Headlines

BBK 12: ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ; ಎಂಥ ಮನುಷ್ಯ? ಗಿಲ್ಲಿ ನಟ ಅಸಲಿಯತ್ತು ಬಿಚ್ಚಿಟ್ಟ ಅಶ್ವಿನಿ ಗೌಡ | Bigg Boss Kannada Season 12 Ashwini Gowda On Gilli Nata Comedy In Funeral

BBK 12: ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ; ಎಂಥ ಮನುಷ್ಯ? ಗಿಲ್ಲಿ ನಟ ಅಸಲಿಯತ್ತು ಬಿಚ್ಚಿಟ್ಟ ಅಶ್ವಿನಿ ಗೌಡ | Bigg Boss Kannada Season 12 Ashwini Gowda On Gilli Nata Comedy In Funeral


15

ತೇಜೋವಧೆ ಮಾಡೋದು ಸರಿಯೇ?

Image Credit : colors kannada facebook

ತೇಜೋವಧೆ ಮಾಡೋದು ಸರಿಯೇ?

ಆಟದ ವಿಚಾರಕ್ಕೆ, ಕಾಮಿಡಿ ವಿಚಾರಕ್ಕೆ ಗಿಲ್ಲಿ ನಟನನ್ನು ಧನುಷ್‌, ಧ್ರುವಂತ್‌, ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ ಶೆಟ್ಟಿ, ರಿಷಾ ಗೌಡ, ಅಭಿಷೇಕ್‌ ಶ್ರೀಕಾಂತ್ ಅವರು ಕೂಡ ವಿರೋಧಿಸಿದ್ದರು. ಗಿಲ್ಲಿ ಕಾಮಿಡಿ ಕಾವ್ಯ ಶೈವಗೂ ಬೇಸರ ತಂದಿತ್ತು. ಬೇರೆಯವರನ್ನು ತೇಜೊವಧೆ ಮಾಡಿ ಮಾಡ್ತಾರೆ ಎಂಬ ಆರೋಪ ಇತ್ತು. 

25

ಸಾಯುತ್ತಿದ್ದರೂ ನೀರು ಕೊಡಲ್ಲ

Image Credit : colors kannada facebook

ಸಾಯುತ್ತಿದ್ದರೂ ನೀರು ಕೊಡಲ್ಲ

“ಯಾರಾದರೂ ಪಕ್ಕದಲ್ಲಿ ಸಾಯುತ್ತಿದ್ದರೆ, ಗಿಲ್ಲಿ ನಟ ಒಂದು ಗ್ಲಾಸ್‌ ನೀರು ಕೊಡಲ್ಲ. ಸಾವಿನ ಮನೆಯಲ್ಲಿಯೂ ತಮಾಷೆ ಮಾಡುತ್ತಾನೆ” ಎಂದು ಧ್ರುವಂತ್‌ ಹೇಳಿದ್ದಾರೆ. “ಅಜ್ಜಿ ತೀರಿಕೊಂಡಾಗ ನಗುತ್ತಿದ್ದೆ ಎಂದು ಗಿಲ್ಲಿಯೇ ಹೇಳಿದ್ದಾನೆ. ಅವನಿಗೆ ಮಾನವೀಯತೆ ಇಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

35

“ಗಿಲ್ಲಿ ನನಗೆ ಕ್ಷಮೆ ಕೇಳಿಲ್ಲ

Image Credit : colors kannada facebook

“ಗಿಲ್ಲಿ ನನಗೆ ಕ್ಷಮೆ ಕೇಳಿಲ್ಲ

ಟಾಸ್ಕ್‌ ನಂತರ ಅಭಿಷೇಕ್‌, ಸ್ಪಂದನಾ ಸೋಮಣ್ಣ ಮಾತನಾಡಿಕೊಂಡಿದ್ದಾರೆ.

“ಗಿಲ್ಲಿ ನನಗೆ ಕ್ಷಮೆ ಕೇಳಿಲ್ಲ. ಅಶ್ವಿನಿ ಗೌಡ ಜೊತೆ ಗಿಲ್ಲಿ ಕೆಟ್ಟದಾಗಿ ಮಾತನಾಡಿದ. ಆರಂಭದಲ್ಲಿ ಜಗಳ ಶುರು ಮಾಡಿದ್ದೇ ಅಶ್ವಿನಿ. ನನ್ನ ತಾಯಿಗೆ ಹೀಗೆ ಯಾರಾದರೂ ಮಾಡಿದರೆ ನಾನು ಸುಮ್ಮನೆ ಇರುತ್ತಿದ್ದೆ? ಅಶ್ವಿನಿ ಅವರಿಗೆ ಹೀಗೆ ಆಯ್ತು ಅಂತ ಟಿವಿಯಲ್ಲಿ ಅವರ ಮನೆಯವರು ನೋಡಿದಾಗ, ಯಾರೂ ಸಪೋರ್ಟ್‌ ಮಾಡಿಲ್ಲ ಅಂದಾಗ ಏನಾಗುತ್ತದೆ? ಹೀಗಾಗಿ ನಾನು ಈ ಥರ ಮಾತಾಡಬೇಡ ಎಂದು ಹೇಳಿದೆ” ಎಂದು ಅಭಿಷೇಕ್‌ ಹೇಳಿದ್ದಾರೆ.

45

ಅಭಿಷೇಕ್‌ ಹೇಳಿದ್ದೇನು?

Image Credit : colors kannada facebook

ಅಭಿಷೇಕ್‌ ಹೇಳಿದ್ದೇನು?

“ರಘು, ರಕ್ಷಿತಾ, ಕಾವ್ಯ ಬಿಟ್ಟು ಎಲ್ಲರನ್ನು ಕಾಲೆಳೆಯುತ್ತಾನೆ, ಕಾಮಿಡಿ ಮಾಡುತ್ತಾನೆ. ಇದನ್ನು ಬಿಟ್ಟು ಬೇರೆ ಇಲ್ಲ” ಎಂದು ಅಭಿಷೇಕ್‌ ಹೇಳಿದ್ದಾರೆ. ಅಭಿಷೇಕ್‌ಗೂ, ಗಿಲ್ಲಿಗೂ ಮನಸ್ತಾಪ ಆಗಿದ್ದೂ ಇದೆ, ವಾದ-ವಿವಾದ ಆಗಿದ್ದೂ ಇದೆ.

55

ಗಿಲ್ಲಿ ಕಾಮಿಡಿ ಜಾಸ್ತಿ ಆಯ್ತಾ?

Image Credit : colors kannada facebook

ಗಿಲ್ಲಿ ಕಾಮಿಡಿ ಜಾಸ್ತಿ ಆಯ್ತಾ?

ಗಿಲ್ಲಿ ಕಾಮಿಡಿ ವೀಕ್ಷಕರ ಮನಸ್ಸು ಗೆದ್ದಿದೆ. ಈಗ ಗಿಲ್ಲಿ ಕಾಮಿಡಿ ಅತಿರೇಕ ಆಗಿದೆ ಎನ್ನೋದು ಎಲ್ಲರ ಕಂಪ್ಲೆಂಟ್‌ ಆಗಿದೆ. ಟಾಸ್ಕ್‌ ವಿಚಾರವಾಗಿ ಉಸ್ತುವಾರಿಗಳಾದ ಗಿಲ್ಲಿ ನಟ, ಅಶ್ವಿನಿ ಗೌಡ ಮಧ್ಯೆ ಜಗಳ ಆಯ್ತು. ಗಿಲ್ಲಿ ನಟ ಹೀಗೆಲ್ಲ ಮಾತಾಡಿದ್ರು ಎಂದು ಅಶ್ವಿನಿ ಅವರು ಅತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *