
<p>ಸೆಪ್ಟೆಂಬರ್ 22ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ( BBK 12 ) ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯ ಶೋ ಇದಾಗಿದೆ. ಹಾಗಾದರೆ ಯಾರೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ? ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್ನಲ್ಲಿ ಏನಿದೆ? </p><img><p>ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸ್ವಾತಿ ಈ ಬಾರಿ ಬಿಗ್ ಬಾಸ್ ಶೋಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಸ್ವಾತಿ ಶೋನಲ್ಲಿ ಭಾಗವಹಿಸೋದು ಡೌಟ್ ಎನ್ನಲಾಗುತ್ತಿದೆ. </p><img><p>ಸತ್ಯ ಧಾರಾವಾಹಿಯಲ್ಲಿ ನಟಿಸಿರುವ ಸಾಗರ್ ಬಿಳಿಗೌಡ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. ಅಂದಹಾಗೆ ಹೋಟೆಲ್ ಬ್ಯುಸಿನೆಸ್ ಮಾಡುತ್ತಿರುವ ಸಾಗರ್ ಮಿನಿ ಸಿರೀಸ್ಗಳಲ್ಲಿ ಕಾಣಿಸುತ್ತಿದ್ದಾರೆ. </p><img><p>ಧರ್ಮಸ್ಥಳದ ಕುರಿತು ವಿಡಿಯೋ ಮಾಡಿ ದೊಡ್ಡ ಸಂಚಲನ ಮೂಡಿಸಿರುವ ಎಂಡಿ ಸಮೀರ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ. ಸದ್ಯ ಪೊಲೀಸ್ ತನಿಖೆಯಲ್ಲಿ ಭಾಗಿ ಆಗ್ತಿರೋ ಇವರು ದೊಡ್ಮನೆಗೆ ಹೋಗೋದು ಡೌಟ್ ಎನ್ನಬಹುದು. </p><img><p>ಸುದ್ದಿ ನಿರೂಪಕಿಯಾಗಿದ್ದು, ಕೆಲ ಶೋಗಳಲ್ಲಿ ಭಾಗವಹಿಸಿರುವ ದಿವ್ಯಾ ವಸಂತ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗ್ತಿದೆ. </p><img><p>ಕನ್ನಡದ ಪ್ರಖ್ಯಾತ ಯುಟ್ಯೂಬರ್ ಡಾ ಬ್ರೋ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನುವ ವದಂತಿ ಈ ಬಾರಿ ಜೋರಾಗಿ ಕೇಳಿ ಬರುತ್ತಿದೆ. </p><img><p>ಕಳೆದ ಕೆಲ ಸೀಸನ್ಗಳಿಂದಲೂ ಶ್ವೇತಾ ಪ್ರಸಾದ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ. ಆದರೆ ಆ ವದಂತಿಗಳು ನಿಜವಾಗಿಲ್ಲ. ಈ ಬಾರಿ ಬರ್ತಾರಾ ಎಂದು ಕಾದು ನೋಡೋಣ. </p><img><p>ಮುದ್ದುಸೊಸೆ ಧಾರಾವಾಹಿಯನ್ನು ನಿರ್ಮಾಣ ಮಾಡಿರುವ ನಟಿ ಮೇಘಾ ಶೆಟ್ಟಿ ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಇದು ನಿಜ ಆಗಲಿದೆಯೋ ಏನೋ! </p><img><p>ಬೃಂದಾವನ ಧಾರಾವಾಹಿ ನಟಿ, ಯುಟ್ಯೂಬರ್ ವರುಣ್ ಆರಾಧ್ಯ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ. </p><img><p>ಕನ್ನಡದ ಕಾಮಿಡಿ ಶೋ ಸೇರಿದಂತೆ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಲಿರುವ ದೀಪಿಕಾ ಗೌಡ ಈ ಬಾರಿ ಬಿಗ್ ಬಾಸ್ ಶೋಗೆ ಬರ್ತಾರಾ?</p><img><p>ಗೀತಾ, ನೂರು ಜನ್ಮಕೂ ಧಾರಾವಾಹಿ ಖ್ಯಾತಿಯ ಧನುಷ್ ಗೌಡ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರಾ?</p><img><p>ಅಮೃತಾ ರಾಮಮೂರ್ತಿ ಅವರು ಸದ್ಯ ಆಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು ದೊಡ್ಮನೆ ಪ್ರವೇಶ ಮಾಡ್ತಾರೆ ಎನ್ನಲಾಗ್ತಿದೆ. </p><img><p>ಕನ್ನಡ, ತೆಲುಗು ಸಿನಿಮಾ ಸೇರಿದಂತೆ ಕಿರುಚಿತ್ರಗಳಲ್ಲಿ ನಟಿಸುತ್ತಿರುವ ಪಾಯಲ್ ಚೆಂಗಪ್ಪ ಕೂಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಬರ್ತಾರೆ ಎನ್ನಲಾಗ್ತಿದೆ. </p><img><p>ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಅರವಿಂದ್ ರತನ್ ಕೂಡ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. </p>
Source link
Bigg Boss Kannada 12 ಮನೆಗೆ ಹೋಗೋ ಸ್ಪರ್ಧಿಗಳ ಲಿಸ್ಟ್ ಲೀಕ್! ಖ್ಯಾತ ಜ್ಯೋತಿಷಿಯೂ ಹೋಗ್ತಾರಂತೆ