IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!

IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!



IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!
<p>2026ನೇ ಸಾಲಿನ IPL ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ರಣಜಿ ಟ್ರೋಫಿ ಆಡುವ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಅವರು ಐಪಿಎಲ್ ಆಡುವ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ.</p><p>&nbsp;</p><img><p>ಐಪಿಎಲ್ 2026 ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇರುವಾಗ, ಐದು ಬಾರಿಯ ಚಾಂಪಿಯನ್ ಸಿಎಸ್‌ಕೆಗೆ ಆಘಾತ ಎದುರಾಗಿದೆ. ಹರಾಜಿನಲ್ಲಿ 14.2 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಪ್ರಶಾಂತ್ ವೀರ್ ಗಂಭೀರ ಗಾಯಗೊಂಡಿದ್ದಾರೆ. ಪ್ರತಿಷ್ಠಿತ ರಣಜಿ ಟ್ರೋಫಿ ಆಡುವಾಗ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಈ ಆಲ್ರೌಂಡರ್ ಗಾಯದಿಂದ ಪಂದ್ಯದ ಮಧ್ಯದಲ್ಲೇ ಹೊರನಡೆದಿದ್ದು, ಇದು ಸಿಎಸ್‌ಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.</p><img><p>ಸಿಎಸ್‌ಕೆಯ ದುಬಾರಿ ಆಟಗಾರ ಪ್ರಶಾಂತ್ ವೀರ್, ಲಖನೌದಲ್ಲಿ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯದಲ್ಲಿ ಗಾಯಗೊಂಡರು. ಫೀಲ್ಡಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿದೆ. ಗಾಯದ ತೀವ್ರತೆಯಿಂದ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ ಗಂಭೀರ ಗಾಯದ ಬದಲಿ ನಿಯಮದಡಿ ಸ್ಪಿನ್ನರ್ ಶಿವಂ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.</p><img><p>ಪ್ರಶಾಂತ್ ವೀರ್ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರ ಬೇಕಾಗಬಹುದು. ಐಪಿಎಲ್ 2026 ಸೀಸನ್ ಮಾರ್ಚ್ 26 ರಂದು ಆರಂಭವಾಗಲಿದೆ. ಟೂರ್ನಿ ಆರಂಭಕ್ಕೆ ಸಮಯವಿರುವುದರಿಂದ ಅವರು ಫಿಟ್ ಆಗುತ್ತಾರೆಂದು ಸಿಎಸ್‌ಕೆ ಫ್ರಾಂಚೈಸಿ ನಿರೀಕ್ಷಿಸುತ್ತಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡರೇ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಂದಲೂ ಹೊರಗುಳಿಯುವ ಭೀತಿ ಎದುರಿಸುತ್ತಿದ್ದಾರೆ. 14.2 ಕೋಟಿ ರೂ.ಗೆ ಖರೀದಿಯಾದ ಈ ಆಟಗಾರನ ಮೇಲೆ ತಂಡವು ಹೆಚ್ಚಿನ ಭರವಸೆ ಇಟ್ಟಿದೆ. ಆದರೆ, ಮೂರು ವಾರಗಳ ವಿಶ್ರಾಂತಿಯ ನಂತರ ಅವರ ಫಿಟ್‌ನೆಸ್ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ.</p><img><p>ಈ ಸೀಸನ್‌ನಿಂದ ದೇಶೀಯ ಕ್ರಿಕೆಟ್‌ನಲ್ಲಿ ಗಂಭೀರ ಗಾಯದ ಬದಲಿ ನಿಯಮ ಜಾರಿಯಾಗಿದೆ. ರಣಜಿ ಇತಿಹಾಸದಲ್ಲಿ ಈ ನಿಯಮವನ್ನು ಬಳಸಿರುವುದು ಇದು ಎರಡನೇ ಬಾರಿ. ಈ ಹಿಂದೆ ಬಂಗಾಳದ ಆಟಗಾರನೊಬ್ಬ ಗಾಯಗೊಂಡಾಗ ಇದನ್ನು ಬಳಸಲಾಗಿತ್ತು.</p><img><p>ಪ್ರಶಾಂತ್ ವೀರ್ ಬದಲಿಗೆ ಬಂದ ಶಿವಂ ಶರ್ಮಾ ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದರು. ಅವರು 18.5 ಓವರ್‌ಗಳಲ್ಲಿ 66 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. &nbsp;</p><img><p>ಜಾರ್ಖಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 561/6 ಕ್ಕೆ ಡಿಕ್ಲೇರ್ ಮಾಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ಉತ್ತರ ಪ್ರದೇಶ, ದಿನದಾಟದ ಅಂತ್ಯಕ್ಕೆ 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಪ್ರಶಾಂತ್ ವೀರ್ ಅನುಪಸ್ಥಿತಿಯಲ್ಲಿ ಮಧ್ಯಪ್ರದೇಶ ತಂಡವು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.</p>



Source link

Leave a Reply

Your email address will not be published. Required fields are marked *