
ಬೆಂಗಳೂರು (ಆ.19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿ ವತಿಯಿಂದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈಗ ಕಾರ್ಯಾಗಾರದಲ್ಲಿ ರಸ್ತೆಗುಂಡಿ ಮುಚ್ಚುವುದನ್ನು ಕಲಿತುಕೊಂಡು, ಪ್ರಾಕ್ಟೀಸ್ ಮಾಡಿ, ಗುಂಡಿ ಮುಚ್ಚೋ ಹೊತ್ತಿಗೆ ಅದೆಷ್ಟು ಜನರು ಗುಂಡಿಯಲ್ಲಿ ಬಿದ್ದು ಶಾಶ್ವತ ಗುಂಡಿ ಸೇರುತ್ತಾರೋ ಅನ್ನುವ ಭಯ ಕಾಡುತ್ತಿದೆ.
ಪ್ರತಿವರ್ಷ ಗುಂಡಿ ಮುಚ್ಚುತ್ತಲೇ ಬಂದಿದ್ದರೂ, ಮಳೆಗಾಲದಲ್ಲಿ ಪುನಃ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕಾಲಹರಣ ಮಾಡುವುದು ಬೇಕಾ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.