
<p>ಭಾಗ್ಯಲಕ್ಷ್ಮಿ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ. ಒಂದೆಡೆ ತಾಂಡವ್ ಪ್ರೀತಿಯ ಬಲೆ ನೇಯುತ್ತಿದ್ದರೆ, ಇನ್ನೊಂದೆಡೆ ಆದಿಯನ್ನೇ ಮದುವೆಯಾಗಬೇಕೆಂಬ ಒತ್ತಡವಿದೆ.</p><img><p>ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ಕುತೂಹಲದ ಹಂತ ತಲುಪಿದೆ. ಅತ್ತ ಆದಿ ಇನ್ನೂ ಮದುವೆಯ ವಿಷಯವನ್ನು ಭಾಗ್ಯಳ ಬಳಿ ಹೇಳಿಕೊಳ್ಳದಿದ್ದರೆ, ಇತ್ತ ತಾಂಡವ್ಗೆ ಭಾಗ್ಯಳ ಮೇಲೆ ಲವ್ ಮೂಡಲು ಶುರುವಾಗಿದೆ.</p><img><p>ಯಾವುದೇ ಕಾರಣಕ್ಕೂ ತಾಂಡವ್ ಜೊತೆ ತಾನು ಹೋಗಲ್ಲ ಎಂದು ಭಾಗ್ಯ ಪಟ್ಟು ಹಿಡಿದು ಕುಳಿತಿದ್ದಾಳೆ. ಆದರೆ, ಅಮ್ಮ ಸುನಂದ ಮತ್ತು ಮಗಳು ತನ್ವಿ ಮಾತ್ರ ತಾಂಡವ್ ಪರ ಇದ್ದಾರೆ.</p><img><p>ಅದೇ ಇನ್ನೊಂದೆಡೆ, ತಾಂಡವ್ನನ್ನು ನಂಬಬೇಡ, ಆದಿಯನ್ನೇ ಮದುವೆಯಾಗು ಎನ್ನುವುದು ಅತ್ತೆ ಕುಸುಮಾ ಮಾತು, ಜೊತೆಗೆ ವೀಕ್ಷಕರದ್ದು ಕೂಡ.</p><img><p>ಆದರೂ ಇದರ ನಡುವೆಯೇ, ಜ್ಯೋತಿಷಿಯೊಬ್ಬ ಕಣಿ ನುಡಿದಿದ್ದಾರೆ. ಬರುವ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು. ಇಲ್ಲದಿದ್ದರೆ ತಾಳಿಭಾಗ್ಯ ಇಲ್ಲ ಎಂದಿದ್ದಾನೆ.</p><img><p>ಹಾಗಿದ್ದರೆ ಹುಣ್ಣಿಮೆಯ ಒಳಗೆ ಭಾಗ್ಯಳಿಗೆ ತಾಳಿ ಕಟ್ಟುವವರು ಆದಿನೋ, ತಾಂಡವ್ನೋ ಎನ್ನುವ ಕುತೂಹಲ ಸದ್ಯಕ್ಕಿದೆ. ಭಾಗ್ಯ ಅಂತೂ ತಾಂಡವ್ನನ್ನು ಒಪ್ಪಿಕೊಳ್ಳದಿದ್ದರೂ, ಆಕೆ ತೋರುವ ಕಾಳಜಿಯಿಂದ ತಾಂಡವ್ ಕರಗುತ್ತಿದ್ದಾನೆ.</p><img><p>ಅದೇ ಇನ್ನೊಂದೆಡೆ, ಶ್ರೇಷ್ಠಾ ಆತ್ಮ*ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಶ್ರೇಷ್ಠಾಳಿಗೆ ಬುದ್ಧಿ ಬಂದು ತಾಂಡವ್ ಜೊತೆ ಸಂಸಾರ ಮಾಡುತ್ತಾಳೆ, ಆದಿ ಮತ್ತು ಭಾಗ್ಯ ಒಂದಾಗುತ್ತಾರೆ ಎನ್ನುವುದು ಸದ್ಯಕ್ಕಿರುವ ಅನಿಸಿಕೆ. ಒಟ್ಟಿನಲ್ಲಿ ಹುಣ್ಣಿಮೆ ಬರಲು ಸೀರಿಯಲ್ ಪ್ರೇಮಿಗಳು ಇನ್ನೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ.</p>
Source link
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?