Headlines

BBK 12: ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ? ಸಾಕ್ಷಿ ಸಮೇತ ರಘು ಬಿಚ್ಚಿಟ್ರು ಕಾರಣ! | Bigg Boss Kannada Season 12 Gilli Nata Do Not Wear Costly Dress In House Why

BBK 12: ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ? ಸಾಕ್ಷಿ ಸಮೇತ ರಘು ಬಿಚ್ಚಿಟ್ರು ಕಾರಣ! | Bigg Boss Kannada Season 12 Gilli Nata Do Not Wear Costly Dress In House Why


15

ಪ್ರಶ್ನೆ ಮಾಡಿದ ರಘು, ಮಂಜು

Image Credit : instagram

ಪ್ರಶ್ನೆ ಮಾಡಿದ ರಘು, ಮಂಜು

ಮ್ಯಾಕ್ಸ್‌ ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ನೋಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿ ಬಟ್ಟೆ ಇದ್ದರೂ ಕೂಡ ಹಾಕಿಕೊಳ್ತಿಲ್ಲ ಎಂದು ಮಂಜು ಅವರು ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಮಂಜು ಅವರ ಬಾಸ್ಕೆಟ್‌ನಲ್ಲಿರುವ ಬಟ್ಟೆ, ಶೂಗಳನ್ನು ಹೊರಗಡೆ ತೆಗೆದು ತೋರಿಸಿದ್ದಾರೆ. 

25

 50000 ರೂಪಾಯಿ ಬಟ್ಟೆ ಕಳಿಸಿದ್ದಾರೆ

Image Credit : instagram

50000 ರೂಪಾಯಿ ಬಟ್ಟೆ ಕಳಿಸಿದ್ದಾರೆ

ಅಮಾಯಕ, ಬಡವ ಎಂದು ಮ್ಯಾಕ್ಸ್‌ ಮಂಜು, ಧ್ರುವಂತ್‌ ಹೇಳಿದ್ದಾರೆ. ಇಲ್ಲಿ ನೋಡಿ ಎಂದು ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ತೆಗೆದು ಎಲ್ಲರಿಗೆ ತೋರಿಸಿದ್ದಾರೆ. 30 ರೂಪಾಯಿ ಚಡ್ಡಿ ಹಾಕಿಕೊಂಡು ಓಡಾಡ್ತಿದ್ದೀಯಾ, ಬನಿಯನ್‌ ಹಾಕಿಕೊಂಡು ತಿರುಗಾಡುತ್ತಿದ್ದೀಯಾ ಎಂದು ಮಂಜು ಕೂಗಾಡಿದ್ದಾರೆ. ರಘು ಅವರು 50000 ರೂಪಾಯಿ ಬಟ್ಟೆ ಕಳಿಸಿದ್ದಾರೆ ಎಂದಿದ್ದಾರೆ. ಬಟ್ಟೆ ಹಾಕಿದರೆ ದೃಷ್ಟಿ ಆಗುತ್ತದೆ ಎಂದು ಮಂಜು ಹೇಳಿದ್ದಾರೆ.

35

ಡ್ರಾಯರ್‌ ಒಳಗಡೆ ಹಾಕಿದ ರಘು

Image Credit : instagram

ಡ್ರಾಯರ್‌ ಒಳಗಡೆ ಹಾಕಿದ ರಘು

ಪ್ರೀತಿಯಿಂದ ಕಳಿಸಿದ್ದಾರೆ, ಆದರೆ ನೀನು ಹಾಕಿಕೊಳ್ತಿಲ್ಲ. ಚಿಕ್ಕಪೇಟೆಯಲ್ಲಿ ಸೆಕೆಂಡ್ಸ್‌ಗೆ ಮಾರುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ರಘು, ಮಂಜು ಅವರು ಬಟ್ಟೆಯನ್ನು ತಗೊಂಡು ಡ್ರಾಯರ್‌ ಒಳಗಡೆ ಹಾಕಿದ್ದಾರೆ.

45

ಬಟ್ಟೆ ಕೊಟ್ರೆ ರಿಪೀಟ್‌ ಹಾಕುವೆ

Image Credit : instagram

ಬಟ್ಟೆ ಕೊಟ್ರೆ ರಿಪೀಟ್‌ ಹಾಕುವೆ

ನನ್ನ ಹತ್ರ ಬಟ್ಟೆ ಇಲ್ಲ, ಅದನ್ನೇ ರಿಪೀಟ್‌ ಹಾಕುತ್ತಿದ್ದೇನೆ, ನನಗೆ ಬಟ್ಟೆ ಕೊಟ್ಟರೆ ದಿನಕ್ಕೊಂದು ಹಾಕುವೆ ಎಂದು ಮಾಳು ನಿಪನಾಳ ಅವರು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೆ ರಿಪೀಟ್‌ ಹಾಕೋದಿಲ್ಲ. ಡಿಸೈನರ್ಸ್‌ಗಳು ಅವರಿಗೆ ಪ್ರತಿ ವಾರ ಬಟ್ಟೆ ಕಳಿಸುತ್ತಾರೆ. 

55

ರಘುಗೆ ಬೇಸರ ಆಗಿದ್ಯಾಕೆ?

Image Credit : instagram

ರಘುಗೆ ಬೇಸರ ಆಗಿದ್ಯಾಕೆ?

ಎರಡು ವಾರಗಳಿಂದ ಬಟ್ಟೆಗಳನ್ನು ಕಳಿಸುತ್ತಿದ್ದಾರೆ. ಬಟ್ಟೆ ಕಳಿಸಲಿಲ್ಲ ಎಂದಾಗ ನಾವೆಲ್ಲ ಕೊಟ್ಟೆವು, ಈಗ ಬಟ್ಟೆ ಕೊಟ್ಟಿದೀವಿ, ಕ್ಯಾಮರಾ ಮುಂದೆ ಚೆನ್ನಾಗಿ ಕಾಣಿಸಿಕೋ ಎಂದು ಹೇಳಿದೆವು, ಆದರೆ ಕೇಳುತ್ತಿಲ್ಲ. ಇವತ್ತು ಹೇಳಿದೆ, ಇನ್ಮುಂದೆ ಬಟ್ಟೆ ಆದರೂ ಹಾಕಿಕೊಳ್ಳಲಿ, ಅಥವಾ ಬಿಡಲಿ ಎಂದು ರಘು ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *