
<p>ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಳ ಜೀವನ ಹೊಸ ತಿರುವು ಪಡೆದಿದೆ. ಒಂದೆಡೆ ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳುತ್ತಿದ್ದರೆ, ಇನ್ನೊಂದೆಡೆ ಆದಿ ಪ್ರೀತಿ ನಿವೇದನೆಗೆ ಸಿದ್ಧನಾಗಿದ್ದಾನೆ. ಈ ಇಬ್ಬರ ನಡುವೆ, ಭಾಗ್ಯ ಒಂಟಿಯಾಗಿ ಬದುಕು ಸಾಗಿಸುವ ನಿರ್ಧಾರ ತೆಗೆದುಕೊಳ್ಳಬಹುದೆ?</p><p> </p><img><p>ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ಒಂದು ಸಾವಿರ ಕಂತುಗಳನ್ನು ಪೂರೈಸಿದೆ. ಇಲ್ಲಿಯವರೆಗೂ ಹೆಜ್ಜೆ ಹೆಜ್ಜೆಗೂ ಭಾಗ್ಯಳಿಗೆ ಅವಮಾನವೇ ಕಾದಿದ್ದು, ಅದೂ ಗಂಡನಿಂದಾಗಿ.</p><img><p>ತೀರಾ ಗಡಿ ಮೀರಿದಂಥ ಭಾಗ್ಯಳ ಗೋಳು ನೋಡಿ ವೀಕ್ಷಕರೂ ರೊಚ್ಚಿಗೆದ್ದು ಹೋಗಿದ್ದು ಇದೆ. ಆದರೆ ಆದಿಯ ಎಂಟ್ರಿಯ ಬಳಿಕ ಭಾಗ್ಯಳ ಲೈಫ್ನಲ್ಲಿ ಒಂದೊಳ್ಳೆ ದಿನಗಳು ಬರುತ್ತಿವೆ. ಅದರಲ್ಲಿಯೂ ಭಾಗ್ಯಳ ಅತ್ತೆ ಕುಸುಮಾ ಆದಿ ಮತ್ತು ಭಾಗ್ಯಳ ಮದುವೆ ಮಾಡಿಸೋ ಕನಸು ಕಾಣುತ್ತಿದ್ದಾಳೆ.</p><img><p>ಭಾಗ್ಯಳ ಮೇಲೆ ಆದಿಗೆ ಲವ್ ಮೂಡುವಂತೆ ಮಾಡುವಲ್ಲಿ ಕುಸುಮಾ ಸಕ್ಸಸ್ ಕೂಡ ಆಗಿದ್ದಾಳೆ. ಆದಿ ಇನ್ನೇನು ತನ್ನ ಲವ್ ಸ್ಟೋರಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ತಾಂಡವ್ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೋರಿ ಮತ್ತೆ ಒಂದಾಗೋಣ ಎಂದಿದ್ದಾನೆ.</p><img><p>ಅತ್ತ ಆದಿಯ ಅಪ್ಪ, ಭಾಗ್ಯಳ ಬಳಿ ಕಂಡು ಕೈಮುಗಿದು ಬೇಡಿಕೊಂಡು ಆದಿಗೆ ಇನ್ನೊಂದು ಮದುವೆಗೆ ಮನವೊಲಿಸು ಎಂದು ಹೇಳಿದ್ದಾನೆ. ಆದಿಯ ಲೈಫ್ ಸೆಟ್ಲ್ ಆಗಬೇಕು ಎಂದರೆ ಆತ ಇನ್ನೊಂದು ಮದುವೆಯಾಗಬೇಕು. ಆತನಿಗೆ ಮದುವೆಗೆ ಮನವೊಲಿಸಲು ನಿನ್ನಿಂದ ಮಾತ್ರ ಸಾಧ್ಯ ಎಂದಿದ್ದಾನೆ!</p><img><p>ಆದಿ ಅಪ್ಪನಿಗೆ ಭಾಗ್ಯ ಮಾತು ಕೊಟ್ಟರೆ, ಅವಳಂತೂ ಮದುವೆಯಾಗಲ್ಲ, ತಾಂಡವ್ಗೆ ಇದಾಗಲೇ ಶ್ರೇಷ್ಠಾ ಜೊತೆ ಮದುವೆಯಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರ ಲೈಫ್ ಸೆಟ್ಲ್ ಮಾಡುವುದು ಗ್ಯಾರೆಂಟಿ.</p><img><p>ಹಾಗಿದ್ದರೆ ಆದಿ ಮತ್ತು ತಾಂಡವ್ ಲೈಫ್ ಸೆಟ್ಲ್ ಮಾಡಿ ಭಾಗ್ಯ ಒಂಟಿಯಾಗಿಯೇ ಜೀವನ ನಡೆಸುವ ಟ್ವಿಸ್ಟ್ ಬಹುಶಃ ಈ ಸೀರಿಯಲ್ಗೆ ಬರುವಂತೆ ಕಾಣಿಸುತ್ತಿದೆ. ಒಂಟಿಯಾಗಿಯೇ ಹೋರಾಟ ಮಾಡಿ, ಒಂಟಿಯಾಗಿಯೇ ಜೀವನ ಸಾಗಿಸುವ ಹೆಣ್ಣೊಬ್ಬಳ ಛಲವನ್ನು ತೋರಿಸುವ ಉದ್ದೇಶ ಈ ಸೀರಿಯಲ್ಗೆ ಇರುವ ಹಿನ್ನೆಲೆಯಲ್ಲಿ, ಹಾಗಾದರೆ ಸಂದೇಹವೇ ಇಲ್ಲ.</p>
Source link
Bhagyalakshmi ರೋಚಕ ಟ್ವಿಸ್ಟ್: ಆದಿ- ತಾಂಡವ್ ಜೀವನ ಸೆಟ್ಲ್ ಮಾಡಿ ಭಾಗ್ಯ ಕೊನೆಗೂ ಒಂಟಿ?