ಬೆಳಗಾವಿ, (ಅಕ್ಟೋಬರ್ 28): ಬೀಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃದ್ಧ, ಇದೀಗ ಅದೇ ಬಿಕ್ಷಾಟನೆ ವೇಳೆ ದುರಂತ ಸಾವು ಕಂಡಿದ್ದಾನೆ. ಹೌದು… ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ (ಬೆಳಗಾವಿ) ನಡೆದಿದೆ. ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಸಿಗ್ನಲ್ ಬಿಡುತ್ತಿದ್ದಂತೆ ವೃದ್ಧ ರಸ್ತೆ ದಾಟಲು. ಆ ವೇಳೆ ಲಾರಿ ವೃದ್ಧನ ಮೇಲೆ ಹರಿದಿದೆ. ಪರಿಣಾಮ ಭಿಕ್ಷುಕ ಲಾರಿ ಚಕ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಬಿಕ್ಷುಕನ ಮೇಲೆ ಲಾರಿ ಏರಿ ಇಳಿಯುತ್ತಿರುವ ಭೀಕರ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದೆ.