
<p>ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ತೆಲುಗು ನಟ-ನಟಿಯರ ವೈಯಕ್ತಿಕ ಜೀವನ, ಕರಿಯರ್ ಬಗ್ಗೆ ಮಾತನಾಡಿದ್ದುಂಟು, ಅವರ ಭವಿಷ್ಯಗಳಲ್ಲಿ ಬಹುತೇಕ ಸತ್ಯವಾದರೆ, ಇನ್ನೂ ಕೆಲವು ಆಗಿಲ್ಲ. ಈಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೂಡ ಮಾತನಾಡಿದ್ದು, ವೀಕ್ಷಕರು ಸಿಟ್ಟಾಗಿದ್ದಾರೆ.</p><p> </p><img><p>ನಟ ಯಶ್ ಅವರು ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈ ಯುಗಾದಿಗೆ ರಿಲೀಸ್ ಆಗಬೇಕಿತ್ತು. ಇರಾಕ್, ಇರಾನ್ ಯುದ್ಧದ ಎಫೆಕ್ಟ್ನಿಂದಾಗಿ ಈ ಸಿನಿಮಾ ತಡವಾಗಿ ರಿಲೀಸ್ ಆಗಲಿದೆ.</p><img><p>ನಟ ಯಶ್ ಅವರು ಕಳೆದ ಹತ್ತು ವರ್ಷಗಳಿಂದ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾದರು, ಆ ಬಳಿಕ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾದರು. ಟಾಕ್ಸಿಕ್ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಯಶ್ ಅವರನ್ನು ತೆರೆ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.</p><img><p>ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ಬಗ್ಗೆ ಜ್ಯೋತಿಷ್ಯ ಹೇಳುವಂತಿಲ್ಲ ಎಂದು ಹೇಳಲಾಗಿತ್ತು. ಆದರೂ ಕೂಡ ಅವರು Eha Tv Live ಅಲ್ಲಿ ಯಶ್ ಬಗ್ಗೆ ಮಾತನಾಡಿದ್ದಾರೆ, ಎರಡು ತಿಂಗಳ ಹಿಂದೆ ಈ ಸಂದರ್ಶನ ನಡೆದಿದ್ದು, ಈಗ ವಿಡಿಯೋ ವೈರಲ್ ಆಗ್ತಿದೆ. ಯಶ್ ಅಭಿಮಾನಿಗಳು ವೇಣು ಸ್ವಾಮಿ ಮಾತಿಗೆ ಕಿಡಿ ಕಾರಿದ್ದಾರೆ.</p><img><p>ನಟ ಯಶ್ ಕಷ್ಟದಿಂದ ಬಂದವರು, ಅವರಿಗೆ ಜೀವನದಲ್ಲಿ ಸ್ಪಷ್ಟತೆ ಇದೆ. ಅಷ್ಟೇ ಅಲ್ಲದೆ ಒಳ್ಳೆಯ ಸಿನಿಮಾ ಕೊಡಬೇಕು ಎನ್ನುವ ಕಾರಣಕ್ಕೆ ಅವರು ಕೆಲ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ ಅಷ್ಟೇ.</p><img><p>"ನಾನು ತೆಲುಗು ಹೀರೋ ಆದರೆ ಮಾತನಾಡುತ್ತಿರಲಿಲ್ಲ, ಕನ್ನಡ ಆಗಿದ್ದಕ್ಕೆ ಮಾತನಾಡುತ್ತಿದ್ದೇನೆ" ಎಂದು ಜ್ಯೋತಿಷಿ ವೇಣು ಸ್ವಾಮಿ ಅವರು ಮಾತನಾಡಿದ್ದಾರೆ.</p><img><p>"ಯಶ್ ಎಂಬ ಹೀರೋ ಇದ್ದಾರೆ, ಅವರ ಪರಿಸ್ಥಿತಿ ಭಯಂಕರವಾಗಿದೆ, ಕೆಜಿಎಫ್ ಎಂಬ ಎರಡು ಸಿನಿಮಾಗಳನ್ನು ನೀಡಿದ್ದು, ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಆ ನಿರೀಕ್ಷೆಯನ್ನು ತಲುಪಬೇಕು, ಸೆಲೆಬ್ರಿಟಿ ಸ್ಟೇಟಸ್ ಹ್ಯಾಂಡಲ್ ಮಾಡೋದು ಸುಲಭ ಇಲ್ಲ" ಎಂದು ವೇಣು ಸ್ವಾಮಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.</p>
Source link
ನಟ ಯಶ್ ಡಿಪ್ರೆಶನ್ನಲ್ಲಿದ್ದಾರೆ; ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾತಿಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗರಂ!