
<p>Bigg Boss Kannada Season 12: ಈ ವಾರ ಮನೆ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಿಕೊಳ್ಳುವುದು. ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದ ಸ್ಪರ್ಧಿಯನ್ನು ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಈಗ ಎಲ್ಲರೂ ಅಶ್ವಿನಿ ಗೌಡ ವಿರುದ್ಧ ನಿಂತಿದ್ದಾರೆ.</p><p> </p><img><p><strong>ರಿಷಾ ಗೌಡ: </strong>ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಇಲ್ಲದವರು ಅಶ್ವಿನಿ ಗೌಡ</p><p><strong>ಮ್ಯೂಟೆಂಟ್ ರಘು: </strong>ನಾನು ನಾನು ಅಂತ ಹೇಳುತ್ತಿರುತ್ತಾರೆ. ಫಸ್ಟ್ ಕ್ಯಾಪ್ಟನ್ಸಿ ಅವರಿಗೆ ಸಿಕ್ಕಿದರೆ ಡಾಮಿನೇಟ್ ಮಾಡ್ತಾರೆ.</p><p>ರಿಷಾ ಗೌಡ ಅವರು “ನಾವು ಅವರನ್ನು ಸ್ಟಾರ್ ಮಾಡೋದು ಬೇಡ” ಎಂದಿದ್ದಾರೆ.</p><img><p>ಅಶ್ವಿನಿ ಗೌಡ ಅವರು,”ರೇಸ್ನಲ್ಲಿ ಬಿಟ್ಟಿಲ್ಲ ಅಂದ್ರೆ ಕುದುರೆ ಹೇಗೆ ಓಡತ್ತೆ ಅಂತ ಗೊತ್ತಾಗುತ್ತದೆ. ತುಂಬ ಕಷ್ಟಪಟ್ಟಿದೀನಿ, ಬಿಗ್ ಬಾಸ್ ಮನೆಯಲ್ಲಿ ಅವಮಾನ ಆದಾಗ ಮರೆಯಲು ಸಾಧ್ಯವಿಲ್ಲ, ಮರೆತು ಮುಂದೆ ಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ.</p><p>ಕ್ಯಾಪ್ಟನ್ ಆದವರಿಗೆ ಒಂದು ವಾರ ಎಲಿಮಿನೇಶನ್ನಿಂದ ಇಮ್ಯುನಿಟಿ ಸಿಗುವುದು. ಹೀಗಾಗಿ ಕ್ಯಾಪ್ಟನ್ ಆಗಲು ಸ್ಪರ್ಧಿಗಳು ಹವಣಿಸುತ್ತಾರೆ.</p><img><p>ಅಶ್ವಿನಿ ಗೌಡ ಅವರ ಆಟದ ಬಗ್ಗೆ ಉಳಿದ ಸ್ಪರ್ಧಿಗಳಿಗೆ ತುಂಬ ಬೇಸರ ಇದೆ. ಎಲ್ಲ ವಿಚಾರದಲ್ಲಿಯೂ ಹೋಗಿ ಮಾತನಾಡೋದು, ಜಗಳ ಆಡೋದು, ಇನ್ನು ರಕ್ಷಿತಾ ಶೆಟ್ಟಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿರೋದು ವೀಕ್ಷಕರಿಗೂ ಕೂಡ ಬೇಸರ ತಂದಿದೆ.</p><img><p>ರಕ್ಷಿತಾ ಶೆಟ್ಟಿಗೆ ಬೈದಿದ್ದಕ್ಕೆ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಅವರು ಕಿವಿ ಹಿಂಡಿದ್ದರು, ಅದಾದಮೇಲೆ ಕೂಡ ಅವರು ಬದಲಾಗಿಲ್ಲ ಎಂದು ವೀಕ್ಷಕರು ಕೂಡ ಹೇಳಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇರುತ್ತವೆ, ವಾದ-ಪ್ರತಿವಾದಗಳು ನಡೆಯುತ್ತಿರುತ್ತವೆ.</p><img><p>ಮ್ಯೂಟೆಂಟ್ ರಘು, ರಿಷಾ, ಸೂರಜ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಈಗ ಆಟದ ರೀತಿ ನೀತಿಯೇ ಬದಲಾದಂತಿದೆ.</p>
Source link
BBK 12: ಅಶ್ವಿನಿ ಗೌಡಗೆ ಮತ್ತೊಂದು ಅವಮಾನ; ಇದನ್ನು ಎಂದಿಗೂ ಮರೆಯೋಕಾಗಲ್ಲ ಎಂದು ಕಣ್ಣೀರು ಹಾಕಿದ ನಟಿ