ನಾನೇ ಫೈನಲಿಸ್ಟ್​, ನನ್ನ ಜಾಗದಲ್ಲಿ ರಘು ಇರಬೇಕಿತ್ತು ಆದ್ರೆ… Bigg Boss ಜಾಹ್ನವಿ ಶಾಕಿಂಗ್​ ಸ್ಟೇಟ್​ಮೆಂಟ್​ | Bigg Boss Jhavi Says She Should Be The Finalist Suc

ನಾನೇ ಫೈನಲಿಸ್ಟ್​, ನನ್ನ ಜಾಗದಲ್ಲಿ ರಘು ಇರಬೇಕಿತ್ತು ಆದ್ರೆ… Bigg Boss ಜಾಹ್ನವಿ ಶಾಕಿಂಗ್​ ಸ್ಟೇಟ್​ಮೆಂಟ್​ | Bigg Boss Jhavi Says She Should Be The Finalist Suc


16

ಜಾಹ್ನವಿ ಹೊರಕ್ಕೆ

Image Credit : Asianet News

ಜಾಹ್ನವಿ ಹೊರಕ್ಕೆ

ಬಿಗ್​ಬಾಸ್​ (Bigg Boss)ನಿಂದ ಜಾಹ್ನವಿ ಹೊರಕ್ಕೆ ಬಂದಿದ್ದಾರೆ. ಆದರೆ ಇದನ್ನು ಖುದ್ದು ಅವರಿಗೂ ನಂಬಲು ಆಗುತ್ತಿಲ್ಲ. ತಾವು ಫೈನಲಿಸ್ಟ್​ ಆಗುವುದು ಖಚಿತ, ತಾವು ತುಂಬಾ ಚೆನ್ನಾಗಿ ಆಡುತ್ತಿರುವುದಾಗಿ ಅವರು ನಂಬಿದ್ದರು. ಆದರೆ ಅನ್ಯಾಯವಾಗಿ ಹೊರಕ್ಕೆ ಬಂದಿದ್ದೇನೆ ಎನ್ನುವುದು ಅವರ ಮನದ ಮಾತು.

26

ನಾನೇ ಫೈನಲಿಸ್ಟ್​

Image Credit : Social Media

ನಾನೇ ಫೈನಲಿಸ್ಟ್​

ಇದೀಗ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದು, ಎಲ್ಲಾ ಕಡೆಯಲ್ಲಿಯೂ ಅವರದ್ದು ಒಂದೇ ನೋವು, ಅದೇನೆಂದರೆ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಜೊತೆ ತಾವು ಫೈನಲಿಸ್ಟ್​ ಆಗುವುದು ಖಚಿತವಾಗಿತ್ತು. ತಮ್ಮ ಜಾಗದಲ್ಲಿ ಬೇರೆಯವರು ಇರಬೇಕಿತ್ತು, ಆದರೆ ತಾವು ಹೊರಕ್ಕೆ ಬಂದಿರುವುದು ಅಚ್ಚರಿ ಎಂದು ಹೇಳುತ್ತಿದ್ದಾರೆ.

36

ನಾನೇ ಟಾರ್ಗೆಟ್​

Image Credit : Instagram

ನಾನೇ ಟಾರ್ಗೆಟ್​

ಮೇಲೆ ತಿಳಿಸಿದ ಸ್ಪರ್ಧಿಗಳು ಬಿಟ್ಟರೆ ಯಾರೂ ಅಲ್ಲಿ ಚೆನ್ನಾಗಿ ಆಡುತ್ತಿಲ್ಲ. ನನ್ನ ಜಾಗದಲ್ಲಿ ರಘು ಇಲ್ಲವೇ ಇವರಿಷ್ಟು ಮಂದಿ ಬಿಟ್ಟು ಬೇರೆಯವರು ಇರಬೇಕಿತ್ತು. ಆದರೆ ಎಲ್ಲರನ್ನೂ ಬಚಾವ್​ ಮಾಡಿ ಕೊನೆಗೆ ನಾನು ಉಳಿದುಕೊಂಡಾಗಲೇ ಗೊತ್ತಾಯ್ತು ನಾನೇ ಟಾರ್ಗೆಟ್​ ಎಂದು ಎನ್ನುವುದಾಗಿ ಬೇಸರದಿಂದ ನುಡಿದಿದ್ದಾರೆ ಜಾಹ್ನವಿ.

