
<p>Bhagyalakshmi Serial: ‘ಭಾಗ್ಯಲಕ್ಷ್ಮಿ’ ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳ ಬದುಕಿಗೆ ಹಳೆಯ ಪತಿ ತಾಂಡವ್ ಕೂಡ ಬಂದಿದ್ದಾನೆ, ಇಷ್ಟುದಿನಗಳ ಕಾಲ ಕಷ್ಟದಲ್ಲಿ ಜೊತೆಗಿದ್ದು, ಆಕೆಯನ್ನು ಗೌರವಿಸುವ ಆದೀಶ್ವರ್ ಕಾಮತ್ ಇದ್ದಾನೆ. ಆದೀಶ್ವರ್ ಜೊತೆ ಮದುವೆ ಆಗಬೇಕು ಎಂದುಕೊಂಡ ಭಾಗ್ಯಗೆ ಧರ್ಮಸಂಕಟ ಬಂದಿದೆ.</p><p> </p><img><p>ತಾಂಡವ್ ಮೊದಲಿನಿಂದಲೂ ಭಾಗ್ಯಳನ್ನು ಹೆಂಡತಿಯಾಗಿ ನೋಡದೆ, ಒಬ್ಬ ಕೆಲಸದವಳಂತೆ ನೋಡಿದ್ದನು. ಆಕೆ ಓದಿಲ್ಲ, ಹಳೇ ಸಂಪ್ರದಾಯದವಳು ಎಂದು ಹೀಗಗಳೆದಿದ್ದನು. ಆಮೇಲೆ ಅವನು ಶ್ರೇಷ್ಠಾ ಹಿಂದೆ ಹೋದನು. ಹದಿನಾರು ವರ್ಷಗಳ ಕಾಲ ಪತ್ನಿ ಜೊತೆ ಸಂಸಾರ ಮಾಡಿ, ಎರಡು ಮಕ್ಕಳನ್ನು ಕೊಟ್ಟು, ಇನ್ನೊಂದು ಮದುವೆ ಆದನು.</p><img><p>ಇನ್ನೊಂದೆಡೆ ಆದೀಶ್ವರ್ ಕಾಮತ್ ಅವರು ಭಾಗ್ಯಳ ನಿಜವಾದ ವ್ಯಕ್ತಿತ್ವವನ್ನು ಮೆಚ್ಚಿಕೊಂಡಿದ್ದನು. ಭಾಗ್ಯಳಲ್ಲಿರುವ ಪ್ರತಿಭೆ, ಒಳ್ಳೆಯತನವನ್ನು ಮೆಚ್ಚಿ ಸಾಥ್ ನೀಡಿದ್ದನು. ಈಗ ಮದುವೆ ಆಗೋಕೆ ರೆಡಿ ಆಗಿದ್ದನು. ಭಾಗ್ಯ ಯಾವಾಗ ಮದುವೆ ಆಗಲು ಒಪ್ಪಲಿಲ್ಲವೋ ಆಗ ಅದನ್ನು ಕೂಡ ಸ್ವೀಕಾರ ಮಾಡಿದ್ದನು.</p><img><p>ಮದುವೆ ಎನ್ನೋದು ಕೇವಲ 2 ಮನಸ್ಸುಗಳ ಮಿಲನವಲ್ಲ, ಬದಲಾಗಿ ಅದು ನಿಜಕ್ಕೂ ಪರಸ್ಪರ ಗೌರವದ ಮೇಲೆ ನಿಲ್ಲಬೇಕು. ನನಗೆ ಇಂದು ಬೇಕಾಗಿರುವುದು ತನ್ನನ್ನು ಕೀಳಾಗಿ ನೋಡುವ ಗಂಡನಲ್ಲ, ತನ್ನ ಕನಸುಗಳಿಗೆ ನೀರೆರೆದು, ಸಾಥ್ ಕೊಡುವ ಒಬ್ಬ ಸ್ನೇಹಿತ, ಸಂಗಾತಿ ಎಂದು ಭಾಗ್ಯ ಬಯಸುತ್ತಾಳೆ. ಈ ನಿಟ್ಟಿನಲ್ಲಿ ಭಾಗ್ಯ ಜೀವನದಲ್ಲಿ ಆದಿ ಪಾತ್ರ ಎದ್ದು ಕಾಣಿಸುತ್ತದೆ.</p><img><p>ಭಾಗ್ಯ ಈಗ ಮೊದಲಿನ ಥರ ಗಂಡ ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಇರುವ ‘ಅಬಲೆ’ಯಲ್ಲ. ಈಗ ಅವಳು ಸ್ವತಂತ್ರವಾಗಿ ಯೋಚಿಸುತ್ತಾಳೆ, ದುಡಿಯುತ್ತಾಳೆ, ಕೇವಲ ಮಕ್ಕಳಿಗಾಗಿ ಅಥವಾ ಸಮಾಜಕ್ಕಾಗಿ ಗಂಡ ತಾಂಡವ್ ಜೊತೆ ರಾಜಿ ಮಾಡಿಕೊಳ್ಳುವುದಕ್ಕಿಂತ, ತನ್ನನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ತಾಳಾ ಎಂದು ಕಾದು ನೋಡಬೇಕಿದೆ.</p><img><p>ವಿಷಪೂರಿತ ಅಥವಾ ಟಾಕ್ಸಿಕ್ ಸಂಬಂಧದಿಂದ ಹೊರಬಂದು ಗೌರವಯುತವಾದ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಭಾಗ್ಯಳ ನಿಜವಾದ ಹಕ್ಕು. ಆಕೆ ಆದೀಶ್ವರ್ ಕಾಮತ್ ಅವರಂಥ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಥವಾ ತನ್ನ ಸ್ವಂತ ಶಕ್ತಿ ಮೇಲೆ ಬದುಕುವುದು ಹೆಚ್ಚು ಸೂಕ್ತ ಎಂದು ವೀಕ್ಷಕರು ಹೇಳುತ್ತಿದ್ದಾರೆ.</p>
Source link
Bhagyalakshmi Serial: 2 ನೇ ಮದುವೆಯಾಗೋ ಖುಷಿಯಲ್ಲಿದ್ದ ಭಾಗ್ಯಗೆ ಭೂಮಿ ಇಬ್ಭಾಗವಾಗುವಂಥ ನ್ಯೂಸ್ ಸಿಕ್ಕಿತು!