
ಕಲಬುರಗಿ, (ಅಕ್ಟೋಬರ್ 28): ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನದ ವಿಚಾರವಾಗಿ ಇಂದು (ಅಕ್ಟೋಬರ್ 28) ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ಶಾಂತಿ ಸಭೆ ನಡೆದಿದ್ದು, ಈ ವೇಳೆ ಭಾರೀ ಹೈಡ್ರಾಮವೇ ನಡೆದಿದೆ. ಡಿಸಿ ಫೌಜಿಯಾ, ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದು, ಗದ್ದಲದಲ್ಲೇ ಅಂತ್ಯ. ಆರ್ ಎಸ್ ಎಸ್ ಹಾಗೂ ಭೀಮ್ ಆರ್ಮಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಆರ್ ಎಸ್ ಎಸ್ ಭಗವಾ ಧ್ವಜ ಬಿಟ್ಟು ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನದಲ್ಲಿ ಸಂವಿಧಾನ ಪೀಠ ಹಾಗೂ ಭಾರತದ ತ್ರಿವರ್ಣ ಧ್ವಜ ಹಿಡಿದರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ಇಲ್ಲ ಎಂದು ಭೀಮ್ ಆರ್ಮಿ ನಾಯಕರು ಕಡ್ಡಿ ಮುಂರಿದಂತೆ ಹೇಳಿದ್ದಾರೆ.