
ಬೆಂಗಳೂರು, ಮಾ.18: ಬೆಂಗಳೂರಿನಲ್ಲಿ ಮನೆ ಹುಡುಕುವುದು ಅಷ್ಟೊಂದು ಸುಲಭದ ಮಾತಲ್ಲ, ಅದರಲ್ಲೂ ಬ್ಯಾಚುಲರ್ಸ್ ಕಥೆ ಕೇಳುವುದೇ ಬೇಡ. ಈಗ ಇಲ್ಲೊಂದು ಅಂತಹದೇ ಪೋಸ್ಟ್ ವೊಂದು ವೈರಲ್ ಆಗಿದೆ. ಆಯ್ಕೆ ಸಿಟಿಯಿಂದ ಎಂ.ಜಿ. ರಸ್ತೆಯ ಕಚೇರಿಗೆ ಪ್ರತಿದಿನ 52 ಕಿ.ಮೀ ಪ್ರಯಾಣಿಸಿ ಸುಸ್ತಾದ ಯುವಕನೊಬ್ಬ, ಮನೆ ಹುಡುಕಲಾರದೆ ಬೆಸತ್ತು ಕೆಲಸವನ್ನೇ ಬಿಡಲು ನಿರ್ಧರಿಸಿರುವ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈ ವೈರಲ್ ಪೋಸ್ಟ್ ಹೊಸ ಚರ್ಚೆಗೆ ಸರಿಯಾಗಿದೆ.
ಆಯ್ಕೆ ಸಿಟಿಯಲ್ಲಿ ವಾಸವಿದ್ದ ಈ ವ್ಯಕ್ತಿ ಎಂ.ಜಿ. ರಸ್ತೆ ಹತ್ತಿರ ಕೆಲಸಕ್ಕೆ ಸೇರಿದ್ದರು. ಪ್ರತಿದಿನ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಸಂಚರಿಸಿ ಸುಸ್ತಾಗುತ್ತಿತ್ತು. ಇಂದಿರಾನಗರ, ದೊಮ್ಮಲೂರು, ರಿಚ್ಮಂಡ್ ಟೌನ್ನಂತಹ ಪ್ರದೇಶಗಳಲ್ಲಿ 25,000 ರೂ. ಬಜೆಟ್ನಲ್ಲಿ 1BHK ಮನೆಗಾಗಿ ಹುಡುಕುತ್ತಿದ್ದರು. ಪ್ರೇಮಿಯ ಆಪ್ಗಳಿಗೆ 8,000 ರೂ. ಪಡೆದರೂ ಮತ್ತು ಬ್ರೋಕರ್ ಜೊತೆ ಅಲೆದಾಟ ಮಾಡಿದರೂ ಸರಿಯಾದ ಮನೆ ಸಿಗಲಿಲ್ಲ. “ಬೆಂಕಿಪೆಟ್ಟಿಗೆಯಂತಹ ಮನೆಗಳಿಗೆ ಅತಿಯಾದ ಬಾಡಿಗೆ ಕೇಳುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಮ್ಮಲೂರಿನಲ್ಲಿ ಒಂದು ಮನೆ ಫಿಕ್ಸ್ ಆಗಿದ್ದರೂ, ಟೋಕನ್ ಹಣ ನೀಡುವ ಸಮಯದಲ್ಲಿ ಬ್ರೋಕರ್ ನಂಬರ್ ಬ್ಲಾಕ್ ಮಾಡಿದ್ದಾನೆ. ನಂತರ ವಿಚಾರಿಸಿದಾಗ ಆ ಮನೆಯನ್ನು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡಲಾಯಿತು. ಈ ಬೇಸತ್ತ ಯುವಕ, “ಬೆಂಗಳೂರು ರಿಯಲ್ ಎಸ್ಟೇಟ್ ಒಂದು ಜೋಕ್, ನಾನು ಈ ಮನೆ ಹುಡುಕಿಕೊಂಡು ಬೇಸತ್ತು, ನನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ವೈರಲ್ ಪೋಸ್ಟ್:
ಬೆಂಗಳೂರು ಮನೆ ಬೇಟೆ ವಾಸ್ತವ
ಮೂಲಕ
u/Sufficient_Level_819 in
ಬೆಂಗಳೂರು ರೆಂಟಲ್ಸ್
ಇಂದಿರಾನಗರ, ಡೊಮ್ಲೂರ್, ವಿಕ್ಟೋರಿಯಾ ಲೇಔಟ್, ಫ್ರೇಜರ್ ಟೌನ್ ಮತ್ತು ರಿಚ್ಮಂಡ್ ಟೌನ್ ಮುಂತಾದ ನೆರೆಹೊರೆಯಲ್ಲಿ ಮನೆ ಹುಡುಕಿದರೂ ಮನೆ ಸಿಕ್ಕಿಲ್ಲ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ವಾಸ್ತವ ನನಗೆ ಆ ಸಮಯದಲ್ಲಿ ಗೊತ್ತಾಯಿತು. ಕೆಲವು ಟು-ಲೀಟ್ ಬೋರ್ಡ್ಗಳನ್ನು ಕಂಡುಕೊಂಡರು ಮತ್ತು ಅವರು ಶಾರ್ಟ್ಲಿಸ್ಟ್ ಮಾಡಿದ ಪ್ರದೇಶಗಳಲ್ಲಿನ ಅಪಾರ್ಟ್ಮೆಂಟ್ಗಳನ್ನು ಗುರುತಿಸಲಾಗಿದೆ. ಅದರ ನಡುವೆ ಈ ದಲ್ಲಾಳಿನ ಮೋಸ ಕೂಡ ನನಗೆ ಚಿತ್ರಹಿಂಸೆ ನೀಡಿದೆ. ಆ ಕಾರಣಕ್ಕೆ ಈ ಮನೆ ಹುಡುಕುವುದು ದೊಡ್ಡ ಸವಾಲಾಗಿದೆ ಎಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ಗೆ ಡಿಕೆಶಿ ಮಾಸ್ಟರ್ ಪ್ಲಾನ್: ಚಾಮರಾಜಪೇಟೆ TO ಕೆಂಗೇರಿ 810 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಯೋಜನೆ!
ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬೆಂಗಳೂರಿನ ಬಾಡಿಗೆಗೆ ಇದೇ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ನಾನು ಜನವರಿಯಿಂದ ಮನೆ ಹುಡುಕುತ್ತಿದ್ದೇನೆ. ಒಂದು ಮನೆಯೂ ಸಿಗುತ್ತಿಲ್ಲ. ಚಿಕ್ಕ ಚಿಕ್ಕ ರೂಮ್ಗಳಿರುವ ಮನೆಗಳನ್ನು ತೋರಿಸಿ, ಹೆಚ್ಚು ಪಡೆಯುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮಲ್ಲೇಶ್ವರಂ, ರಾಜಾಜಿನಗರ ಮತ್ತು ಶೇಷಾದ್ರಿಪುರಂನಂತಹ ಸ್ಥಳಗಳನ್ನು ಪರಿಶೀಲಿಸಿ ಎಂದು ಒಬ್ಬರು ಸಲಹೆ ನೀಡಿದರು.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