
ಆರೋಪಿ ಕಮಲಾಕರ ಭಟ್, ಸುಚಿತ್ರಾಳ ಪರಿಚಯವಾಗುವ ಮುನ್ನ ಸಾಗರ ಮೂಲದ ಮಹಿಳೆಯೊಬ್ಬರ ಜೊತೆ ಬರೋಬ್ಬರಿ 9 ವರ್ಷಗಳ ಕಾಲ ಸಂಬಂಧ ಹೊಂದಿದ್ದನಂತೆ. ಆದರೆ, ಯಾವಾಗ ಸುಚಿತ್ರಾ ಈತನ ಜೀವನದಲ್ಲಿ ಎಂಟ್ರಿ ಕೊಟ್ಟಳೋ, ಆಗ ಹಳೆಯ ಪ್ರಿಯತಮೆಯನ್ನು ಕಡೆಗಣಿಸಲು ಆರಂಭಿಸಿದ್ದಾನೆ. ಆದರೂ ಆ ಮಹಿಳೆ ಕಮಲಾಕರನಿಗೆ ಆಗಾಗ ಕರೆ ಮಾಡುತ್ತಿದ್ದಳು.
ಈ ವಿಷಯ ಸುಚಿತ್ರಾ ಗಮನಕ್ಕೆ ಬಂದಿದೆ. ಕೂಡಲೇ ಆಕೆ ಕಮಲಾಕರನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಸುಚಿತ್ರಾಳ ಕೋಪ ಮತ್ತು ಭಯಕ್ಕೆ ಬೆದರಿದ ಕಮಲಾಕರ, ಆಕೆಯ ಮುಂದೆಯೇ ಸಾಗರ ಮೂಲದ ಮಹಿಳೆಗೆ ವಾಯ್ಸ್ ಮೆಸೇಜ್ ಕಳುಹಿಸಿ, ‘ಇನ್ಮುಂದೆ ನನಗೆ ಫೋನ್ ಮಾಡಬೇಡ’ ಎಂದು ಬೈದು ಕಳುಹಿಸಿದ್ದಾನೆ. ಸುಚಿತ್ರಾಳ ಅಣತಿಯಂತೆ ಆತ ಹಳೆಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದ ಎಂಬುದು ಆಡಿಯೋದಲ್ಲಿ ಸ್ಪಷ್ಟವಾಗಿದೆ.