Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು

Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು



Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು
<p>ಭಾಗ್ಯಲಕ್ಷ್ಮಿಯಲ್ಲಿ, &nbsp;ಭಾಗ್ಯಳ ಮರುಮದುವೆಗೆ ಅತ್ತೆ ಕುಸುಮಾ ಬೆಂಬಲಿಸಿದರೆ, &nbsp;ಸುನಂದಾ ವಿರೋಧಿಸುತ್ತಿದ್ದಾಳೆ. &nbsp;ಪ್ರೇಕ್ಷಕರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಸೀರಿಯಲ್ ನೋಡಿ ಪ್ರತಿಕ್ರಿಯಿಸುವ ಮಹಿಳೆಯರು ನಿಜ ಜೀವನದಲ್ಲಿಯೂ ಇಂತಹದ್ದೇ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.</p><img><p>ಸೀರಿಯಲ್​ ನೋಡುವವರ ಪೈಕಿ ಅತಿದೊಡ್ಡ ವರ್ಗದವರು ಮಹಿಳೆಯರೇ ಆಗಿದ್ದಾರೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಭಾಷೆಗಳ ಸೀರಿಯಲ್​ಗಳು ಕೂಡ ಮಹಿಳಾ ಪ್ರಧಾನವೇ. ಅವರೇ ನಾಯಕಿ, ಅವರೇ ವಿಲನ್​. ಗಂಡಸರು ಎನ್ನೋದು ನೆಪಕ್ಕೆ ಮಾತ್ರ. ಏಕೆಂದರೆ ಅಲ್ಲಿ ಬರುವ ಮಹಿಳೆಯರ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ನೋಡುವ ದೊಡ್ಡ ವರ್ಗವೇ ಇದೆ.</p><img><p>ಆದರೆ, ಸೀರಿಯಲ್​ ಅನ್ನು ಅಷ್ಟು ಪ್ರೀತಿಯಿಂದ ನೋಡುವ ಇದೇ ಧಾರಾವಾಹಿ ಪ್ರೇಮಿಗಳು, ತಮ್ಮ ಮನೆಯಲ್ಲಿಯೂ ಇಂಥದ್ದೇ ಸನ್ನಿವೇಶ ಬಂದಾಗ ಮಾತ್ರ ಉಲ್ಟಾ ಹೊಡೆಯುವುದು ಇದೆ. ಸೀರಿಯಲ್​ಗಳಲ್ಲಿನ ವಿಲನ್​ಗಳನ್ನು ನೋಡಿ ಕೊತಕೊತ ಕುದಿಯುವ ಕೆಲವು ಮಹಿಳೆಯರು, ನಿಜ ಜೀವನದಲ್ಲಿಯೂ ವಿಲನ್​ಗಳಾಗಿಯೇ ಇರುವುದು ಅವರಿಗೆ ತಿಳಿಯುವುದೇ ಇಲ್ಲ.</p><img><p>ಅತ್ತೆ ಅಥವಾ ಸೊಸೆ ಇಲ್ಲವೇ ನಾದಿನಿನೋ, ಅತ್ತಿಗೆಯೋ ಸೀರಿಯಲ್​ಗಳಲ್ಲಿ ಕೆಟ್ಟ ಪಾತ್ರಧಾರಿಗಳಾಗಿದ್ದರೆ, ಅವರು ನಾಶವಾಗಿ ಹೋಗಲಿ ಎಂದು ಶಾಪ ಹಾಕುವ ಈ ಸೀರಿಯಲ್​ ಪ್ರೇಮಿಗಳು ತಮ್ಮ ಮನೆಯ ಅತ್ತೆನೋ, ಸೊಸೆನೋ, ನಾದಿನಿನೋ, ಅತ್ತಿಗೆಗೋ ಇದೇ ರೀತಿ ವಿಲನ್ ಆಗ್ತಿರುವುದು ಗೊತ್ತೇ ಆಗಲ್ಲ.