
ನ್ಯಾಯಾಲಯದ ಆದೇಶ ತರುವಂತೆ ಪೊಲೀಸರು ಹಲವು ಬಾರಿ ಹೇಳಿದ್ದರೂ ಮಶಿಯಾ ಮಹ್ಮದ್ ಕೇಳುತ್ತಿಲ್ಲ. ಆತ ನೇರವಾಗಿ ಬಾರದೇ ಬೇರೆಯವರನ್ನು ಕಳುಹಿಸಿ ಗಲಾಟೆ ಮಾಡಿಸುವುದನ್ನೇ ರೂಢಿಸಿಕೊಂಡಿದ್ದಾನೆ. ಈ ಹಿಂದೆಯೂ ಆತನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಥಣಿಸಂದ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಇಂದಿನ ಗಲಾಟೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೂ, ಆಸ್ತಿ ವಿವಾದದ ಮೂಲ ಕಾರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಕಿರಿಕ್ಗಳು ಮುಂದುವರಿಯುವ ಸಾಧ್ಯತೆ ಇದೆ. ಪೊಲೀಸರು ಮತ್ತು ಮದರಸಾ ಆಡಳಿತ ಮಂಡಳಿಗಳು ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದು, ಕಾನೂನು ಪ್ರಕ್ರಿಯೆಗಳ ಮೂಲಕ ವಿವಾದಕ್ಕೆ ಶಾಶ್ವತ ಅಂತ್ಯ ಕಾಣಿಸುವ ನಿರೀಕ್ಷೆಯಲ್ಲಿವೆ.