Headlines

ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?

ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?



ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?
<p>’ಭಾಗ್ಯಲಕ್ಷ್ಮಿ’ ಮತ್ತು ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳಲ್ಲಿ ನಾಯಕಿಯರಾದ ಭಾಗ್ಯ ಮತ್ತು ಜಾನು ತಮ್ಮ ಗಂಡಂದಿರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಭಾಗ್ಯ ತಾಂಡವ್‌ನನ್ನು ಮದುವೆಯಾಗುವ ಮೂಲಕ ಮತ್ತು ಜಾನು ಜಯಂತ್‌ಗೆ ಅವನದೇ ರೀತಿಯಲ್ಲಿ ಪಾಠ ಕಲಿಸುವ ಮೂಲಕ, ದೊಡ್ಡ ಕಂಟಕವನ್ನು ತಂದೊಡ್ಡುತ್ತಿದ್ದಾರೆ.</p><img><p>ಎರಡು ಚಾನೆಲ್​ಗಳು, ಎರಡು ವಿಭಿನ್ನ ಸ್ಟೋರಿಗಳು. ಆದರೂ ಇದೀಗ ಒಂದೇ ರೀತಿಯ ಕ್ಲೈಮ್ಯಾಕ್ಸ್​. ಈ ಎರಡೂ ಸೀರಿಯಲ್​ಗಳ ನಾಯಕರಿಗೆ ಕಾದಿದೆ ಮಾರಿಹಬ್ಬ. ಶುರುವಾಗಲಿದೆ ಭಾರಿ ಕಂಟಕ, ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಿಯಾಳು ಎನ್ನೋದಕ್ಕೆ ಈ ಎರಡೂ ಸೀರಿಯಲ್​ಗಳು ಒಂದೇ ಸಲ ಸಾಕ್ಷಿಯಾಗ್ತಿರೋದು ಕುತೂಹಲ.</p><img><p>ಅದರಲ್ಲಿ ಒಂದು ಕಲರ್ಸ್​​ ಕನ್ನಡದ ಭಾಗ್ಯಲಕ್ಷ್ಮಿ. ಇನ್ನೊಂದು ಜೀ ಕನ್ನಡದ ಲಕ್ಷ್ಮೀ ನಿವಾಸ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಎಲ್ಲವೂ ಗೊತ್ತಿದ್ದೇ ತಾಂಡವ್​ನನ್ನು ಮತ್ತೊಮ್ಮೆ ಮದುವೆಯಾಗಲು ಭಾಗ್ಯ ಒಪ್ಪಿಕೊಂಡಿದ್ದರೆ, ಲಕ್ಷ್ಮೀ ನಿವಾಸದಲ್ಲಿ, ಸೈಕೋ ಜಯಂತ್​ನಿಗೆ ಅವನದ್ದೇ ಆದ ರೀತಿಯಲ್ಲಿ ತಿರುಗೇಟು ನೀಡಲು ಜಾನು ಮತ್ತೆ ಮನೆಗೆ ವಾಪಸ್​ ಆಗಿದ್ದಾಳೆ.</p><img><p>ಮೊದಲಿಗೆ ಭಾಗ್ಯಲಕ್ಷ್ಮಿ ಸೀರಿಯಲ್​ ನೋಡೋಣ. ತಾಂಡವ್​ ತಾನು ಒಳ್ಳೆಯವನಾಗಿದ್ದೇನೆ ಎಂದು ಎಲ್ಲರ ಎದುರೂ ಪೋಸ್​ ಕೊಟ್ಟಿದ್ದಾನೆ. ಅಮ್ಮ ಕುಸುಮಾ ಮತ್ತು ಭಾಗ್ಯನಿಗೆ ಇವನು ಸರಿಯಾಗಲ್ಲ ಎಂದು ಗೊತ್ತಿದ್ದರೂ, ಅಮ್ಮ ಸುನಂದ ಮತ್ತು ಮಾವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅವಳ ಜವಾಬ್ದಾರಿ ಆಗಿದ್ದರಿಂದ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ.</p><img><p>ತಮ್ಮ ಪ್ಲ್ಯಾನ್​ ಸಕ್ಸಸ್​ ಆಯ್ತು ಎಂದು ತಾಂಡವ್​ ಮನಸ್ಸಿನಲ್ಲಿಯೇ ಖುಷಿ ಪಟ್ಟುಕೊಳ್ತಿದ್ದಾನೆ. ಆದರೆ, ತಾನು ಭಾಗ್ಯಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗುತ್ತಿರುವುದಾಗಿ ಶ್ರೇಷ್ಠಾಳ ಎದುರು ಮಾತನಾಡಿದ್ದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಆದ್ದರಿಂದ ಅವಳ ಉದ್ದೇಶವೇ ಬೇರೆ ಇದೆ.</p><img><p>ಮದುವೆಯ ಸಂದರ್ಭದಲ್ಲಿ ಕುಂಕುಮ ಇಡಲು ಬಂದಾಗ, ತಾಂಡವ್​ನಿಂದ ಆಕೆ ಕುಂಕುಮ ಇಟ್ಟುಕೊಳ್ಳಲಿಲ್ಲ. ತಾಂಡವ್​ ಕೊಟ್ಟಿರೋ ದುಬಾರಿ ಚಿನ್ನದ ಬಳೆಗಳ ಬದಲು ಆದಿ ಕೊಟ್ಟ ಹಸಿರು ಗಾಜಿನ ಬಳೆಗಳನ್ನೇ ತೊಟ್ಟುಕೊಂಡಿದ್ದಾಳೆ. ಮದುವೆಯಾಗುವ ಹಿಂದೆ ಅವಳ ಉದ್ದೇಶವೇ ಬೇರೆ ಇದೆ. ತಾಂಡವ್​ಗೆ ಇನ್ನಿದೆ ಮಾರಿ ಹಬ್ಬ.</p><img><p>ಅದೇ ಇನ್ನೊಂದೆಡೆ, ಲಕ್ಷ್ಮೀ ನಿವಾಸದ ಚಿನ್ನುಮರಿ ಈಗ ಮಹಾಮಾರಿ ಆಗಿದ್ದಾಳೆ. ಸೈಕೋ ಗಂಡ ಅತಿಯಾದ ಪ್ರೀತಿಯ ನೆಪದಲ್ಲಿ ತನಗೆ ಹೇಗೆಲ್ಲಾ ಟಾರ್ಚರ್​ ಕೊಡುತ್ತಿದ್ದನೋ ಅದೇ ರೀತಿ ಅವಳು ಈಗ ಜಯಂತ್​ಗೆ ಮಾಡುತ್ತಿದ್ದಾಳೆ. ಗುಲಾಬಿ ಹೂವಿನ ಬೊಕ್ಕೆ ನೀಡಿ ಅದರಲ್ಲಿ ಮುಳ್ಳು ಹಾಕಿ ರಕ್ತ ಬರಿಸೋವುದರಿಂದ ಹಿಡಿದು, ಹಾಲಿನಲ್ಲಿ ಜಿರಲೆ ಹಾಕಿ ಕುಡಿಸುವವರೆಗೆ ಎಲ್ಲವನ್ನೂ ಜಯಂತ್​ಗೇ ವಾಪಸ್​ ಮಾಡುತ್ತಿದ್ದಾಳೆ ಜಾಹ್ನವಿ.</p><img><p>ಇದೀಗ ಈ ಎರಡೂ ಸೀರಿಯಲ್​ ನೋಡುಗರಿಗೆ ಸಿಕ್ಕಾಪಟ್ಟೆ ಮಜಾ ಬರ್ತಿದೆ. ಸೀರಿಯಲ್​ ವೀಕ್ಷಕರಲ್ಲಿ ಹೆಚ್ಚಿನ ವೀಕ್ಷಕರಾಗಿರುವ ಹೆಂಗಸರಿಗಂತೂ ಹಬ್ಬವೋ ಹಬ್ಬ. ಎರಡು ವಿಭಿನ್ನ ಸೀರಿಯಲ್​ಗಳ ಕ್ಲೈಮ್ಯಾಕ್ಸ್ ನೋಡಲು ತುದಿಗಾಲಿನಲ್ಲಿ ನಿಂತಿರೋದು ಪ್ರೊಮೋಗಳಿಗೆ ಬರ್ತಿವೋ ಕಮೆಂಟ್ಸ್​ ನೋಡಿಯೇ ತಿಳಿಯುತ್ತದೆ.</p>



Source link

Leave a Reply

Your email address will not be published. Required fields are marked *