BBK 12: ವ್ಯಂಗ್ಯ ಮಾಡಿದ ರಜತ್‌, ಚೈತ್ರಾ ಕುಂದಾಪುರಗೆ ಸುದೀಪ್‌ ಮುಂದೆ ಬಿಸಿ ಬಿಸಿ ಬಹುಮಾನ ಕೊಟ್ಟ ಗಿಲ್ಲಿ ನಟ | Bigg Boss Kannada Season 12 Gilli Nata Counter Attack Rajath Chaitra Kundapura

BBK 12: ವ್ಯಂಗ್ಯ ಮಾಡಿದ ರಜತ್‌, ಚೈತ್ರಾ ಕುಂದಾಪುರಗೆ ಸುದೀಪ್‌ ಮುಂದೆ ಬಿಸಿ ಬಿಸಿ ಬಹುಮಾನ ಕೊಟ್ಟ ಗಿಲ್ಲಿ ನಟ | Bigg Boss Kannada Season 12 Gilli Nata Counter Attack Rajath Chaitra Kundapura


15

ಹೊಸ ಪ್ರೋಮೋ ರಿಲೀಸ್‌

Image Credit : colors kannada

ಹೊಸ ಪ್ರೋಮೋ ರಿಲೀಸ್‌

ಕಿಚ್ಚ ಸುದೀಪ್‌ ಅವರು ರಜತ್‌ಗೆ ಗಿಲ್ಲಿ ನಟನ ಮನೆಗೆ ಫೋನ್‌ ಮಾಡಿ ಮಾತನಾಡಿ ಎಂದಿದ್ದಾರೆ. ಆಮೇಲೆ ಗಿಲ್ಲಿಗೂ ಮಾತನಾಡಿ ಎಂದು ಹೇಳಿದ್ದರು. ಅದರಂತೆ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ಮನೆಯವರ ಜೊತೆ ಮಾತನಾಡಿದ್ದರು. ಈಗ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದೆ.

25

ರಜತ್‌, ಗಿಲ್ಲಿ ಮಧ್ಯೆ ನಡೆದ ಸಂಭಾಷಣೆ ಏನು?

Image Credit : colors kannada

ರಜತ್‌, ಗಿಲ್ಲಿ ಮಧ್ಯೆ ನಡೆದ ಸಂಭಾಷಣೆ ಏನು?

ರಜತ್: ಗಿಲ್ಲಿ ಆಡು ಅಂದರೆ ಯಾವಾಗಲೂ ಮಾತಾಡ್ತಾನೆ.‌ ಆಟ ಯಾವಾಗಲೋ ಆಡ್ತೀಯಾ? ಆಮೇಲೆ ಮಾತನಾಡಬಹುದು. ಆದರೆ ಗಿಲ್ಲಿ ಬರೀ ಮಾತನಾಡುತ್ತಾನೆ

ಗಿಲ್ಲಿ ನಟ: ಬರುವಾಗ ಸಖತ್‌ ಮಾಸ್‌ ಆಗಿ ಬಂದ್ರು, ಈಗ ಠುಸ್‌ ಆಗಿದ್ದಾರೆ. ಗೇಮ್‌ ಅಲ್ಲಿ ತೋರಸ್ತೀನಿ ಅಂತ ಅಂದ್ರು, ನಾನು ಗೇಮ್‌ ಅಲ್ಲಿ ತೂರಸ್ತೀನಿ

35

ಚೈತ್ರಾ ಕುಂದಾಪುರ, ಗಿಲ್ಲಿ ಮಧ್ಯೆ ಏನು ನಡೀತು?

Image Credit : colors kannada

ಚೈತ್ರಾ ಕುಂದಾಪುರ, ಗಿಲ್ಲಿ ಮಧ್ಯೆ ಏನು ನಡೀತು?

ಚೈತ್ರಾ ಕುಂದಾಪುರ: ನಾಲ್ಕು ದಿನ ಏನು ಮಾಡೋದು ಅಂತ ಟೆನ್ಶನ್‌ ಅಲ್ಲಿ ಪೂರ್ತಿ ಸೈಲೆಂಟ್ ಕೂತಿದ್ದಾನೆ.‌

ಗಿಲ್ಲಿ ನಟ: ನಾನು ಮಾತಾನಾಡದೆ ಕೂತಿಲ್ಲ, ಆದರೆ ನಾನು ಮಾತಾಡಿದ್ರೆ ಅವರು ಹೊರಗಡೆ ಹೋಗ್ತಾರೆ ಅಂತ ಕೂತಿದೀನಿ.

45

ಗಿಲ್ಲಿ ನಟ ಇರಿಟೇಟ್‌ ಅಂತೆ

Image Credit : colors kannada

ಗಿಲ್ಲಿ ನಟ ಇರಿಟೇಟ್‌ ಅಂತೆ

ಹೊರಗಡೆ ನಾನು ನಿನ್ನನ್ನು ಇಷ್ಟಪಟ್ಟಿದ್ದೆ, ಆದರೆ ನೀನು ಸಿಕ್ಕಾಪಟ್ಟೆ ಇರಿಟೇಟ್‌. ಇವರೆಲ್ಲ ಹೇಗೆ ತಡ್ಕೊಳ್ತಾರೆ? ಎಷ್ಟು ಅಂತ ಇರಿಟೇಟ್‌ ಮಾಡ್ತೀಯಾ? ನಾನು ಹೇಗೆ ಅಂತ ನಿನಗೆ ಗೊತ್ತಿಲ್ಲ, ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ಮನೆಯಲ್ಲಿದ್ದವರಿಗೆ ನಾನು ತಾಯತ ಕಟ್ಟಿಸಿದ್ದೆ ಎಂದು ರಜತ್‌ ಅವರು ಗಿಲ್ಲಿಗೆ ಅವಾಜ್‌ ಹಾಕಿದ್ದರು.

55

ಗಿಲ್ಲಿ ನಟನ ಆಟ ಬದಲಾಗತ್ತಾ?

Image Credit : colors kannada

ಗಿಲ್ಲಿ ನಟನ ಆಟ ಬದಲಾಗತ್ತಾ?

ಚೈತ್ರಾ ಕುಂದಾಪುರ ಕೂಡ ರೆಸಾರ್ಟ್‌ ಟಾಸ್ಕ್‌ ವೇಳೆ ಗಿಲ್ಲಿ ನಟನಿಗೆ ಒಂದಿಷ್ಟು ಕೆಲಸ ಕೊಟ್ಟಿದ್ದರು. ಆದರೆ ಗಿಲ್ಲಿ ಗೊತ್ತಲ್ವಾ? ಯಾರನ್ನೂ ಬಿಡದೆ ಕೌಂಟರ್‌ ಕೊಡುತ್ತಿದ್ದಾರೆ. ವೈಲ್ಡ್‌ಕಾರ್ಡ್‌ ಸ್ಪರ್ಧಿಗಳ ಜೊತೆ ಗಿಲ್ಲಿ ನಟನ ಆಟ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *