
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಏಳನೇ ವಾರದಲ್ಲಿ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಷನ್ ಆಗಲು ಕಾರಣ ಹಲವು. ‘ಅಶ್ವಿನಿ ಹಾಗೂ ಜಾನ್ವಿ ಗುಂಪಿನಿಂದ ದೂರ ಇದ್ದಿದ್ರೆ ಸಹಾಯ ಆಗುತ್ತಿದೆ’ ಎಂದು ಸುಧಿ ಪತ್ನಿಯೇ ಹೇಳಿದ್ದರು. ಈ ಬಗ್ಗೆ ಸುಧಿ ಮಾತನಾಡಿದ್ದಾರೆ. ‘ಜಾನ್ವಿ, ಅಶ್ವಿನಿ ಅವರೆಲ್ಲ ಒಂಟಿ ತಂಡದಲ್ಲಿ ಇಬ್ಬರು. ಹೀಗಾಗಿ, ಅವರ ಜೊತೆ ಒಳ್ಳೆಯ ಗೆಳೆತನ ಬೆಳೆಯಿತು. ಅವರು ನಮ್ಮದೇ ಏಜ್ ಗ್ರೂಪ್ನವರು. ಬಿಗ್ ಬಾಸ್ನಲ್ಲಿ ಹಲವು ಗುಂಪುಗಳು ಇವೆ. ಬಹುಶಃ ನಮ್ಮ ಗ್ರೂಪಿಸಂ ಸ್ವಲ್ಪ ಹೆಚ್ಚಾಗಿ ಕಾಣಿಸಿತೇನೋ’ ಎಂದು ಸುಧಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.