
ಇಂದಿನ ಪ್ರೋಮೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.ಅಶ್ವಿನಿ ಮತ್ತು ಜಾನ್ವಿ ಅವರನ್ನು ಬಿಗ್ ಬಾಸ್ ನೇರವಾಗಿ ನಾಮಿನೇಷನ್ ಮಾಡಿರುವುದು ಒಳ್ಳೆಯದಾಯಿತು. ಯಾಕೆಂದ್ರೆ ಬಕೆಟ್ ತಂಡದ ಸದಸ್ಯರಿಗೆ. ಈಗ ಅವರದೇ ತಂಡದ ಸದಸ್ಯರನ್ನು ನಾಮಿನೇಷನ್ ಮಾಡುವ ಸಂದರ್ಭ ಒದಗಿ ಬಂದಿದೆ. ಯಾರನ್ನು ನಾಮಿನೇಷನ್ ಮಾಡ್ತಾರೆ ಮತ್ತು ಏನ್ ಕಾರಣ ಕೊಡ್ತಾರೆ ಅಂತ ನೋಡಬೇಕು ಎಂದು ಹೇಳಿದ್ದಾರೆ.
ಒಂದು ಊರಿನ ಕನ್ನಡ ಭಾಷೆ ಶೈಲಿಯ ಬಗ್ಗೆ ಅವಹೇಳನ ಮಾಡುತ್ತಿರುವ ಧ್ರುವ ವರ್ತನೆ ತುಂಬಾ ಅತಿಯಾಯಿತು. ಮಂಗಳೂರಲ್ಲಿ ಕನ್ನಡದಲ್ಲಿ ಮಾತನಾಡುವಾಗ ಎಂಥ ಗೊತ್ತುಂಟಾ ಶಬ್ದದಿಂದಲೇ ಪ್ರಾರಂಭ ಮಾಡುತ್ತಾರೆ. ಈ ವಾರ ಕಿಚ್ಚ ಸುದೀಪ್ ಇದರ ಬಗ್ಗೆ ಮಾತನಾಡುವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BBK12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು, ಮಹಿಳಾ ಆಯೋಗದಿಂದ ಬೆಂಗಳೂರು ಕಮಿಷನರ್ಗೆ ಪತ್ರ!