46

ಸ್ಪಂದನಾ ವಿಷಯದಲ್ಲಿ ವಿವಾದ

Image Credit : Instagram

ಸ್ಪಂದನಾ ವಿಷಯದಲ್ಲಿ ವಿವಾದ

ಅಂದಹಾಗೆ ಜಾಹ್ನವಿ ಅವರು ಸ್ಪಂದನಾ ವಿಷಯದಲ್ಲಿ ಮಾತನಾಡಿ, ಸಾಕಷ್ಟು ವಿವಾದ ಸೃಷ್ಟಿಸಿಕೊಂಡಿದ್ದರು. ಅಶ್ವಿನಿ ಗೌಡ ಅವರ ಜೊತೆಗೆ ಸೇರಿ ಕೂಡ ಕೆಲವು ವಿಷಯಗಳಲ್ಲಿ ಟ್ರೋಲ್​ಗೂ ಒಳಗಾಗಿದ್ದರು. ಸ್ಪಂದನಾ ಅವರು ವಾಹಿನಿ ಕಡೆಯವರಾಗಿದ್ದರಿಂದ ಆಕೆಯನ್ನು ಹೊರಕ್ಕೆ ಕಳಿಸುತ್ತಿಲ್ಲ ಎಂದು ಹೇಳಿ ಸುದೀಪ್​ ಅವರ ಅಸಮಾಧಾನಕ್ಕೂ ಕಾರಣವಾಗಿದ್ದರು.

56

ಸುದೀಪ್​ ತಿರುಗೇಟು

Image Credit : Colors Kannada

ಸುದೀಪ್​ ತಿರುಗೇಟು

ವಾರಾಂತ್ಯದಲ್ಲಿ ಸುದೀಪ್​ ಅವರು, ನೀವು ಕೂಡ ವಾಹಿನಿಯನ್ನು ಕಾಡಿ ಬೇಡಿ ಬಿಗ್​ಬಾಸ್​​ ಒಳಗೆ ಪ್ರವೇಶಿಸಿದವರು , ನೆನಪಿರಲಿ ಎಂದು ಹೇಳುವ ಮೂಲಕ ಜಾಹ್ನವಿ ಅವರಿಗೆ ಟಾಂಗ್​ ಕೊಟ್ಟಿದ್ದರು. ಇದು ಕೂಡ ಅವರ ಎಲಿಮಿನೇಷನ್​ಗೆ ಕಾರಣವಾಗಿದ್ದಿರಬಹುದು ಎನ್ನುವುದು ಅವರ ಅಭಿಮಾನಿಗಳ ಮಾತು.

66

ಟಿಆರ್​ಪಿ ಏರಿಕೆ

Image Credit : colors kannada facebook

ಟಿಆರ್​ಪಿ ಏರಿಕೆ

ಅದೇನೇ ಇದ್ದರೂ, ಜಾಹ್ನವಿ ಟಾಪ್​ 5 ಸ್ಪರ್ಧಿಗಳಲ್ಲಿ ಇರುತ್ತಾರೆ ಎಂದು ಅಂದುಕೊಂಡವರೇ ಹೆಚ್ಚು. ಗಿಲ್ಲಿ ನಟ (Bigg Boss Gilli Nata) ತಮಾಷೆಯಿಂದಾಗಿ ಬಿಗ್​ಬಾಸ್​​ ಟಿಆರ್​ಪಿ ಏರಿಸುತ್ತಿದ್ದರೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಜಗಳದಿಂದ ಟಿಆರ್​ಪಿ ಏರಿಸುತ್ತಿದ್ದಾರೆ, ಆದ್ದರಿಂದ ಅವರು ಬೇಗನೇ ಎಲಿಮಿನೇಟ್​ ಆಗುವುದಿಲ್ಲ ಎನ್ನುವ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಕೇಳಿ ಬಂದಿದ್ದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *