ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್

ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್



ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್
<p><strong>Bengaluru Crime News</strong>: ಮದುವೆಯಾಗುವುದಾಗಿ ನಂಬಿಸಿ ವಕೀಲೆಯ ಮೇಲೆ ಅತ್ಯಾ*ಚಾರ ಎಸಗಿದ್ದ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಗೌಡನನ್ನು ಬಂಧಿಸಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.</p><img><p>ಮದುವೆಯಾಗೋದಾಗಿ ನಂಬಿಸಿ ಅತ್ಯಾ*ಚಾರ ಮಾಡಿದ್ದ ಪೊಲೀಸ್‌ ಸಿದ್ದೇಗೌಡ ಅಲಿಯಾಸ್ ಸಿದ್ದಿ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಜಮಖಂಡಿ ಮೂಲದ ಸಿದ್ದೇಗೌಡ ಮಂಗಳೂರಿನ ಪಾಂಡೇಶ್ವರದ ಎಸ್‌ಎಎಫ್‌ (Special Action Force) ನಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡಿಕೊಂಡಿದ್ದನು.</p><img><p>ಸಂತ್ರಸ್ತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ವಕೀಲೆಯಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದರು. ಹುಬ್ಬಳ್ಳಿ ಮದುವೆಯೊಂದರಲ್ಲಿ ಸಂತ್ರಸ್ತೆಯನ್ನು ಸಿದ್ದೇಗೌಡ ಭೇಟಿಯಾಗಿದ್ದನು. ಇಲ್ಲಿಯೇ ಇಬ್ಬರು ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು.</p><img><p>ನಂಬರ್ ಎಕ್ಸ್‌ಚೇಂಜ್ ಆಗುತ್ತಿದ್ದಂತೆ ಸಿದ್ದೇಗೌಡನ ಬಣ್ಣದ ಮಾತುಗಳು ಶುರುವಾಗಿದ್ದವು. ಈ ವೇಳೆ ಮದುವೆಯಾಗೋದಾಗಿ ಸಂತ್ರಸ್ತೆಯನ್ನು ಸಿದ್ದೇಗೌಡ ನಂಬಿಸಿದ್ದನು. ಬೆಂಗಳೂರಿಗೆ ಬರುತ್ತಿದ್ದ ಸಿದ್ದೇಗೌಡ, ಲಾಡ್ಜ್‌ ಬುಕ್ ಮಾಡಿ ಸಂತ್ರಸ್ತೆಯನ್ನು ಕರೆಸಿಕೊಂಡು ಅತ್ಯಾ*ಚಾರ ಎಸಗಿದ್ದಾನೆ. ಒಟ್ಟು ನಾಲ್ಕು ಬಾರಿ ಅತ್ಯಾ*ಚಾರ ಮಾಡಿರೋದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.</p><img><p>ಇದಾದ ಬಳಿಕ ಮದುವೆ ವಿಷಯ ಬಂದಾಗ ನಿಮ್ಮದು‌ ಕೀಳು ಜಾತಿ. ಹೀಗಾಗಿ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪಲ್ಲ‌ ಎಂದು ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಸಂತ್ರಸ್ತೆಯಿಂದ ಹಣ ಸಹ ಪಡೆದುಕೊಂಡಿದ್ದನು. ಹಣ ಸಹ ವಾಪಸ್ ನೀಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಆಗಸ್ಟ್ 8ರಂದು ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p><img><p>ದೂರು ದಾಖಲಾಗುತ್ತಿದ್ದ ಸಿದ್ದೇಗೌಡ ಎಸ್ಕೇಪ್ ಆಗಿದ್ದನು. ಆಗಸ್ಟ್ 30 ರಂದು ನಾಪತ್ತೆಯಾಗಿದ್ದ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಸಿದ್ದೇಗೌಡನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>



Source link

Leave a Reply

Your email address will not be published. Required fields are marked *