</p><img><p>ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ, ಭಾಗ್ಯಳ ಅತ್ತೆ ಕುಸುಮಾ ಭಾಗ್ಯಳಿಗೆ ಅಮ್ಮನ ಸ್ಥಾನದಲ್ಲಿದ್ದರೆ, ಸ್ವಂತ ಅಮ್ಮ ವಿಲನ್​ ಆಗಿರುವಂತೆ ಕಾಣಿಸುತ್ತಿದೆ. ಭಾಗ್ಯ ಈ ಸೀರಿಯಲ್​ನಲ್ಲಿ ಮದುವೆಯಾಗಿನಿಂದಲೂ ಗಂಡ ತಾಂಡವ್​ನಿಂದ ನರಕವನ್ನೇ ಕಂಡವಳು. ಹೆಜ್ಜೆ ಹೆಜ್ಜೆಗೂ ಅವಮಾನ ಸಹಿಸಿಕೊಂಡವಳು. ಸಾಲದು ಎನ್ನುವುದಕ್ಕೆ ಮತ್ತೊಬ್ಬಳನ್ನು ಕಟ್ಟಿಕೊಂಡು ಹೋಗಿದ್ದಾನೆ ತಾಂಡವ್​.</p><img><p>ಇದೀಗ ಆಕೆಯ ಬಾಳಲ್ಲಿ ಆದಿಯ ಎಂಟ್ರಿಯಾಗಿದೆ. ಆದಿ ಮತ್ತು ಭಾಗ್ಯಳನ್ನು ಒಂದುಮಾಡಲು ಅತ್ತೆ ಕುಸುಮಾ ಟ್ರೈ ಮಾಡುತ್ತಿದ್ದಾಳೆ. ಆದರೆ ಅಳಿಯ ಹೇಗೇ ಇರಲಿ, ಮಗಳ ಸಂಸಾರ ಅವನ ಜೊತೆಯೇ ನಡೆಯಬೇಕು, ಸಮಾಜ ಏನು ಹೇಳುತ್ತದೆ ಎಂದೆಲ್ಲಾ ಯೋಚನೆ ಮಾಡುವ ಕ್ಯಾರೆಕ್ಟರ್​ ಆಗಿ ಭಾಗ್ಯಳ ಅಮ್ಮ ಸುನಂದಾ ಇದ್ದಾಳೆ.</p><img><p>ಇದೀಗ ಇದೇ ವಿಷಯಕ್ಕೆ ಸುನಂದಾ ಮತ್ತು ಕುಸುಮಾ ನಡುವೆ ತಿಕ್ಕಾಟ ಶುರುವಾಗಿದೆ. ಗಂಡ-ಹೆಂಡತಿ ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ, ಬೇರೊಬ್ಬಳ ಜೊತೆ ಓಡಿ ಹೋಗಿರೋ ತಾಂಡವ್​ ಜೊತೆಯೇ ಮಗಳು ಸಂಸಾರ ಮಾಡಬೇಕು ಎನ್ನೋದು ಅಮ್ಮ ಸುನಂದಾ ಮಾತಾದರೆ, ತನ್ನ ಮಗನಿಂದ ದೌರ್ಜನ್ಯ ಸಹಿಸಿಕೊಂಡಿರುವ ಸೊಸೆ ಭಾಗ್ಯ ಇನ್ನುಮುಂದಾದರೂ ಚೆನ್ನಾಗಿರಲಿ, ಆದಿಯನ್ನು ಮದುವೆಯಾಗಲಿ ಎನ್ನೋಳು ಕುಸುಮಾ.</p><img><p>ಭಾಗ್ಯ ಅನುಭವಿಸಿದ ನೋವನ್ನು ಈ ಸೀರಿಯಲ್​ನಲ್ಲಿ ಮುಂಚಿನಿಂದಲೂ ನೋಡಿಕೊಂಡು ಬಂದಿರೋ ಮಹಿಳಾ ಸೀರಿಯಲ್​ ಪ್ರೇಮಿಗಳು ಇದೀಗ ಸುನಂದಾ ಆಡಿದ ಮಾತಿಗೆ ಕಿಡಿ ಕಾರುತ್ತಿದ್ದಾರೆ. ಮಗಳ ಭವಿಷ್ಯವನ್ನು ಹಾಳು ಮಾಡ್ತಿರೋದಾಗಿ ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಹಾಕುತ್ತಿದ್ದಾರೆ. ಆದರೆ ತಮ್ಮ ಮಗಳ ವಿಷಯಕ್ಕೆ ಬಂದರೂ ಹೀಗೆಯೇ ಮಾಡ್ತಾರಾ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಆಕೆಯನ್ನು ಗಂಡನಿಂದ ಮುಕ್ತಿ ಕೊಡಿಸುವ ಬಗ್ಗೆ ಯೋಚನೆ ಮಾಡ್ತಾರಾ ಅಥವಾ ಸತ್ತರೂ ಸರಿ, ಗಂಡನ ಜೊತೆನೇ ಬಾಳಬೇಕು ಎನ್ನುತ್ತಾರಾ ಎನ್ನುವುದು ಈ ಚರ್ಚೆಯ ವಿಷಯವಾಗಿದೆ!</p>



Source link

Leave a Reply

Your email address will not be published. Required fields are marked *