BBK 12: ಕಿಚ್ಚ ಸುದೀಪ್‌ ಮುಂದೆ ರಜತ್‌ ಬೆಂಡೆತ್ತಿದ ಅಶ್ವಿನಿ ಗೌಡ; ವೀಕ್ಷಕರಿಂದ ಭಾರೀ ಮೆಚ್ಚುಗೆ | Bigg Boss Kannada Season 12 Ashwini Gowda Reveals Rajath Language

BBK 12: ಕಿಚ್ಚ ಸುದೀಪ್‌ ಮುಂದೆ ರಜತ್‌ ಬೆಂಡೆತ್ತಿದ ಅಶ್ವಿನಿ ಗೌಡ; ವೀಕ್ಷಕರಿಂದ ಭಾರೀ ಮೆಚ್ಚುಗೆ | Bigg Boss Kannada Season 12 Ashwini Gowda Reveals Rajath Language


16

ವಾದ ವಿವಾದ ಶುರುವಾಗಿದ್ದೆಲ್ಲಿ?

Image Credit : colors kannada

ವಾದ-ವಿವಾದ ಶುರುವಾಗಿದ್ದೆಲ್ಲಿ?

ಸೂರಜ್‌ ಹಾಗೂ ರಾಶಿಕಾ ಶೆಟ್ಟಿ ನಡುವೆ ಮನಸ್ತಾಪ ಬಂದಿತ್ತು. ಇದರ ಮಧ್ಯೆ ಜಗಳ ಬರಬಾರದು ಎಂದು ಅಶ್ವಿನಿ ಗೌಡ ಮಾತನಾಡಲು ಹೋದರು. ಇದನ್ನು ರಜತ್‌ ಅವರು ತಡೆಯಲು ನೋಡಿದರು. ಸೂರಜ್-ರಾಶಿಕಾ ಅವರೇ ಮನಸ್ತಾಪ ಬಗೆಹರಿಸಿಕೊಳ್ಳಲಿ, ಬೇರೆಯುವರು ಬೇಡ ಎನ್ನೋದು ರಜತ್‌ ಉದ್ದೇಶವಾಗಿತ್ತು. ಆದರೆ ಅಶ್ವಿನಿ ಮಧ್ಯೆ ಬಂದರು. ಇದನ್ನೇ ಅವರು ಸುದೀಪ್‌ ಬಳಿ ಹೇಳಿದರು. ಆಗ ಅಶ್ವಿನಿ ಗೌಡ ಮಾತನಾಡಿದ್ದಾರೆ.

26

ಸ್ಟುಪಿಡ್‌ ಆಗಿ ಮಾತಾಡ್ತಿದ್ದಾರೆ

Image Credit : colors kannada

ಸ್ಟುಪಿಡ್‌ ಆಗಿ ಮಾತಾಡ್ತಿದ್ದಾರೆ

“ರಜತ್‌ ಅವರು ಯಾಕೆ ಇಷ್ಟೊಂದು ಸ್ಟುಪಿಡ್‌ ಆಗಿ ಮಾತಾಡ್ತಿದ್ದಾರೆ ಅರ್ಥವೇ ಆಗ್ತಿಲ್ಲ. ರಾಶಿಕಾ-ಜಗಳದಲ್ಲಿ ನನ್ನ ಪಾತ್ರ ಇಲ್ಲ, ಕಾರಣವೂ ಗೊತ್ತಿಲ್ಲ. ನನ್ನ ಟೀಂನಿಂದ ಸೂರಜ್‌ ಆಡುತ್ತಾರೆ, ಉಸ್ತುವಾರಿ ಸರಿಯಾಗಿ ಕೆಲಸ ಮಾಡಿಲ್ಲ. ನನ್ನ ಟೀಂನಿಂದ ಆಡಿದ ಸೂರಜ್‌ ಸೋಲುತ್ತಾರೆ ಎಂದು ನಾನು ಮಾತನಾಡಿದೆ” ಎಂದು ಹೇಳಿದ್ದಾರೆ.

36

ರಜತ್‌ರಿಂದ ಇದೆಲ್ಲ ನಡೆಯುತ್ತಿದೆ

Image Credit : colors kannada

ರಜತ್‌ರಿಂದ ಇದೆಲ್ಲ ನಡೆಯುತ್ತಿದೆ

“ಕಿವಿ ಊದೋದು, ಪಿತೂರಿ ಮಾಡೋದು ಎಲ್ಲವೂ ಇವರು ಬಂದಮೇಲೆ ನಡೆಯುತ್ತಿದೆ. ಇನ್ಮುಂದೆ ನನ್ನ ತಂಟೆಗೆ ಬರಬಾರದು. ನಾನು ಆ ರಾತ್ರಿಯೇ ಆ ಟಾಸ್ಕ್‌ ವಿಚಾರ ಬಿಟ್ಟೆ. ರಾಶಿಕಾ ಕ್ಯಾಪ್ಟನ್‌ ಆಗಿರೋದು ಖುಷಿಯಾಗಿದೆ, ಆದರೆ ಉಸ್ತುವಾರಿ ಮಾಡಿದ್ದು ಸರಿ ಅನಿಸಲಿಲ್ಲ” ಎಂದು ಹೇಳಿದ್ದಾರೆ.

46

ಮುದುಕಿಯನ್ನು ಹೊಡಿತೀನಿ ಅಂತಾರೆ

Image Credit : colors kannada

ಮುದುಕಿಯನ್ನು ಹೊಡಿತೀನಿ ಅಂತಾರೆ

ಎಲ್ಲಿಂದ ಅಶ್ವಿನಿ ವಿಚಾರ ಬರ್ತಿದೆ ಎನ್ನೋದು ಗೊತ್ತಾಗ್ತಿಲ್ಲ. ಅವರ ತಾಯಿ ವಯಸ್ಸೇನು? ಮುದುಕಿಯನ್ನು ಹೊಡಿತೀನಿ ಅಂತಾರೆ. ನನ್ನ ವಯಸ್ಸೇನು? ಅವರ ವಯಸ್ಸೇನು? ರಜತ್‌ ಅವರು ನನ್ನ ಹಿಟ್‌ ಲಿಸ್ಟ್‌ನಲ್ಲೇ ಇಲ್ಲ. ಇವರ ಮನೆಯಲ್ಲಿ ಅಕ್ಕ-ತಂಗಿ ಇರುತ್ತಾರೆ ಅಲ್ವಾ? ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

56

ಈ ಥರ ಕಳಪೆ ಯಾರೂ ಇಲ್ಲ

Image Credit : colors kannada

ಈ ಥರ ಕಳಪೆ ಯಾರೂ ಇಲ್ಲ

“ಹೆಣ್ಣು ಮಕ್ಕಳ ಬಗ್ಗೆ ರಜತ್‌ ಅವರು ನಡೆದುಕೊಳ್ಳುವ ರೀತಿ ಸರಿ ಇಲ್ಲ. ರಜತ್‌ ಅವರಂತಹ ಕಳಪೆ ಈ ಮನೆಯಲ್ಲಿ ಯಾರೂ ಕೂಡ ಇಲ್ಲ. ಇವರನ್ನು ಈ ಮನೆಗೆ ಸ್ಪರ್ಧಿ ಎಂದು ಕಳುಹಿಸಿದ್ದಾರೋ ಅಥವಾ ಬೇರೆ ಯಾವುದೋ ಎಲಿಮೆಂಟ್‌ ಎನ್ನೋದು ನನಗೆ ಗೊತ್ತಾಗಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

66

ಬುದ್ಧಿ ಹೇಳಿದ್ರು

Image Credit : colors kannada

ಬುದ್ಧಿ ಹೇಳಿದ್ರು

ಆಮೇಲೆ ಕಿಚ್ಚ ಸುದೀಪ್‌ ಅವರು, “ನೀವು ನನ್ನ ಮುಂದೆ ರಜತ್‌ಗೆ ಸ್ಟುಪ್ಪಿಡ್‌ ಎಂದು ಕರೆದಿರಿ. ಇದು ಸರಿ ಅಲ್ಲ. ಇಡೀ ವಾರ ನೀವು ಏನೂ ಬೇಕಿದ್ರೂ ಜಗಳ ಆಡ್ತೀರಿ. ನನ್ನ ಮುಂದೆ ಈ ಮಾತು ಬೇಡ” ಎಂದು ಬುದ್ಧಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *