Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ’ ಎಂದ ಅಭಿಷೇಕ್ | Bigg Boss Abhishek Shrikanth About Food Dispute Between Gilli And Raghu Suc

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ’ ಎಂದ ಅಭಿಷೇಕ್ | Bigg Boss Abhishek Shrikanth About Food Dispute Between Gilli And Raghu Suc


17

ಮನೆಯಿಂದ ಹೊರಕ್ಕೆ

Image Credit : Social Media

ಮನೆಯಿಂದ ಹೊರಕ್ಕೆ

ಫೈನಲ್​ ಸ್ಪರ್ಧಿಯೆಂದೇ ಬಿಂಬಿತವಾಗಿದ್ದ ಅಭಿಷೇಕ್​ ಶ್ರೀಕಾಂತ್​ (Bigg Boss Abhishek shrikanth) ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಷಿಪ್‌ ಕೊಡಲಾಗಿತ್ತು, ಎರಡನೆಯ ಬಾರಿ ಇವರು ಕ್ಯಾಪ್ಟನ್​ ಆಗಿದ್ದರು. ಆದರೆ ಇದೀಗ ಕುತೂಹಲದ ಸನ್ನಿವೇಶದಲ್ಲಿ ಹೊರಕ್ಕೆ ಬಂದಿದ್ದಾರೆ.

27

ಸೆಲೆಬ್ರಿಟಿಯಾದ ಅಭಿಷೇಕ್​

Image Credit : Social Media

ಸೆಲೆಬ್ರಿಟಿಯಾದ ಅಭಿಷೇಕ್​

ಸಹಜವಾಗಿ ಇದೀಗ ಅಭಿಷೇಕ್​ ಅವರು ಸೆಲೆಬ್ರಿಟಿಯಾಗಿದ್ದಾರೆ. ಹಾಗೆ ನೋಡಿದರೆ, ಅವರು ಇದಾಗಲೇ ಹಲವು ಸೀರಿಯಲ್​ಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದವರೇ. ಆದರೆ ಇದೀಗ ಬಿಗ್​ಬಾಸ್​ನಿಂದಾಗಿ ಇನ್ನು ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಇದೀಗ ಹಲವು ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.

37

ರಘು-ಗಿಲ್ಲಿ ಚಪಾತಿ ವಿಷ್ಯ

Image Credit : Instagram

ರಘು-ಗಿಲ್ಲಿ ಚಪಾತಿ ವಿಷ್ಯ

ಈಗ ಅವರಿಗೆ ಒಂದು ಪ್ರಶ್ನೆ ಎದುರಾಗಿದೆ. ಅದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ರಘು ಮತ್ತು ಗಿಲ್ಲಿ ನಟ ಅವರ ಆಹಾರದ ವಿಷಯವಾಗಿ. ಗಿಲ್ಲಿ ನಟ ರಘು ಬಳಿ ಬಂದು ಚಪಾತಿ ಕೇಳಿದ್ರೆ ರಘು ಕೊಡಲ್ಲ ಎಂದ್ರು, ಬಳಿಕ ರಾಶಿಕಾ ಬಂದಾಗ ಚಪಾತಿ ತಿಂದರು.

47

ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

Image Credit : Instagram

ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಇದರ ವಿಡಿಯೋ ವೈರಲ್​ ಆಗುತ್ತಲೇ ರಘು ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆಹಾರದ ವಿಷ್ಯದಲ್ಲಿ ಯಾವ ದುಷ್ಮನ್​ಗೂ ಯಾರೂ ಹೀಗೆ ಮಾಡಲ್ಲ ಎಂದೆಲ್ಲಾ ಹೇಳಲಾಗುತ್ತಿದೆ.

57

ಕ್ಲಾರಿಟಿ ಕೊಟ್ಟ ಅಭಿಷೇಕ್​

Image Credit : Social Media

ಕ್ಲಾರಿಟಿ ಕೊಟ್ಟ ಅಭಿಷೇಕ್​

ಇದೀಗ, ಈ ವಿಷಯದ ಬಗ್ಗೆ ಅಭಿಷೇಕ್​ ಅವರು ಕ್ಲಾರಿಟಿ ಕೊಟ್ಟಿದ್ದಾರೆ. ನೋಡಿ ಗಿಲ್ಲಿ ನಟನ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತು. ಅವನು ಹೇಗೆಂದ್ರೆ ಯಾರಾದ್ರೂ ತಿನ್ನುತ್ತಾ ಇದ್ದರೆ ಪದೇ ಪದೇ ಕೊಡಿ ಕೊಡಿ ಎನ್ನುತ್ತಿರುತ್ತಾನೆ. ರಘುಗೂ ಹಾಗೆಯೇ ಮಾಡಿರ್ತಾನೆ, ಸಾವಿರ ಸಲ ಕೇಳಿರ್ತಾನೆ. ಆದರೆ ಸಾವಿರ ಸಲ ಕೊಟ್ಟ ಮೇಲೆ ಯಾವಾಗ ಕೊಡಲ್ಲ ಎನ್ನುತ್ತಾನೋ, ಅದಷ್ಟು ಪ್ರಸಾರ ಆಗಿರುತ್ತೆ ಅಷ್ಟೇ ಅದರಲ್ಲಿ, ದೊಡ್ಡ ವಿಷ್ಯವೇನಿಲ್ಲ ಎಂದಿದ್ದಾರೆ.

67

ನಿಮಗೇ ಆದ್ರೆ ಏನಾಗುತ್ತೆ?

Image Credit : Social Media

ನಿಮಗೇ ಆದ್ರೆ ಏನಾಗುತ್ತೆ?

ನಿಮಗೆ ಯಾರಾದ್ರೂ ಏನಾದ್ರೂ ವಸ್ತು ಕೊಡಿ ಕೊಡಿ ಎಂದು ಪದೇ ಪದೇ ಕೇಳಿದಾಗ ಎಷ್ಟು ಬಾರಿ ಕೊಡುತ್ತೀರಿ ಹೇಳಿ, ಒಂದು ಹಂತ ಮೀರಿದಾಗ ಸಹನೆ ಕಳೆದುಕೊಳ್ತೀರಿ ತಾನೆ ಎಂದು ಪ್ರಶ್ನಿಸಿರೋ ಅಭಿಷೇಕ್​, ಗಿಲ್ಲಿ ಕೂಡ ಹಾಗೆನೇ. ಯಾರಾದ್ರೂ ಏನಾದ್ರೂ ಕೊಡಲ್ಲ ಎಂದ್ರೂ ಪದೇ ಪದೇ ಕೇಳಿದಾಗ ಕಿರಿಕಿರಿಯಾಗಿ ಒಂದು ಸಲ ಬೈದು ಕಳಿಸಿರ್ತಾರೆ ಅಷ್ಟೇ ಎಂದಿದ್ದಾರೆ.

77

ವೀಕ್ಷಕರಿಗೆ ಕಿವಿಮಾತು

Image Credit : Social Media

ವೀಕ್ಷಕರಿಗೆ ಕಿವಿಮಾತು

ಈ ಮೂಲಕ ರಘು ಆಹಾರದ ವಿಷಯದಲ್ಲಿ ಕೊಡಲ್ಲ ಎಂದಿದ್ದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅಷ್ಟೊಂದು ಅವರ ವಿರುದ್ಧ ರೇಗುವ ಅಗತ್ಯವಿಲ್ಲ ಎಂದು ಅಭಿಷೇಕ್​ ಅವರು ಸೂಕ್ಷ್ಮವಾಗಿ ವೀಕ್ಷಕರಿಗೆ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *