಗಿದೆ.

AED ಯಂತ್ರಗಳು ತುರ್ತು ಪರಿಸ್ಥಿತಿಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸಿ, ಅಗತ್ಯವಿದ್ದರೆ ವಿದ್ಯುತ್ ಶಾಕ್ ನೀಡಿ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಗೋಲ್ಡನ್ ಟೈಮ್ ಎಂದೇ ಕರೆಯಲಾಗುವ ಮೊದಲ ಕೆಲವು ನಿಮಿಷಗಳಲ್ಲಿ ಈ ಚಿಕಿತ್ಸೆ ದೊರೆತರೆ, ರೋಗಿಯನ್ನು ಬದುಕಿಸುವ ಸಾಧ್ಯತೆಗಳು ಬಹಳ ಹೆಚ್ಚಾಗುತ್ತವೆ.

ಸಾರ್ವಜನಿಕ ಸ್ಥಳಗಳಲ್ಲಿಯೂ AED ಲಭ್ಯತೆ

ಯೋಜನೆಯಡಿ, ಕೇವಲ ಆಸ್ಪತ್ರೆಗಳಲ್ಲದೇ, ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿಯೂ AED ಯಂತ್ರಗಳನ್ನು ಅಳವಡಿಸುವ ಯೋಜನೆ ಸರ್ಕಾರದದ್ದಾಗಿದೆ. ಇದರಿಂದ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಹೃದಯಾಘಾತ ಉಂಟಾದರೂ ತಕ್ಷಣ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿದೆ.

ಪುನೀತ್ ರಾಜಕುಮಾರ್ ಯೋಜನೆಯ ಮಹತ್ವ

ಪುನೀತ್ ರಾಜಕುಮಾರ್ ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಅಕಾಲಿಕವಾಗಿ ಅಗಲಿದ ಬಳಿಕ, ರಾಜ್ಯದಲ್ಲಿ ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ತೀವ್ರವಾಗಿ ಕಂಡುಬಂತು. ಅವರ ಸ್ಮರಣಾರ್ಥ ಕೈಗೊಂಡಿರುವ ಈ ಯೋಜನೆ, “ಪುನೀತ್ ರಾಜಕುಮಾರ್ AED ಯೋಜನೆ” ಎಂಬ ಹೆಸರಿನಿಂದ ಜಾರಿಗೊಳ್ಳಲಿದೆ.

ಸರ್ಕಾರವು ಜನರ ಹೃದಯ ಆರೋಗ್ಯವನ್ನು ಕಾಪಾಡಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆ ಜಾರಿಯಾದ ಬಳಿಕ, ರಾಜ್ಯದಲ್ಲಿ ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವುಗಳ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.



Source link

Leave a Reply

Your email address will not be published. Required fields are marked *