Headlines

ಬದಲಾದ ಭಾಗ್ಯ: ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​

ಬದಲಾದ ಭಾಗ್ಯ: ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​



ಬದಲಾದ ಭಾಗ್ಯ: ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​
ಭಾಗ್ಯಲಕ್ಷ್ಷಿ ಸೀರಿಯಲ್ ಅಂತಿಮ ಘಟ್ಟ ತಲುಪಿದ್ದು, ತಾಂಡವ್ ಕ್ಷಮೆ ಕೇಳಿದರೂ ಭಾಗ್ಯ ಒಪ್ಪುತ್ತಿಲ್ಲ. ಇದರ ನಡುವೆ ಆದಿ ಪ್ರಪೋಸ್ ಮಾಡಿದ್ದು, ಭಾಗ್ಯಳ ಮನಸ್ಸಿನಲ್ಲಿ ಪ್ರೀತಿ ಮೂಡಿದೆ. ಈ ತ್ರಿಕೋನ ಪ್ರೇಮಕಥೆಯ ಅಂತ್ಯ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.<img><p>ಭಾಗ್ಯಲಕ್ಷ್ಷಿ ಸೀರಿಯಲ್​ (Bhagyalakshmi Serial) ಅಂತಿಮ ಹಂತ ತಲುಪಿದೆ. ಇದಾಗಲೇ ತಾನು ಮಾಡಿರುವ ತಪ್ಪಿಗೆ ತಾಂಡವ್​ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ.ತನಗೆ ಭಾಗ್ಯ ಕ್ಷಮೆ ಕೊಟ್ಟರೆ ಸಾಕು, ಇನ್ನು ಜೀವನದಲ್ಲಿ ಆಕೆಯ ತಂಟೆಗೆ ಬರುವುದಿಲ್ಲ ಎನ್ನುತ್ತಿದ್ದಾನೆ.</p><img><p>ಆದರೆ, ಯಾರೇ ಹೇಳಿದರೂ ನಾನು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಡ್ಡಿ ಮುರಿದವಳಂತೆ ಭಾಗ್ಯ ಹೇಳಿದ್ದಾಳೆ. ಭಾಗ್ಯಳ ಈ ಬದಲಾವಣೆಗೆ ವೀಕ್ಷಕರು ಭರ್ಜರಿ ಖುಷಿ ಪಟ್ಟುಕೊಂಡಿದ್ದಾರೆ. ಅಳುಮುಂಜಿ ಭಾಗ್ಯ ಈಗಾದರೂ, ಬದಲಾದಳಲ್ಲ ಎನ್ನುವುದು ಎಲ್ಲರ ಖುಷಿ.</p><img><p>ಇದರ ಮಧ್ಯೆಯೇ ಆದಿ ಕೂಡ ಭಾಗ್ಯಳಿಗೆ ಪ್ರಪೋಸ್​ ಮಾಡಿದ್ದು, ಭಾಗ್ಯಳ ಮನಸ್ಸಿನಲ್ಲಿಯೂ ಆದಿಯ ಮೇಲೆ ಪ್ರೀತಿ ಮೂಡಿದೆ. ಇಬ್ಬರು ದೊಡ್ಡ ಮಕ್ಕಳು ಇರುವಾಗ ಎರಡನೆಯ ಮದುವೆ ಸರಿಯಲ್ಲ ಎನ್ನುವ ಆತಂಕ ಮನಸ್ಸಿನಲ್ಲಿ ಇದ್ದರೂ ಪ್ರೀತಿಯ ಮುಂದೆ ಅದು ಸೋತಿದೆ.</p><img><p>ಆದರೂ ಕೊನೆಯವರೆಗೆ ಹೀಗೆಯೇ ಎನ್ನಲಾಗದು. ಭಾಗ್ಯ ಯಾರ ಪರ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದರ ನಡುವೆಯೇ, ಭಾಗ್ಯ, ಆದಿ ಮತ್ತು ತಾಂಡವ್​ ಭರ್ಜರಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನುನೋಡಿ ಎಲ್ಲರೂ ಆದಿ ಭಾಗ್ಯ ಒಂದಾಗಬೇಕು ಎನ್ನುತ್ತಿದ್ದಾರೆ.</p><img><p>ಭಾಗ್ಯ ಪಾತ್ರಧಾರಿ ಸುಷ್ಮಾಕೆ. ರಾವ್​ ಅವರು ಜೀನ್ಸ್​ನಲ್ಲಿ ಮಿಂಚಿದ್ದರೆ, ತಾಂಡವ್​ ಪಾತ್ರಧಾರಿ ಸುದರ್ಶನ್​ ರಂಗಪ್ರಸಾದ್​ ಮತ್ತು ಆದಿ ಪಾತ್ರಧಾರಿ ಹರೀಶ್​ ಅವರು ಒಂದೇ ರೀತಿಯ ಮಾರ್ವಾಡಿ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಈ ಫೋಟೋವನ್ನು ಹಾರ್ಟ್​ ಇಮೋಜಿಗಳಿಂದ ಕಮೆಂಟಿಗರು ತುಂಬಿಸಿದ್ದಾರೆ. ಆದರೆ ಏನೇ ಆದರೂ ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವುದು ಅವರ ಮಾತು.</p><img><p>ಭಾಗ್ಯ- ಆದಿ ಒಂದಾಗುವ ಲಕ್ಷಣಗಳೂ ಇದೆ. ತಾಂಡವ್​ ಮತ್ತು ಶ್ರೇಷ್ಠಾಳನ್ನು ಭಾಗ್ಯ ಒಂದು ಮಾಡಬಹುದು. ಶ್ರೇಷ್ಠಾಳಿಗೂ ತಾನು ಮಾಡಿರುವುದು ಮೋಸ ಎಂದು ಬುದ್ಧಿ ಬಂದು ತಾಂಡವ್​ನಲ್ಲಿ ಕ್ಷಮೆ ಕೇಳಿದರೆ ಅಲ್ಲಿಗೆ ಎಲ್ಲವೂ ಸುಸೂತ್ರವಾಗಿ ದಿ ಎಂಡ್​ ಆಗುವಲ್ಲಿ ಸಂದೇಹವಿಲ್ಲ.</p>



Source link

Leave a Reply

Your email address will not be published. Required fields are marked *