
<p>Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮಾತ್ರ ಬದಲಾಗಿಲ್ಲ, ಭಾಗ್ಯ ಬದುಕನ್ನು ಇನ್ನಷ್ಟು ಹಾಳು ಮಾಡಬೇಕು, ಭಾಗ್ಯ-ಆದಿ ದೂರ ಆಗಬೇಕು ಎಂದು ಅವನು ಪ್ಲ್ಯಾನ್ ಮಾಡಿದ್ದಾನೆ. ಈಗ ಶ್ರೇಷ್ಠ ಅವನಿಗೆ ಗುಡ್ನ್ಯೂಸ್ ಕೊಟ್ಟಿದ್ದಾಳೆ.</p><p> </p><img><p>ತನ್ವಿ ಹೇಳಿದ್ದಕ್ಕಾಗಿ ಭಾಗ್ಯಳನ್ನು ನಾನು ಮದುವೆ ಆಗೋದಿಲ್ಲ ಎಂದು ಆದಿ ಹೇಳಿದ್ದಾನೆ. ಇದರ ಹಿಂದೆ ಏನು ಕಾರಣ ಇದೆ ಎಂದು ಇಡೀ ಕುಟುಂಬ ತಲೆ ಕೆಡಿಸಿಕೊಂಡಿದೆ. ಇದು ಭಾಗ್ಯ ತಾಯಿಗೆ ಖುಷಿ ಕೊಟ್ಟಿದೆ. ಇನ್ನೊಂದು ಕಡೆ ತಾಂಡವ್ ತಂದೆಗೆ ಅನಾರೋಗ್ಯ ಆಗಿದೆ.</p><img><p>ಆದಿಯನ್ನು ಮದುವೆ ಆಗಬೇಕು, ಚೆನ್ನಾಗಿ ಬದುಕಬೇಕು ಎಂದು ಭಾಗ್ಯ ಕನಸು ಕಾಣುತ್ತಿದ್ದಳು. ಆದರೆ ಈಗ ಆದಿಯೇ ಮದುವೆ ಆಗೋದಿಲ್ಲ ಎಂದು ಹೇಳಿರೋದು ಅವಳಿಗೆ ಚಿಂತೆಯಾಗಿದೆ. ಇದರ ಹಿಂದಿನ ಕಾರಣ ಏನು ಎಂದು ಅವಳು ಕಂಡುಹಿಡಿಯಬೇಕಿದೆ.</p><img><p>ಆದಷ್ಟು ಬೇಗ ಭಾಗ್ಯ ತಾಂಡವ್ ಜೊತೆ ಮದುವೆ ಆಗಬೇಕು ಎಂದು ಮಾವ ಧರ್ಮರಾಜ್ ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಭಾಗ್ಯ-ಆದಿ ಮದುವೆ ನಡೆಯೋದು ಡೌಟ್ ಎಂದು ಕಾಣುತ್ತಿದೆ, ಇದಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಗಬಹುದು.</p><img><p>ಶ್ರೇಷ್ಠ ತಾಯಿ ಆಗ್ತಿದ್ದಾಳೆ, ಈ ವಿಷಯವನ್ನು ಅವಳು ತಾಂಡವ್ಗೆ ಹೇಳಿದ್ದಾಳೆ. ಈ ವಿಷಯ ಏನಾದರೂ ಬಾಕಿಯವರಿಗೆ ಗೊತ್ತಾದರೆ ತಾಂಡವ್ ಪ್ಲ್ಯಾನ್ ಹಾಳಾದಂತೆ. ಒಟ್ಟಿನಲ್ಲಿ ಭಾಗ್ಯ ಬದುಕು ಮಾತ್ರ ಏನಾಗಲಿದೆಯೋ ಏನೋ!</p><img><p>ಭಾಗ್ಯಳನ್ನು ಇಷ್ಟವಿಲ್ಲದೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರೋ ತಾಂಡವ್, ಈಗ ಇಷ್ಟಪಟ್ಟು ಶ್ರೇಷ್ಠಳನ್ನು ಮದುವೆಯಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾನೆ. ಈ ಬಗ್ಗೆ ನೀವು ಏನು ಹೇಳ್ತೀರಿ?</p>
Source link
Bhagyalakshmi Serial: ಮನೆಹಾಳ ತಾಂಡವ್ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way