
ಬಿಗ್ಬಾಸ್ 12ರ ಫೈನಲ್ ಹಂತಕ್ಕೂ ಮುನ್ನ ಮಾಳು ನಿಪನಾಳ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎಲಿಮಿನೇಷನ್ ಒಂದು ಅನ್ಯಾಯ ಎಂದಿರುವ ಅವರು, ಮನೆಯಲ್ಲಿರುವ ಯಾರೊಬ್ಬರೂ ವಿನ್ನರ್ ಆಗಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.<img><p>ಬಿಗ್ಬಾಸ್ (Bigg Boss 12) ಮನೆಯಿಂದ ಮಾಳು ನಿಪನಾಳ ಅವರು ಹೊರಕ್ಕೆ ಬಂದಿದ್ದಾರೆ. ಬಿಗ್ಬಾಸ್ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಎಲಿಮಿನೇಷನ್ ಸಹಜವಾಗಿ ಎಲ್ಲರಿಗೂ ಶಾಕ್ ಕೊಡುತ್ತದೆ.</p><img><p>ಅದೇ ರೀತಿ, ಮಾಳು ಅವರಿಗೂ ಈ ಶಾಕ್ ತಡೆದುಕೊಳ್ಳಲು ಆಗುತ್ತಿಲ್ಲ. ತಾವು ಫೈನಲ್ ಸ್ಪರ್ಧಿಯಾಗಬೇಕಿತ್ತು. ನನಗೆ ಅಷ್ಟೊಂದು ಜನ ಪ್ರೀತಿ ಕೊಟ್ಟಿದ್ದಾರೆ. ಎಷ್ಟೆಲ್ಲಾ ಮಂದಿ ನನಗಾಗಿ ದುಡಿದಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ಎಲಿಮಿನೇಟ್ ಮಾಡಿರೋದು ತುಂಬಾ ಅನ್ಯಾಯ ಎಂದು ಮಾಧ್ಯಮಗಳಿಗೆ ಮಾಳು ತಿಳಿಸುತ್ತಿದ್ದಾರೆ.</p><img><p>ಈ ಸಂದರ್ಭದಲ್ಲಿ ಎಲಿಮಿನೇಟ್ ಆಗಿರುವುದಕ್ಕೆ ತುಂಬಾ ನೋವಿನಿಂದ ನುಡಿದಿರುವ ಅವರು ನಾನು ಫೈನಲಿಸ್ಟ್. ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರಂಥ ಸ್ಪರ್ಧಿಗಳನ್ನು ಅಲ್ಲಿಯೇ ಇಟ್ಟುಕೊಂಡು ನನ್ನನ್ನು ಹೊರಕ್ಕೆ ಹಾಕಿರುವುದು ಸ್ಪಲ್ಪವೂ ಸರಿಯಲ್ಲ ಎಂದು ದುಃಖಿಸಿದ್ದಾರೆ.</p><img><p>ಬಿಗ್ಬಾಸ್ ವಿನ್ನರ್ ಯಾರಾಗಬೇಕು? ಗಿಲ್ಲಿ ನಟನ ಹೆಸರು ಕೇಳಿಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಮಾಳು.</p><img><p>ಗಿಲ್ಲಿ ನಟ ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ. ಫಿಸಿಕಲ್ ಟಾಸ್ಕ್ ಎಂದು ಬಂದಾಗ ಆಟವಾಡುವುದಿಲ್ಲ. ಹಾಗೆ ನೋಡಿದರೆ ಈಗ ಮನೆಯಲ್ಲಿ ಇರುವ ಯಾರೂ ವಿನ್ನರ್ ಆಗಲು ಅರ್ಹರಲ್ಲ. ಯಾರು ಬಂದರೂ ನಾನು ಅದನ್ನು ಒಪ್ಪುವುದಿಲ್ಲ ಎಂದು ಅತಿ ಕೋಪದಿಂದ ನುಡಿದಿದ್ದಾರೆ ಮಾಳು.</p><img><p>ನನ್ನಲ್ಲಿ ಎಲ್ಲ ರೀತಿಯ ಅರ್ಹತೆ ಇದ್ದರೂ ಈ ಹಂತದಲ್ಲಿ ಎಲಿಮಿನೇಟ್ ಮಾಡಿರುವುದು ಸರಿಯಲ್ಲ. ಉತ್ತರ ಕರ್ನಾಟಕದವರನ್ನು ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ಇಡೀ ಉತ್ತರ ಕರ್ನಾಟಕ ನನ್ನ ಪರವಾಗಿ ಇತ್ತು. ವೋಟ್ ಮಾಡುತ್ತಿದ್ದರು. ಆದರೂ ನನ್ನನ್ನು ಹೊರಕ್ಕೆ ಕಳುಹಿಸಲಾಗಿದೆ. ಈಗ ಇರುವವರಲ್ಲಿ ಯಾರೂ ಅರ್ಹರಲ್ಲ ಎಂದಿದ್ದಾರೆ ಮಾಳು.</p>
Source link
Bigg Boss ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಮಾಳು ಹೇಳಿದ್ದೇನು?